ವಿವಾಹಿತೆ ಜೊತೆ ಪ್ರೇಮಿ ಆತ್ಮಹತ್ಯೆ
Team Udayavani, Dec 3, 2021, 10:57 AM IST
ಶ್ರೀರಂಗಪಟ್ಟಣ: 10 ದಿನಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ, ಪ್ರಿಯಕರನ ಜೊತೆ ಶಾಲು ಕಟ್ಟಿಕೊಂಡು ಕೆ.ಆರ್.ಸಾಗರ ನಾತ್೯ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ಮುಳಗಿ ಸಾವನಪ್ಪಿರುವ ಘಟನೆ ನಡೆದಿದೆ.
ಮೈಸೂರು ಮೇಟಗಳ್ಳಿಯ ಬಡವಾಣೆಯ ಹಳೆ ಪೊಲೀಸ್ ಠಾಣೆ ರಸ್ತೆಯ ನಿವಾಸಿಗಳಾದ ನವೀನ್ (20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಈ ಇಬ್ಬರು ಸಂಬಂದಿಕರಾಗಿದ್ದು ನಿಸರ್ಗ ಮತ್ತು ನವೀನ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ ಮನೆಯವರಿಗೆ ಹೇಳಿರಲಿಲ್ಲ.
ನ. 20 ರಂದು ಚಾಮರಾಜನಗರ ಸಮೀಪದ ಗ್ರಾಮಕ್ಕೆ ನಿಸರ್ಗ ಮದುವೆಯಾಗಿತ್ತು.
ಇಬ್ಬರು ಕೂಡ ಡಿ.1 ರ ಮದ್ಯಾಹ್ನ ದಿಂದ ಮನೆಯಿಂದ ನಾಪತ್ತೆಯಾಗಿದ್ದರು, ಕೆ.ಆರ್.ಎಸ್ ನ ನಾತ್೯ಬ್ಯಾಂಕ್ ನ ಮಿಲ್ಟ್ರಿ ಕ್ಯಾಂಪ್ ಬಳಿ ಸ್ಕೂಟರ್ ನಿಲ್ಲಿಸಿ ಇಬ್ಬರು ವೆಲ್ ನಿಂದ ಕಟ್ಟಿಕೊಂದ ಹಿನ್ನಿರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.