ಹಿಂದೂ ವ್ಯಕ್ತಿಯನ್ನು ನಾಯಿಯಂತೆ ಕೂರಿಸಿ ಬೊಗಳಲು ಹೇಳಿದ್ದ ಮುಸ್ಲಿಂ ಆರೋಪಿಗಳ ಮನೆ ಧ್ವಂಸ !
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋವನ್ನು ಗಂಭಿರವಾಗಿ ಪರಿಗಣಿಸಿದ ಮ.ಪ್ರ ಸರ್ಕಾರ
Team Udayavani, Jun 20, 2023, 6:00 PM IST
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಿಂದೂವೊಬ್ಬನನ್ನು ನಾಯಿಯಂತೆ ಕೂರಿಸಿ ಬೊಗಳಲು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಆರೋಪಿಗಳ ಮನೆಗಳನ್ನು ಮಂಗಳವಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ.
ಆರೋಪಿಗಳು ವ್ಯಕ್ತಿಯೊಬ್ಬನನ್ನು ನೆಲದಲ್ಲಿ ಕೈಗಳನ್ನು ಕಟ್ಟಿಸಿ ನಾಯಿಯಂತೆ ಕೂರಿಸಿ ನಾಯಿಯಂತೆ ಬೊಗಳಲು ಹೇಳುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣವನ್ನು ಮಧ್ಯಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಸದ್ಯ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶದ ಮೇರೆಗೆ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ.
ಹಿಂಸೆಗೊಳಗಾದ ವ್ಯಕ್ತಿಯನ್ನು ವಿಜಯ್ ರಾಮ್ಚಾಂದನಿ ಎಂದು ಗುರುತಿಸಲಾಗಿದ್ದು, ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಅಮಾನವೀಯವಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ʻಆರೋಪಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ (ಎನ್ಎಸ್ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾದ ಕೇವಲ 24 ಗಂಟೆಗಳೊಳಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎನ್ಎಸ್ಎ ಅಡಿಯಲ್ಲಿ ಆರೋಪಿಗಳನ್ನು 12 ತಿಂಗಳವರೆಗೆ, ಪ್ರಬಲ ಸಾಕ್ಷ್ಯಗಳಿದ್ದಲ್ಲಿ ಇನ್ನೂ ಹೆಚ್ಚಿನ ಅವಧಿಗೆ ಬಂಧಿಸಬಹುದಾಗಿದೆʼ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ಧಾರೆ.
ಇದನ್ನೂ ಓದಿ: Watch Video: ಟಿ20 ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ 18 ವರ್ಷದ ಅರ್ಶಿನ್ ಕುಲಕರ್ಣಿ
भोपाल में कुछ युककों ने शख्स के गले में पट्टा डाला और उसे कुत्ते की तरह घुमाया. यह वीडियो सोशल मीडिया पर वायरल हो गया. इसके वायरल होने के बाद प्रदेश में हड़कंप मच गया. गृह मंत्री नरोत्तम मिश्रा ने वीडियो देखने के बाद पुलिस को तत्काल कार्रवाई के निर्देश दिए. pic.twitter.com/NdxgLsIyho
— Sushil Kaushik (@SushilKaushikMP) June 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ