LAC ಸನಿಹ ಚೀನಾದಿಂದ ಹಳ್ಳಿ ನಿರ್ಮಾಣ
-ಉತ್ತರಾಖಂಡ ಗಡಿಯಿಂದ 11 ಕಿ.ಮೀ. ದೂರದಲ್ಲಿ 250 ಮನೆಗಳ ನಿರ್ಮಾಣ
Team Udayavani, May 27, 2023, 7:35 AM IST
ಡೆಹ್ರಾಡೂನ್: ಗಡಿ ವಿಚಾರವಾಗಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಲೇ ಇರುವ ಚೀನಾ, ಇದೀಗ ಉತ್ತರಾಖಂಡದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯಲ್ಲಿ ಗಡಿ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಿದೆ. ಎಲ್ಎಸಿಯಿಂದ 11 ಕಿ. ಮೀ. ದೂರದಲ್ಲಿ 250 ನಿವಾಸಗಳನ್ನೊಳಗೊಂಡಿರುವ ಗ್ರಾಮವನ್ನು ನಿರ್ಮಿಸುತ್ತಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಗಾಲ್ವಾನ್ ವಿಚಾರವಾಗಿ ಭಾರತವನ್ನು ಕೆಣಕಿ ಪೆಟ್ಟು ತಿಂದ ಬಳಿಕವೂ ಅರುಣಾಚಲ ಪ್ರದೇಶದ ಗಡಿ ವಿಚಾರದಲ್ಲೂ ಚೀನಾ ಉದ್ಧಟತನ ಮುಂದುವರಿಸಿತ್ತು. ಇದೀಗ ಉತ್ತರಾಖಂಡದ ಗಡಿಗಳತ್ತ ಚೀನಾ ಕಣ್ಣಾಯಿಸಿದೆ. ಈಗಾಗಲೇ ಗಡಿಯಿಂದ 35 ಕಿ.ಮೀ.ದೂರದಲ್ಲಿ 55-56 ಮನೆಗಳನ್ನು ನಿರ್ಮಿಸಿದ್ದು, ಪೀಪಲ್ ಲಿಬರೇಶನ್ ಆರ್ಮಿ(ಪಿಎಲ್ಎ) ಅವುಗಳ ಕಾವಲಿಗೆ ನಿಂತಿದೆ. ಈ ಸಂದರ್ಭವನ್ನೇ ಬಳಸಿಕೊಂಡು ಪೂರ್ವ ಗಡಿಯಾದ್ಯಂತ ಒಟ್ಟು 300 ರಿಂದ 400 ಮನೆಗಳನ್ನು ನಿರ್ಮಿಸಿಬಿಡಲು ಚೀನಾ ಯೋಜಿಸುತ್ತಿದೆ.
ಉತ್ತರಾಖಂಡವು ಚೀನಾದ ಜತೆಗೆ 350 ಕಿ.ಮೀ. ಗಡಿ ಹಂಚಿಕೊಂಡಿದ್ದು, ಬಹುತೇಕ ಗಡಿ ಗ್ರಾಮಗಳಲ್ಲಿ ಜೀವನೋಪಾಯ ಅವಕಾಶಗಳ ಕೊರತೆಯಿಂದಾಗಿಯೇ ಜನರು ಗ್ರಾಮಗಳನ್ನು ತೊರೆದಿದ್ದಾರೆ. ಇದನ್ನೇ ಚೀನಾ ಅಸ್ತ್ರವಾಗಿಸಿಕೊಳ್ಳಲು ಹೊರಟಿದೆ ಎನ್ನಲಾಗಿದೆ.
6 ಕಿ.ಮೀ. ಸುರಂಗ ನಿರ್ಮಾಣಕ್ಕೆ ಭಾರತ ಸಜ್ಜು
ಭಾರತ-ಚೀನಾ ಗಡಿ ಭಾಗದಲ್ಲಿರುವ ಉತ್ತರಾಖಂಡದ ಘಟಿಯಾಬಗರ್ ಹಾಗೂ ಲಿಪುಲೇಖ್ ರಸ್ತೆಯಲ್ಲಿ ಬುಂಡಿ ಮತ್ತು ಗಾರ್ಬಿಯಂಗ್ ನಡುವೆ 6 ಕಿ.ಮೀ. ದೂರದ ಸುರಂಗ ನಿರ್ಮಿಸಲು ಭಾರತ ಸನ್ನದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಟಿನೋಕ್ ಇಂಡಿಯಾ ಕನ್ಸಲ್ಟೆಂಟ್ಸ್ ಸಂಸ್ಥೆಯು ಈಗಾಗಲೇ ಸಮೀಕ್ಷೆ ಆರಂಭಿಸಿದ್ದು, ಸುರಂಗ ನಿರ್ಮಾಣವಾದರೆ ಲಿಪುಲೇಖ್ ಪಾಸ್ನ ಕೊನೆಯ ಗಡಿ ಚೆಕ್ಪೋಸ್ಟ್ ಅನ್ನು ಸುಗಮವಾಗಿ ತಲುಪಲು ಸಹಾಯವಾಗಲಿದೆ. 2 ಸಾವಿರ ಕೋಟಿ ರೂ. ಮೌಲ್ಯದ ಈ ಯೋಜನೆ ಪೂರ್ಣಗೊಂಡರೆ ಗಡಿ ಕಾವಲು ಹೆಚ್ಚಿಸುವಲ್ಲಿ ಸೇನಾಪಡೆಗೆ ಹೆಚ್ಚಿನ ಬೆಂಬಲ ಬಂದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ