ಹೊಸ ಗುಜರಿ ನೀತಿ: ವಾಹನ ಅವಧಿ ಮೀರಿದ್ದರೆ ಮನೆಗೇ ಬಂದೀತು ನೋಟಿಸ್?
ಸಾರಿಗೆ ಇಲಾಖೆ ಭರ್ಜರಿ ಸಿದ್ಧತೆ ಜನ ಸ್ಪಂದಿಸದ್ದರೆ ನೋಟಿಸ್ಗೆ ಚಿಂತನೆ
Team Udayavani, Dec 27, 2022, 7:23 AM IST
ಬೆಂಗಳೂರು: ಅವಧಿ ಮೀರಿದ ವಾಹ ನವನ್ನು ನೀವು ಇನ್ನೂ ಹೊಂದಿದ್ದರೆ ಸಾರಿಗೆ ಇಲಾಖೆಯ ನೋಟಿಸ್ ಪಡೆಯಬೇಕಾದೀತು !
ರಾಜ್ಯ ಸರಕಾರ ಗುಜರಿ ನೀತಿ ಪ್ರಕಟಿಸಿದ ಬೆನ್ನಲ್ಲೇ, ಸಾರಿಗೆ ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ. ಸ್ವಯಂ ಪ್ರೇರಣೆಯಿಂದ ನೀಡುವ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಒಂದು ವೇಳೆ ನಿರೀಕ್ಷಿತ ಸ್ಪಂದನೆ ಸಿಗದಿದ್ದರೆ, ವಾಹನ ಮಾಲಕರಿಗೆ ಸಾರಿಗೆ ಇಲಾಖೆ ನೋಟಿಸ್ ನೀಡಿ ಕಾರ್ಯ ಸಾಧನೆಗೆ ಆಲೋಚಿಸಿದ್ದು, ಕಾಲಮಿತಿ ಹಾಕಿಕೊಂಡಿದೆ. ಸರಕಾರವು ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಆಯಾ ಮಾಲಕರಿಗೆ ಹೊಸ ವಾಹನಗಳ ಖರೀದಿ ವೇಳೆ ಶೇ.25ರಷ್ಟು ತೆರಿಗೆ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ.
ಕಾಲಮಿತಿ ಯೋಜನೆ
ಅಂದಾಜಿನಲ್ಲಿ ಹೆಚ್ಚಿನ ಸಂಖ್ಯೆ ಇದ್ದರೂ ಕೇಂದ್ರಸರಕಾರ ತನ್ನಲ್ಲಿನ ಅಂಕಿ ಅಂಶ ದಂತೆ 14.3 ಲಕ್ಷ ವಾಹನಗಳಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಬಹುದು. ಸಾರಿಗೆ ಇಲಾಖೆಯೂ ತನ್ನ ಗುರಿ ಮುಟ್ಟುವವರೆಗೆ ರಿಯಾಯಿತಿ ಅನ್ವಯಿಸಬಹುದು. ಸರಕಾರ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಲಾಗುತ್ತದೆ.
ನಿರಾಸಕ್ತಿ ವ್ಯಕ್ತ
ಈ ಹಿಂದೆ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕಲು ರಿಯಾಯಿತಿ ನೀಡಿದ್ದರೂ ಚಾಲಕರಿಂದ ನಿರಾಸಕ್ತಿ ವ್ಯಕ್ತವಾಗಿತ್ತು.
ಗುಜರಿಗೆ ಹಾಕುವ ಪ್ರಕ್ರಿಯೆ ಸಂಪೂರ್ಣ ಸ್ವಯಂಪ್ರೇರಣೆ ಯಿಂದ ಆಗಲಿದೆ. ಒತ್ತಡ ಹೇರುವುದಿಲ್ಲ. ಒಂದು ವೇಳೆ ಸ್ಪಂದನೆ ವ್ಯಕ್ತವಾಗದಿದ್ದರೆ ನೋಟಿಸ್ ನೀಡುವ ಕುರಿತು ಆಲೋಚಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ