ನವಿ ಮುಂಬೈ; ಬೇಲಾಪುರ್ ನಿಂದ ಗೇಟ್ ವೇ ಆಫ್ ಇಂಡಿಯಾಕ್ಕೆ ವಾಟರ್ ಟ್ಯಾಕ್ಸಿ ಸೇವೆ ಆರಂಭ…ಏನಿದು?
ಬ್ಯುಸಿನೆಸ್ ಕ್ಲಾಸ್ ಡೆಕ್ ನಲ್ಲಿ 60 ಜನರು ಕುಳಿತು ಪ್ರಯಾಣಿಸಬಹುದಾಗಿದೆ
Team Udayavani, Feb 7, 2023, 5:04 PM IST
ಮಹಾರಾಷ್ಟ್ರ: ಮುಂಬೈಗೆ ಭೇಟಿ ನೀಡುವ ಪ್ರವಾಸಿಗರಿಗೆ, ಮುಂಬೈ ನಿವಾಸಿಗಳಿಗೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಹೌದು ಅದೇನೆಂದರೆ ನವಿ ಮುಂಬೈನ ಬೇಲಾಪುರ್ ಜೆಟ್ಟಿಯಿಂದ ಗೇಟ್ ವೇ ಆಫ್ ಇಂಡಿಯಾಗೆ ಮಂಗಳವಾರ (ಫೆ.07)ದಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ.
ಇದನ್ನೂ ಓದಿ:ಹೊಸ ಫೋನ್ ಕಳೆದುಕೊಂಡ ಕೊಹ್ಲಿಗೆ ಝೊಮ್ಯಾಟೋ ನೀಡಿದ ಉಪಾಯ ಫುಲ್ ವೈರಲ್
ಈ ವಾಟರ್ ಟ್ಯಾಕ್ಸಿ ಸೇವೆಯಿಂದ ಮುಂಬೈಗೆ ಪ್ರಯಾಣಿಸುವ ಸಮಯವನ್ನು ಇನ್ನಷ್ಟು ಕಡಿಮೆ ಮಾಡಲಿದೆ ಎಂದು ವರದಿ ತಿಳಿಸಿದೆ.ಮಂಗಳವಾರ ಬೇಲಾಪುರ್ ಜೆಟ್ಟಿಯಲ್ಲಿ ಮಹಾರಾಷ್ಟ್ರದ ಬಂದರು ಅಭಿವೃದ್ಧಿ ಸಚಿವ ದಾದಾಜಿ ಭೂಸೆ ವಾಟರ್ ಟ್ಯಾಕ್ಸಿ ಸೇವೆಯನ್ನು ಉದ್ಘಾಟಿಸಿದ್ದರು. ವಾಟರ್ ಟ್ಯಾಕ್ಸಿ “ನಯಾನ್ XI” ನಲ್ಲಿನ ಕೆಳಗಿನ ಬರ್ತ್ ನಲ್ಲಿ 140 ಪ್ರಯಾಣಿಕರು ಹಾಗೂ ಮೇಲ್ಗಡೆಯ ಬ್ಯುಸಿನೆಸ್ ಕ್ಲಾಸ್ ಡೆಕ್ ನಲ್ಲಿ 60 ಜನರು ಕುಳಿತು ಪ್ರಯಾಣಿಸಬಹುದಾಗಿದೆ ಎಂದು ವರದಿ ವಿವರಿಸಿದೆ.
ವಾಟರ್ ಟ್ಯಾಕ್ಸಿ ಬೇಲಾಪುರದಿಂದ ಬೆಳಗ್ಗೆ 8-30ಕ್ಕೆ ಹೊರಟು, 9-25ಕ್ಕೆ ಗೇಟ್ ವೇ ಆಫ್ ಇಂಡಿಯಾ ತಲುಪಲಿದೆ. ನಂತರ ವಾಟರ್ ಟ್ಯಾಕ್ಸಿ ಸಂಜೆ 6-30ಕ್ಕೆ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟು ರಾತ್ರಿ 7-30ಕ್ಕೆ ಬೇಲಾಪುರ್ ಜೆಟ್ಟಿ ತಲುಪಲಿದೆ ಎಂದು ಭೂಸೆ ತಿಳಿಸಿದ್ದಾರೆ.
#Watertaxi services from #Belapur to south #Mumbai were flagged off today. Here are glimpses of ‘Nayan XI’ before it sailed toward #GatewayofIndia
🎥 @s_amit007 #Mumbai #NaviMumbai #Transport pic.twitter.com/ROGNttu8Ui— Free Press Journal (@fpjindia) February 7, 2023
ಹೇಗಿರಲಿದೆ ವಾಟರ್ ಟ್ಯಾಕ್ಸಿ ಸೇವೆ:
*ಸೋಮವಾರದಿಂದ ಶುಕ್ರವಾರದವರೆಗೆ ವಾಟರ್ ಟ್ಯಾಕ್ಸಿ ಸೇವೆ ಲಭ್ಯ. ವಾರಾಂತ್ಯದಲ್ಲಿ ವಾಟರ್ ಟ್ಯಾಕ್ಸಿ ಸೇವೆ ಇರಲ್ಲ.
*ವಾಟರ್ ಟ್ಯಾಕ್ಸಿಯಲ್ಲಿ ತೆರಳುವವರಿಗೆ www.myboatride.com ನಲ್ಲಿ ಟಿಕೆಟ್ ಪಡೆಯಬಹುದಾಗಿದ್ದು, ಲೋವರ್ (ಕೆಳಗಿನ ಡೆಕ್) ಡೆಕ್ ಗೆ 250 ರೂಪಾಯಿ ಹಾಗೂ ಬ್ಯುಸಿನೆಸ್ ಕ್ಲಾಸ್ ಡೆಕ್ ಗೆ 350 ರೂಪಾಯಿ
ಈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ್ದ ಸಚಿವ ಭೂಸೆ, ವಾಟರ್ ಟ್ಯಾಕ್ಸಿ ದರವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಸಮಯದ ಉಳಿತಾಯಕ್ಕೆ ಮತ್ತು ಪರಿಸರ ಸ್ನೇಹಿಯಾಗಿರುವುದರಿಂದ ವಾಟರ್ ಟ್ಯಾಕ್ಸಿ ಸೇವೆ ತುಂಬಾ ಮುಖ್ಯವಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೆಟ್ಟಿಯ ಸಮೀಪ ಇರುವುದರಿಂದ ಈ ಸೇವೆ ಮುಖ್ಯವಾಗಿದೆ ಎಂದು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?