ಭಾರತ ತಂಡದ ಸೆಮಿ ಪ್ರವೇಶ ಪವಾಡವಲ್ಲದೆ ಬೇರೇನೂ ಅಲ್ಲ:ಟ್ರೋಲ್ ಮಾಡಿದ ಅಫ್ರಿದಿ
Team Udayavani, Nov 1, 2021, 12:25 PM IST
ದುಬಾೖ: ಟಿ20 ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್’ ಹಂತದಲ್ಲಿ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಸತತ ೨ ಸೋಲು ಕಂಡಿರುವ ಭಾರತ ತಂಡವನ್ನು ಪಾಕಿಸ್ಥಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಲೇವಡಿ ಮಾಡಿದ್ದಾರೆ.
ಟ್ವೀಟ್ ನಲ್ಲಿ ಅಫ್ರಿದಿ, ”ಭಾರತಕ್ಕೆ ಇನ್ನೂ ಸೆಮಿ ಫೈನಲ್ಅ ರ್ಹತೆ ಪಡೆಯುವ ಹೊರಗಿನ ಅವಕಾಶವಿದೆ. ಆದರೆ ಅವರು ಇದುವರೆಗೆ ತಮ್ಮ ಎರಡು ದೊಡ್ಡ ಪಂದ್ಯಗಳನ್ನು ಹೇಗೆ ಆಡಿದ್ದಾರೆ, ಅವರು ಅರ್ಹತೆ ಪಡೆಯುವುದನ್ನು ನೋಡುವುದು ಪವಾಡವಲ್ಲದೆ ಬೇರೇನೂ ಅಲ್ಲ” ಎಂದು ಲೇವಡಿ ಮಾಡಿದ್ದಾರೆ.
India still have an outside chance of qualifying for semis but with how they have played their two big games in the event, it will be nothing but a miracle to see them qualify. @T20WorldCup
— Shahid Afridi (@SAfridiOfficial) October 31, 2021
ಆದಹಾಗೆ ಭಾರತ ತಂಡ ಸೆಮಿ ಫೈನಲ್ ಹಂತಕ್ಕೆ ತಲುಪಬೇಕಾದರೆ ಉಳಿದ ಮೂರು ಪಂದ್ಯಗಳಲ್ಲಿ ಅಫ್ಘಾನ್. ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸಬೇಕು, ನ್ಯೂಜಿ ಲ್ಯಾಂಡ್ ವಿರುದ್ಧ ಅಫ್ಘಾನಿಸ್ಥಾನ ಗೆಲ್ಲಬೇಕಿದೆ. ರನ್ ರೇಟ್ ಆಧಾರದಲ್ಲಿ ಸೆಮಿ ಫೈನಲ್ ಹಂತಕ್ಕೇರಲು ಅವಕಾಶವಿದೆ.