ಕುಕ್ಕೆ ಕ್ಷೇತ್ರಕ್ಕೆ ಟಗರು ನಾಯಕಿ ಮಾನ್ವಿತಾ ಕಾಮತ್ ಭೇಟಿ
ಒಳ್ಳೆಯ ಚಿತ್ರಕಥೆ ಸಿಕ್ಕಿದ್ದಲ್ಲಿ ತುಳುವಿನಲ್ಲೂ ನಟಿಸುವೆ
Team Udayavani, Dec 24, 2021, 4:45 PM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕೇತ್ರಕ್ಕೆ ಚಿತ್ರನಟಿ, ಕನ್ನಡದ ಟಗರು ಸಿನೆಮಾ ನಾಯಕಿ ಮಾನ್ವಿತಾ ಕಾಮತ್ ಶುಕ್ರವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ತುಂಬಾ ಜನರಿಗೆ ನಾನು ಮಂಗಳೂರಿನವಳು ಎಂಬುದು ಗೊತ್ತಿದೆಯೋ ಇಲ್ಲವೋ. ತುಳು ಭಾಷೆಯ ಒಳ್ಳೆಯ ಚಿತ್ರಕಥೆ ಸಿಕ್ಕಿದಲ್ಲಿ ತುಳುಚಿತ್ರದಲ್ಲೂ ನಟಿಸಲು ಸಿದ್ಧನಿದ್ದೇನೆ. ಆದರೆ ಈವರೆಗೆ ಈ ಬಗ್ಗೆ ಯಾರೂ ನನ್ನಲ್ಲಿ ಮಾತನಾಡಿಲ್ಲ ಎಂದರು.
ಪುನೀತ್ ರಾಜ್ಕುಮಾರ್ ನಿಧನ ಇಂದಿಗೂ ನಂಬಲೂ ಸಾಧ್ಯವಾಗುತ್ತಿಲ್ಲ. ಎಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರು ನಮ್ಮೊಂದಿಗೆ ಸದಾ ಇದ್ದಾರೆ ಎಂದರು.
ನಾನೇ ಪ್ರೊಡಕ್ಷನ್ ಹೌಸ್ ಒಂದನ್ನು ಹೈದರಬಾದ್ನಲ್ಲಿ ಪ್ರಾರಂಭಿಸಿದ್ದೇನೆ. ಅದರಲ್ಲಿ ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ ಅದಕ್ಕಾಗಿ ದೇವರ ಆಶೀರ್ವಾದಕ್ಕಾಗಿ ಇಲ್ಲಿಗೆ ಆಗಮಿಸಿದ್ದೇನೆ. ನನ್ನ ಅಭಿನಯದ ಮರಾಠಿ ಸಿನೆಮಾ ಸದ್ಯದಲ್ಲೇ ರಿಲೀಸ್ ಆಗುವ ಸಾಧ್ಯತೆಯಿದೆ. ಕೊರೊನಾದಿಂದಾಗಿ ಬಿಡುಗಡೆ ತಡವಾಗಿದೆ ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.