ಅನ್ನದಾತನೇ ನಮ್ಮದೈವ: ‘ರೈತರೊಂದಿಗೊಂದು ದಿನ’ದಲ್ಲಿ ಸಚಿವ ಬಿ.ಸಿ.ಪಾಟೀಲ್
Team Udayavani, Nov 14, 2021, 1:27 PM IST
ಹಿರೇಕೆರೂರು : ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತವರು ಕ್ಷೇತ್ರವಾದ ಹಿರೇಕೆರೂರಿನಲ್ಲಿ ಭಾನುವಾರ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭಾಗಿಯಾದರು.
ಕ್ಷೇತ್ರದ ಜನರು ನಟ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ. ಎಂದು ಸಚಿವ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಜೋಳ ಮತ್ತು ರಾಗಿ ಬೀಸುವ ಮೂಲಕ ವಿಶೇಷವಾಗಿ ನಮ್ಮನ್ನು ಸ್ವಾಗತಿಸಿದ ಮಹಿಳೆಯರು. #ರೈತರೊಂದಿಗೊಂದುದಿನ | #OneDayWithFarmers| #Haveri | #Hirekerur | #Rattihalli pic.twitter.com/i6CAhRoKFi
— Kourava B.C.Patil (@bcpatilkourava) November 14, 2021