ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಡಿಕೆಶಿ ಜಾರಿದ್ದಕ್ಕೆ ಬಿಜೆಪಿ ಲೇವಡಿ
Team Udayavani, Jan 9, 2022, 12:46 PM IST
ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಕನಕಪುರದ ಸಂಗಮದಲ್ಲಿ ಭಾನುವಾರ ಬೆಳಗ್ಗೆ ಚಾಲನೆ ನೀಡಲಾಗಿದ್ದು, ನದಿಯಲ್ಲಿ ಪೂಜೆ ಮಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಜಾರಿದ್ದು, ಬಿಜೆಪಿ ಲೇವಡಿ ಮಾಡಿದೆ.
ಕಾವೇರಿ ನದಿಗೆ ತೆಪ್ಪದಲ್ಲಿ ಸಾಗಿ ಶಿವಕುಮಾರ್ ಅವರು ಸ್ನಾನ ಮಾಡಿ ಪೂಜೆ ಸಲ್ಲಿಸಲೆಂದು ಕುಳಿತುಕೊಳ್ಳುವಾಗ ಆಯತಪ್ಪಿ ಸ್ವಲ್ಪ ವಾಲಿದ್ದಾರೆ. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಇದನ್ನೂ ಓದಿ :ಮೇಕೆದಾಟು ಪಾದಯಾತ್ರೆ ಆರಂಭ: ಪಾಂಚಜನ್ಯ ಮೊಳಗಿದೆ ಎಂದ ಡಿ.ಕೆ.ಶಿವಕುಮಾರ್
ವಿಡಿಯೋ ವನ್ನು ಟ್ವೀಟ್ ಮಾಡಿರುವ ಬಿಜೆಪಿ ಡಿ.ಕೆ. ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ ಎಂದು ವ್ಯಂಗ್ಯ ಮಾಡಿದೆ.
ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ!#ಸುಳ್ಳಿನಜಾತ್ರೆ pic.twitter.com/xibQDTIyWw
— BJP Karnataka (@BJP4Karnataka) January 9, 2022