Watch: ಭೂಕಂಪ ಅಂತ ಜನರು ಕಂಗಾಲು…ದಿಢೀರನೆ ಕುಸಿದ ರಸ್ತೆ, ಗುಂಡಿಗೆ ಬಿದ್ದ ಕಾರು, ತರಕಾರಿ ಗಾಡಿಗಳು!
ಸಂಪೂರ್ಣ ರಸ್ತೆ ದುರಸ್ತಿಯಾಗುವವರೆಗೆ ಈ ಪ್ರದೇಶದ ಜನರು ಮುನ್ನೆಚ್ಚರಿಕೆ ವಹಿಸಿ
Team Udayavani, Dec 24, 2022, 11:32 AM IST
ಗೋಶಾಮಹಲ್ (ಹೈದರಾಬಾದ್): ಸಾರ್ವಜನಿಕರು, ಬೀದಿ ಬದಿಯಲ್ಲಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಭೂಕಂಪದ ರೀತಿಯಲ್ಲಿ ರಸ್ತೆ ಕುಸಿದು ಹೋಗಿ ಗುಂಡಿ ಬಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಗಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆರ್ ಸಿಬಿ ಸೇರಿದ ಕೂಡಲೇ ತಂಡವನ್ನೇ ಟ್ರೋಲ್ ಮಾಡಿದ ವಿಲ್ ಜ್ಯಾಕ್ಸ್
ರಸ್ತೆ ದಿಢೀರನೆ ಕುಸಿದು ಬಿದ್ದ ಪರಿಣಾಮ ರಸ್ತೆ ಮೇಲಿದ್ದ ತರಕಾರಿ, ಸೈಕಲ್, ಬೈಕ್, ಕಾರುಗಳು ಗುಂಡಿಯಲ್ಲಿ ಬಿದ್ದುಬಿಟ್ಟಿದ್ದವು. ಜನರಿಗೆ ಇದು ಭೂಕಂಪವೋ, ರಸ್ತೆ ಕುಸಿತವೋ ಅಂತ ತಿಳಿಯದೇ ಗಾಬರಿಗೊಂಡಿದ್ದರು. ಕೊನೆಗೆ ಗುಂಡಿಯಲ್ಲಿ ಬಿದ್ದಿದ್ದ ತರಕಾರಿ ಗಾಡಿ, ಬುಟ್ಟಿ, ಕಾರು ಸೇರಿದಂತೆ ವಾಹನಗಳನ್ನು ಮೇಲಕ್ಕೆತ್ತಲಾಗಿತ್ತು.
Nope! Not an Earthquake! Just a naala road in #Hyderabad which decided to give up!
A naala in Chaknawadi, Goshamahal in #Hyderabad crumbles taking down an entire market &vehicles along with it. There was a Friday street market when the incident happened, luckily no one hurt! pic.twitter.com/S6TEso4Rcb— Revathi (@revathitweets) December 23, 2022
ರಸ್ತೆ ಕುಸಿತದ ಪರಿಣಾಮ ಇಡೀ ಪ್ರದೇಶಲ್ಲಿ ವ್ಯಾಪಕ ಅಡಚಣೆ ಉಂಟಾಗಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುಂತಾಗಿದೆ ಎಂದು ವರದಿ ತಿಳಿಸಿದೆ. ಸಂಪೂರ್ಣ ರಸ್ತೆ ದುರಸ್ತಿಯಾಗುವವರೆಗೆ ಈ ಪ್ರದೇಶದ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ರಸ್ತೆ ಕೆಳಗಿರುವ ನೀರಿನ ಪೈಪ್ ಲೈನ್ ನಿಂದಾಗಿ ರಸ್ತೆ ಕುಸಿತಕ್ಕೆ ಕಾರಣ ಇರಬಹುದು ಎಂದು ಊಹಿಸಲಾಗಿದೆ. ಆದರೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ