ಹಣದುಬ್ಬರದ ವಿರುದ್ಧದ ಹೋರಾಟ : ರೆಪೋ ದರ ಹೆಚ್ಚಿಸಿದ ಆರ್ಬಿಐ
ಬಡ್ಡಿದರಗಳ ಪರಿಣಾಮಗಳನ್ನು ಕಡಿಮೆ ಮಾಡಲು ಎರಡು ಆಯ್ಕೆ
Team Udayavani, Feb 8, 2023, 2:58 PM IST
ನವದೆಹಲಿ : ಹಣದುಬ್ಬರದ ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು (ಫೆ 8) ರೆಪೋ ದರ ವನ್ನ ಹೆಚ್ಚಿಸಿದೆ. ಬೆಂಚ್ಮಾರ್ಕ್ ಸಾಲ ದರವನ್ನು 25 ಮೂಲ ಅಂಕಗಳಿಂದ 6.50 ಪ್ರತಿಶತಕ್ಕೆ ಹೆಚ್ಚಿಸಿದೆ.
ಕೇಂದ್ರೀಯ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಈ ತೀರ್ಮಾನ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಬ್ಯಾಂಕುಗಳು, ವಸತಿ ಹಣಕಾಸು ಸಂಸ್ಥೆಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಬಾಗಿಲು ತೆರೆಯುತ್ತದೆ.
ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಒಟ್ಟಾಗಿ ಬಡ್ಡಿದರಗಳನ್ನು ಹೆಚ್ಚಿಸುವುದರಿಂದ ಅಸ್ತಿತ್ವದಲ್ಲಿರುವ ಮತ್ತು ಹೊಸ ಸಾಲಗಾರರು ಶೀಘ್ರದಲ್ಲೇ ತಮ್ಮ ಸಾಲಗಳಿಗೆ ಹೆಚ್ಚಿನ ಇಎಂಐ ಗಳನ್ನು ಪಾವತಿಸಬೇಕಾಗುತ್ತದೆ. ಗೃಹ ಸಾಲದ ಸಾಲಗಾರರು ತಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಆಯ್ಕೆಗಳಿವೆ.
ಸಾಲದ ಅವಧಿಯನ್ನು ವಿಸ್ತರಿಸುವುದು
ಅಸ್ತಿತ್ವದಲ್ಲಿರುವ ಗೃಹ ಸಾಲಗಾರರು ಹೆಚ್ಚುತ್ತಿರುವ ಬಡ್ಡಿದರಗಳ ಪರಿಣಾಮಗಳನ್ನು ಕಡಿಮೆ ಮಾಡಲು ಎರಡು ಆಯ್ಕೆಗಳನ್ನು ಹೊಂದಿದ್ದು, ಸಾಲದ ಅವಧಿಯನ್ನು ವಿಸ್ತರಿಸುವುದು ಅಥವಾ ಸಮಾನ ಮಾಸಿಕ ಕಂತುಗಳನ್ನು ಹೆಚ್ಚಿಸುವುದು. ಇತ್ತೀಚಿನ ದಿನಗಳಲ್ಲಿ, ಬಹುಪಾಲು ಬ್ಯಾಂಕ್ಗಳು ಸ್ಥಿರ ಇಎಂಐ ಗಳನ್ನು ನಿರ್ವಹಿಸುವಾಗ ಸಾಲದ ಅವಧಿಯನ್ನು ವಿಸ್ತರಿಸಲು ಬಯಸುತ್ತವೆ. ಆದ್ದರಿಂದ, ಸಾಲದ ಅವಧಿಯು ದೀರ್ಘವಾಗಿದ್ದರೆ, ಬಡ್ಡಿಯೂ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಗೃಹ ಸಾಲದ ಪೂರ್ವಪಾವತಿ
ಹೆಚ್ಚುತ್ತಿರುವ ಬಡ್ಡಿಯ ವೆಚ್ಚವನ್ನು ತಪ್ಪಿಸಲು ಸಾಲಗಾರರು ಪೂರ್ವಪಾವತಿಯ ಬಗ್ಗೆ ಯೋಚಿಸಬಹುದು. ಡಿಸೆಂಬರ್ನಲ್ಲಿ ಆರ್ಬಿಐ ಘೋಷಿಸಿದ ದರ ಹೆಚ್ಚಳದ ನಂತರ, ಹಲವಾರು ಬ್ಯಾಂಕುಗಳು ತಮ್ಮ ರೆಪೋ-ಲಿಂಕ್ಡ್ ಹೋಮ್ ಲೋನ್ ಗಳ ಮೇಲಿನ ದರಗಳನ್ನು ಹೆಚ್ಚಿಸಿವೆ.
ಆರ್ಬಿಐ ಇಂದು ಚಿಲ್ಲರೆ ಹಣದುಬ್ಬರವನ್ನು 2022-2023 ಕ್ಕೆ 6.5 ಶೇಕಡಾ ಮತ್ತು ಮುಂಬರುವ ಹಣಕಾಸು ವರ್ಷದಲ್ಲಿ 5.3 ಶೇಕಡಾ ಎಂದು ಮುನ್ಸೂಚನೆ ನೀಡಿದೆ. 2023-2024 ಕ್ಕೆ, ಇದು 6.4 ಶೇಕಡಾ ಜಿಡಿಪಿ ಹೆಚ್ಚಳವನ್ನು ಊಹಿಸಿದೆ. ಅನಿಯಮಿತ ಜಾಗತಿಕ ಪ್ರವೃತ್ತಿಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಸ್ಥಿರವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ಆರು ಸದಸ್ಯರ ದರ ನಿಗದಿ ಸಮಿತಿಯ ನಿರ್ಧಾರದ ಫಲಿತಾಂಶವನ್ನು ಬುಧವಾರ ಬಹಿರಂಗಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್; ಭಾರತದಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ, ಬೆಲೆ ವಿವರ…
ಅಸಮಾನತೆಗೆ ಅವಕಾಶ ಕೊಡದಿರಿ: ಬ್ಯಾಂಕುಗಳಿಗೆ ಆರ್ಬಿಐ ಗವರ್ನರ್ ಎಚ್ಚರಿಕೆ
ಜಾಗತಿಕ ಬೇಡಿಕೆ ಕುಸಿತ: ರಫ್ತು, ವ್ಯಾಪಾರ ಕೊರತೆ ಇಳಿಕೆ
MUST WATCH
ಹೊಸ ಸೇರ್ಪಡೆ
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್