Viral Video: 51 ಕಿ.ಮೀ ಮದುವೆ ಮೆರವಣಿಗೆಗೆ 51 ಟ್ರ್ಯಾಕ್ಟರ್- ಒಂದಕ್ಕೆ ವರನೇ ಡ್ರೈವರ್!
Team Udayavani, Jun 13, 2023, 6:11 PM IST
ಬಾರ್ಮರ್ (ರಾಜಸ್ಥಾನ): ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ವಿಶಿಷ್ಟ ಮದುವೆ ಮೆರವಣಿಗೆ ನಡೆದಿದ್ದು, ಇದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ವಿವಾಹ ಮೆರವಣಿಗೆಯೊಂದರಲ್ಲಿ 51 ಟ್ರ್ಯಾಕ್ಟರ್ಗಳು 51 ಕಿ.ಮೀ ಮೆರವಣಿಗೆ ನಡೆಸಿದೆ. ಆ ಪೈಕಿ ಒಂದು ಟ್ರ್ಯಾಕ್ಟರ್ನ್ನು ವರನೇ ಓಡಿಸಿದ್ದು ಎಲ್ಲರ ಗಮನ ಸೆಳೆದಿದೆ.
ʻನನ್ನ ಮದುವೆ ಮೆರಣಿಗೆಯಲ್ಲಿ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನನ್ನ ಮಗನ ಮದುವೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್ ಬಳಸಿದ್ದೇವೆʼ ಎಂದು ವರನ ತಂದೆ ಹೇಳಿದ್ದಾರೆ.
ರಾಜಸ್ಥಾನದ ಗುಡಮಳನಿ ಗ್ರಾಮದ ಪ್ರಕಾಶ್ ಚೌಧರಿ ಎಂಬಾತ ರೋಲಿ ಗ್ರಾಮದ ಮಮತಾ ಎಂಬವರನ್ನು ಸೋಮವಾರ ಬೆಳಗ್ಗೆ ವರಿಸಿದ್ದರು. ಈ ವೇಳೆ ವರನ ಮನೆಯಿಂದ 51 ಕಿ.ಮೀ ದೂರದಲ್ಲಿರುವ ರೋಲಿ ಗ್ರಾಮದ ವಧುವಿನ ಮನೆಗೆ ಮದುವೆ ದಿಬ್ಬಣದ ಮೆರವಣಿಗೆ ನಡೆದಿದೆ. 51 ಟ್ರ್ಯಾಕ್ಟರ್ನಲ್ಲಿ ಬಂಧು-ಮಿತ್ರರಯು ಸೇರಿ 200 ಮಂದಿ ಮೆರವಣಿಗೆಯಲ್ಲಿ ಸಾಗಿದ್ದಾರೆ.
ʻಕೃಷಿ ನಮ್ಮ ಕುಟುಂಬದ ಪ್ರಮುಖ ವೃತ್ತಿ. ನಮ್ಮಲ್ಲಿ ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಟ್ರ್ಯಾಕ್ಟರ್ ಕೃಷಿಯ ಹೆಗುರುತಾಗಿದೆ. ನನ್ನ ತಂದೆಯ ಮದುವೆಗೆ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನ್ನನ ಮದುವಗೇಕೆ 51 ಟ್ರ್ಯಾಕ್ಟರ್ ಬಳಸಬಾರದು ಎಂಬುದಾಗಿ ನನ್ನ ತಂದೆ ಯೋಚಿಸಿದ್ದರು ಎಂಬುದಾಗಿ ವರ ಪ್ರಕಾಶ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: ‘ದೇಶಕ್ಕೆ ಮೋದಿ- ಮಹಾರಾಷ್ಟ್ರಕ್ಕೆ ಶಿಂಧೆ’; ಮೂಲೆಗುಂಪಾದರೆ ಫಡ್ನವಿಸ್? ಏನಿದು ಜಾಹೀರಾತು?
Video: Rajasthan Groom Drives To Wedding Venue With 51 Tractors In Tow https://t.co/blqtRjetwO pic.twitter.com/oocmQ5pd4l
— NDTV (@ndtv) June 13, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ