ಜಗತ್ತಿಗೆ ತಾಪಮಾನದ ವಾರ್ನಿಂಗ್:; ದಶಕದಲ್ಲಿ 0.2 ಡಿ.ಸೆ. ಏರಿಕೆ!
ವಿಶ್ವದ 50 ಪ್ರಮುಖ ವಿಜ್ಞಾನಿಗಳಿಂದ ಎಚ್ಚರಿಕೆಯ ಕರೆಗಂಟೆ
Team Udayavani, Jun 9, 2023, 7:33 AM IST
ಲಂಡನ್: ಬೇಸಗೆಯ ಧಗೆಯಿಂದ ಇನ್ನೇನು ಮುಂಗಾರಿನ ಸಿಂಚನದತ್ತ ದೇಶವು ತೆರೆದುಕೊಳ್ಳುತ್ತಿರುವಂತೆಯೇ 50 ವಿಜ್ಞಾನಿಗಳ ತಂಡವೊಂದು ಆಘಾತಕಾರಿ ಸುದ್ದಿಯನ್ನು ನೀಡಿದೆ. ಜಗತ್ತಿನ ತಾಪಮಾನ ಪ್ರತಿ 10 ವರ್ಷಗಳಿಗೆ 0.2 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗುತ್ತಿದೆ ಎಂಬ ಎಚ್ಚರಿಕೆಯ ಕರೆಗಂಟೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ.
2013ರಿಂದ 2022ರವರೆಗೆ ದಶಕದಲ್ಲಿ 0.2 ಡಿ.ಸೆ.ನಂತೆ ಮಾನವ ಉತ್ತೇಜಿತ ತಾಪಮಾನವು ಹೆಚ್ಚುತ್ತಿದ್ದು, ಇದು ಮಾನವಕುಲಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಈ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗಲು ಮಾನವನ ಚಟುವಟಿಕೆಗಳೇ ಕಾರಣ ಎನ್ನುತ್ತದೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ ಸರ್ಕಾರಿ ಸಮಿತಿ(ಐಪಿಸಿಸಿ) ವರದಿ. ಮನುಷ್ಯರ ಚಟುವಟಿಕೆಗಳು ಹಸಿರುಮನೆ ಇಂಧನಗಳ ಹೊರಸೂಸುವಿಕೆಯನ್ನು ಹೆಚ್ಚಿಸಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿದೆ ಎಂದೂ ಈ ವರದಿ ಹೇಳಿದೆ.
ಸಾರ್ವಕಾಲಿಕ ದಾಖಲೆ:
ಕಳೆದ ಒಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 54 ಗಿಗಾ ಟನ್ಗಳನ್ನು ಇಂಗಾಲದ ಡೈಆಕ್ಸೆ„ಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹಸಿರುಮನೆ ಇಂಧನ ಹೊರಸೂಸುವಿಕೆಯು ಸಾರ್ವಕಾಲಿಕ ದಾಖಲೆ ಬರೆದಿದೆ ಎಂದೂ ವರದಿ ತಿಳಿಸಿದೆ. ಇದೇ ವರ್ಷದ ಡಿಸೆಂಬರ್ನಲ್ಲಿ ಯುಎಇಯಲ್ಲಿ ಕಾಪ್28 ಹವಾಮಾನ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ವರದಿ ಬಿಡುಗಡೆಯಾಗಿದೆ. 2050ರೊಳಗೆ ಜಾಗತಿಕ ತಾಪಮಾನವನ್ನು 1.5 ಡಿ.ಸೆ.ನಲ್ಲಿ ಮಿತಿಗೊಳಿಸುವ ನಿಟ್ಟಿನಲ್ಲಿ ಇಡಲಾದ ಹೆಜ್ಜೆಗಳ ಕುರಿತು ಈ ಸಮ್ಮೇಳನದಲ್ಲಿ ಪರಿಶೀಲನೆ ಕೈಗೊಳ್ಳಲಾಗುತ್ತದೆ.
ದೇಶಗಳು ಮಾಡಬೇಕಾದ್ದೇನು?
ಜಗತ್ತಿನ ತಾಪಮಾನದ ಮೇಲೆ ಎಂದೆಂದೂ ಸರಿಪಡಿಸಲಾಗದಂಥ ಹಾನಿ ಆಗಿದೆ. ಈಗ ನಮ್ಮ ಮುಂದಿರುವ ದಾರಿಯೆಂದರೆ, 2015ರ ಪ್ಯಾರಿಸ್ ಒಪ್ಪಂದದ ವೇಳೆ ನಿಗದಿಪಡಿಸಲಾದ ತಾಪಮಾನದ ಮಿತಿಯೊಳಗೆ ಇರಲು ಪ್ರಯತ್ನಿಸುವುದು. ಅಂದರೆ,
– 2035ರೊಳಗೆ ವಿಶ್ವವು ಹಸಿರುಮನೆ ಇಂಧನ ಹೊರಸೂಸುವಿಕೆಯನ್ನು ಶೇ.60ರಷ್ಟು ಕಡಿತಗೊಳಿಸಬೇಕು.
– ಇಂಗಾಲದ ಡೈ ಆಕ್ಸೆ„ಡ್, ಮೀಥೇನ್ ಹಾಗೂ ಪಳೆಯುಳಿಕೆ ಇಂಧನದ ಸುಡುವಿಕೆಯು 250 ಶತಕೋಟಿ ಟನ್ಗಳ ಮಿತಿ ಮೀರಬಾರದು.
– 2030ರೊಳಗಾಗಿ ಇಂಗಾಲದ ಡೈ ಆಕ್ಸೆ„ಡ್ ಹೊರಸೂಸುವಿಕೆಯನ್ನು ಕನಿಷ್ಠ ಶೇ.40ರಷ್ಟು ತಗ್ಗಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್