ಮೃದುವಾದ ರಾಗಿ ಮುದ್ದೆ ಮಾಡುವ ಸುಲಭ ವಿಧಾನ ಇಲ್ಲಿದೆ…
ಶ್ರೀರಾಮ್ ನಾಯಕ್, Dec 23, 2022, 5:55 PM IST
ಆರೋಗ್ಯದ ದೃಷ್ಟಿಯಲ್ಲಿ ರಾಗಿ, ಗೋಧಿ, ಓಟ್ಸ್ ಧಾನ್ಯಗಳು ಉತ್ತಮ ಆಯ್ಕೆಗಳಾಗಿ ಕಂಡುಬರುತ್ತವೆ. ರಾಗಿ ಸೇವನೆಯೂ ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.
ರಾಗಿಯಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ಡವರೆನ್ನದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.
ರಾಗಿಯಲ್ಲೂ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು ಉದಾ: ರಾಗಿ ದೋಸೆ, ರಾಗಿ ಚಪಾತಿ, ರಾಗಿ ಮುದ್ದೆ, ರಾಗಿ ಗಂಜಿ, ರಾಗಿ ಇಡ್ಲಿ ಹೀಗೆ ಹತ್ತು ಹಲವು.
ಹಾಗಾದರೆ ಏಕೆ ತಡ… ರಾಗಿ ಮುದ್ದೆ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ….
ರಾಗಿ ಮುದ್ದೆ
ಬೇಕಾಗುವ ಸಾಮಾಗ್ರಿಗಳು
ರಾಗಿ ಹಿಟ್ಟು- 2 ಕಪ್ ನೀರು- 4 ಕಪ್
ತಯಾರಿಸುವ ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, 10 ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು.ನಂತರ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ತಿರುಗಿಸಬೇಕು. ತದನಂತರ ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ. ಆ ಬಳಿಕ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿ ಇರುವಾಗಲೇ ಅದನ್ನು ಕಟ್ಟಬೇಕು ಕೈಯನ್ನು ನೀರು ಅಥವಾ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ರೀತಿಯಲ್ಲಿ ಉಂಡೆಯನ್ನು ಕಟ್ಟಿದರೆ ಆರೋಗ್ಯಕರವಾದ ರಾಗಿಮುದ್ದೆ ಯನ್ನು ಯಾವುದೇ ಸೊಪ್ಪು ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು.
*ಶ್ರೀರಾಮ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ