ವಿಜಯಪುರ: ತಪ್ಪು ಔಷಧಿ ಸಿಂಪಡಣೆಗೆ ಹಾಳಾದ ದ್ರಾಕ್ಷಿ; ರೈತ ಆತ್ಮಹತ್ಯೆ
Team Udayavani, Feb 5, 2023, 10:57 PM IST
ವಿಜಯಪುರ : ಕೊಯ್ಲಿನ ಹಂತದಲ್ಲಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ತಪ್ಪಾದ ಔಷಧಿ ಸಿಂಪರಣೆ ಮಾಡಿದ ರೈತರೊಬ್ಬರು ಬೆಳೆಹಾನಿ ಅನುಭವಿಸಿದ್ದು, ಆರ್ಥಿಕ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಆತಂಕಕ್ಕೊಳಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ನಿವಾಸಿ ಮನೋಹರ ಆಯತವಾಡ (55) ಎಂದು ಗುರುತಿಸಲಾಗಿದೆ.
ತನ್ನ ತೋಟದಲ್ಲಿ ಕೊಯ್ಲಿಗೆ ಬಂದಿದ್ದ ದ್ರಾಕ್ಷಿ ಬೆಳೆ ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಣೆ ಮಾಡಿದ್ದರು. ಆದರೆ ತಾವು ಸಿಂಪಡಿಸಿದ್ದು ತಪ್ಪಾದ ಔಷಧಿ ಎಂಬ ಅರಿವಾಗುವ ಹಂತದಲ್ಲಿ ಇಡೀ ದ್ರಾಕ್ಷಿ ಬೆಳೇ ಹಾಗೂ ಬಳಿ ಒಣಗಿ ನಿಂತಿತ್ತು. ಇದರಿಂದ ಆರ್ಥಿಕ ಉನ್ನತೀಕರಣದ ನಿರೀಕ್ಷೆಯಲ್ಲಿದ್ದ ರೈತ ಮನೋಹರ ಏಕಾಏಕಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂಧ ಆತಂಕಕ್ಕೊಳಗಾಗಿದ್ದರು.
ಕುಟುಂಬದ ಮೂಲಗಳ ಪ್ರಕಾರ ರೈತ ಮನೋಹರ ದ್ರಾಕ್ಷಿ ಬೆಳೆ ಸಂರಕ್ಷಣೆಗಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಕೈಗೆ ಬಂದ ಬೆಳೆ ಹಾಳಾದ ಕಾರಣ ಮಾನಸಿಕವಾಗಿ ಕುಗ್ಗಿಹೋಗಿದ್ದ ಮನೋಹರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ