ತೈಲ ಡಿಪೋ ಮೇಲೆ ಹೌತಿಗಳ ದಾಳಿ : ಭಾರಿ ವಾಯು ದಾಳಿ ನಡೆಸಿದ ಸೌದಿ ಒಕ್ಕೂಟ
ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟ ಸಂಘರ್ಷ
Team Udayavani, Mar 26, 2022, 6:31 PM IST
ಸನಾ: ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟವು ಯೆಮೆನ್ನ ರಾಜಧಾನಿ ಮತ್ತು ಆಯಕಟ್ಟಿನ ನಗರದ ಮೇಲೆ ಭಾರಿ ವಾಯುದಾಳಿ ಗೈದಿದ್ದು,ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹೌತಿ ಬಂಡುಕೋರರು ಸೌದಿ ನಗರದ ಜೆಡ್ಡಾದಲ್ಲಿನ ತೈಲ ಡಿಪೋ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಸನಾ ಮತ್ತು ಹೊಡೆಯ್ಡಾ ಮೇಲೆ ರಾತ್ರಿ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ.
ಶನಿವಾರ ಸ್ಫೋಟಕಗಳನ್ನು ತುಂಬಿದ ಎರಡು ಡ್ರೋನ್ಗಳನ್ನು ಒಕ್ಕೂಟದ ಸೇನಾಪಡೆಗಳು ತಡೆಹಿಡಿದು ನಾಶಪಡಿಸಿತು ಎಂದು ಸೌದಿ ನೇತೃತ್ವದ ಬ್ರಿಗೇಡ್ ವಕ್ತಾರ ಜನರಲ್ ತುರ್ಕಿ ಅಲ್-ಮಲ್ಕಿ, ಹೇಳಿದ್ದಾರೆ. ಹೊಡೆಯ್ಡಾದಲ್ಲಿ ಹೌತಿ ಹಿಡಿತದಲ್ಲಿರುವ ನಾಗರಿಕ ತೈಲ ಘಟಕಗಳಿಂದ ಡ್ರೋನ್ಗಳನ್ನು ಹಾರಿಸಲಾಗಿದ್ದು, ನಗರದಲ್ಲಿನ ತೈಲ ಘಟಕಗಳಿಂದ ನಾಗರಿಕರು ದೂರವಿರಲು ಒತ್ತಾಯಿಸಿದ್ದಾರೆ.
ಭಾನುವಾರದಂದು ನಡೆಯುವ ಫಾರ್ಮುಲಾ ಒನ್ ರೇಸ್ಗಿಂತ ಮುಂಚಿತವಾಗಿ ಹೌತಿಗಳು ಶುಕ್ರವಾರ ದಾಳಿ ನಡೆಸಿದ್ದು,ಇರಾನ್ ಬೆಂಬಲಿತ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾದ ಸಾಮರ್ಥ್ಯ ತೋರಿದ್ದು, ಪ್ರತಿ ದಾಳಿ ನಡೆಸಿ ಫಾರ್ಮುಲಾ ಒನ್ ರೇಸ್ ನಿಗದಿಯಂತೆ ನಡೆಯಲಿದೆ ಎಂದು ಹೇಳಿದೆ.
ತೈಲ ದೈತ್ಯ ಸೌದಿಯ ಜೆಡ್ಡಾದಲ್ಲಿರುವ ಅರಾಮ್ಕೊದ ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಕೇಂದ್ರಕ್ಕೆ ಹೌತಿಗಳು ದಾಳಿ ನಡೆಸಿದ ನಂತರ ಎರಡು ಶೇಖರಣಾ ಟ್ಯಾಂಕ್ಗಳಲ್ಲಿ ಭಾರಿ ಬೆಂಕಿ ಮತ್ತು ಕಪ್ಪು ಹೊಗೆ ಕಂಡು ಬಂದಿದೆ.
ಆನ್ಲೈನ್ನಲ್ಲಿ ಪ್ರಸಾರವಾದ ದೃಶ್ಯಾವಳಿಗಳಲ್ಲಿ ಸನಾ ಮತ್ತು ಹೊಡೆಡಾದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಂಡು ಬಂದಿದ್ದು, ಯೆಮೆನ್ ರಾಜಧಾನಿಯಲ್ಲಿ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ದೊಡ್ಡ ಸ್ಫೋಟಗಳನ್ನು ಕೇಳಿಸಿದ್ದು, ಅಲ್ಲಿನ ವಸತಿ ಕಟ್ಟಡಗಳು ಜರ್ಜರಿತಗೊಂಡಿವೆ ಎಂದು ವರದಿ ಮಾಡಿದ್ದಾರೆ.
ಒಕ್ಕೂಟದ ವೈಮಾನಿಕ ದಾಳಿಯು ವಿದ್ಯುತ್ ಸ್ಥಾವರ, ಇಂಧನ ಪೂರೈಕೆ ಕೇಂದ್ರ ಮತ್ತು ರಾಜಧಾನಿಯಲ್ಲಿನ ಸರ್ಕಾರಿ ಸಾಮಾಜಿಕ ವಿಮಾ ಕಚೇರಿಯನ್ನು ಹಾನಿ ಮಾಡಿದೆ. ಮಕ್ಕಳು ಮತ್ತು ಮಹಿಳೆಯರು ಸೇರಿ ಎಂಟು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ಹೇಳಿದ್ದಾರೆ.
2014 ರಲ್ಲಿ ಹೌತಿಗಳು ಸನಾವನ್ನು ವಶಪಡಿಸಿಕೊಂಡ ನಂತರ ಯೆಮೆನ್ನಲ್ಲಿ ಯುದ್ಧವು ಸ್ಫೋಟಗೊಂಡಿತ್ತು. ತಿಂಗಳುಗಳ ನಂತರ, ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳು ಹೌತಿಗಳನ್ನು ಹೊರಹಾಕಲು ಮತ್ತು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಕಾರವನ್ನು ಪುನಃಸ್ಥಾಪಿಸಲು ವಾಯು ದಾಳಿಯನ್ನು ಪ್ರಾರಂಭಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಸಂಘರ್ಷವು ಪ್ರಾದೇಶಿಕ ಯುದ್ಧವಾಗಿ ಮಾರ್ಪಟ್ಟಿದೆ.
ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾದ ಈ ಯುದ್ಧ 14,500 ನಾಗರಿಕರು ಸೇರಿ 150,000 ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ