ನಮಗೆ ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು: ಸಿ.ಟಿ.ರವಿ
ಕಟು, ಮೃದು ಎಂದಿಲ್ಲ, ಹಿಂದುತ್ವ ಅಂದ್ರೆ ಹಿಂದುತ್ವ ಮಾತ್ರ
Team Udayavani, Mar 11, 2022, 3:03 PM IST
ಬೆಂಗಳೂರು : ಎಲ್ಲರನ್ನೂ ಒಳಗೊಳ್ಳುವುದೇ ನಿಜವಾದ ಹಿಂದುತ್ವ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಾಖ್ಯಾನಿಸಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟು ಹಿಂದುತ್ವ ಪ್ರತಿಪಾದನೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವನ್ನು ಜಾತಿವಾದಿಗಳು ತಪ್ಪಾಗಿ ಅರ್ಥೈಸಿದರು. ಕಟು, ಮೃದು ಎಂದಿಲ್ಲ, ಹಿಂದುತ್ವ ಅಂದ್ರೆ ಹಿಂದುತ್ವ ಮಾತ್ರ. ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು.ಸರ್ವೇಜನೋ ಸುಖಿನೋಭವಂತು ಇದೇ ಹಿಂದುತ್ವ.ಸಿದ್ದರಾಮಯ್ಯನಂತಹವರು ಹಿಂದುತ್ವವನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದರು. ಸಬ್ ಕಾ ಸಾಥ್ ಸಬ್ ಕಾ ವಿನಾಶ್ ಎಂಬುದು ಅವರ ವಾದ. ಸಿದ್ದರಾಮಯ್ಯಗೆ ಕೇಸರಿ ಶಾಲು ಬೇಡ, ಸಾಬರ ಟೋಪಿ ಬೇಕು. ನಮಗೆ ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದೇ ಹಿಂದುತ್ವ ಎಂದು ಅಭಿಪ್ರಾಯಪಟ್ಟರು.
ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡಿದ್ದರು.ನಾಲ್ಕು ರಾಜ್ಯಗಳಲ್ಲಿ ಆಡಳಿತ ಪರವಾದ ಅಲೆ ಇತ್ತು.ಪಂಜಾಬ್ ನಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಉತ್ತರ ಪ್ರದೇಶ ಸ್ಪರ್ಧೆ ಮಾಡಿದ ಶೇಕಡ 99 ರಷ್ಟು ಕಡೆ ಕಾಂಗ್ರೆಸ್ ಡೆಪಾಸಿಟ್ ಕಳೆದುಕೊಂಡಿದೆ. ಗೋವಾದಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದೇವೆ. ಮೂರನೇ ಭಾರಿ ಅಧಿಕಾರಕ್ಕೆ ನಮ್ಮನ್ನ ಕೂರಿಸಿದ್ದಾರೆ ಎಂದರು.
ಮಣಿಪುರ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.ನಾಲ್ಕು ರಾಜ್ಯದ ಗೆಲುವಿಗೆ ಕರ್ನಾಟಕದ ಕಾರ್ಯಕರ್ತರು ಅಳಿಲು ಸೇವೆ ಸಲ್ಲಿಸಿದ್ದಾರೆ.ಮುಂದೆ ಗುಜರಾತ್,ಕರ್ನಾಟಕ ವಿಧಾನಸಭಾ ಚುನಾವಣೆ ಕೂಡ ಬರಲಿದೆ.ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ನಡೆಯುತ್ತಿದೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ನಿರ್ಣಯ ಆಗಬೇಕಿದೆ ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಕೆಲವರು ಖಾತೆಗಳನ್ನೂ ಫಿಕ್ಸ್ ಮಾಡ್ಕೊಂಡಿದ್ದಾರೆ.ಇಂತಿಂಥವರು ಇಂತಿಂಥ ಖಾತೆ ನಿರ್ವಹಿಸಬೇಕು ಅನ್ನೋದನ್ನು ನಿಗದಿ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆ ಬರಲ್ಲ, ಮತ್ತೆ ಬಿಜೆಪಿಯೇ ಅಧಿಕಾರ ಹಿಡಿಯುತ್ತೆ ಎಂದರು.
ನಾಲ್ಕು ರಾಜ್ಯಗಳಲ್ಲಿ ಬಂದ ಫಲಿತಾಂಶವೇ ಕರ್ನಾಟಕದಲ್ಲೂ ಬರಲಿದೆ.ಕರ್ನಾಟಕದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ.ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಹೊಸ ಪಂಚೆ, ಶಲ್ಯ ಕೊಂಡ್ಕೊಂಡವರಿದ್ದಾರೆ. ಕೋಟು, ಸೂಟು ಹೊಲಿಸ್ಕೊಂಡವರೂ ಇದ್ದಾರೆ. ಅವರ ಕನಸು ಇಲ್ಲಿ ನನಸಾಗಲ್ಲ ಎಂದರು.
ಕೆಲವು ವಿಚಾರ ನಾನು ಬಹಿರಂಗ ಮಾತಾಡಲು ಆಗುವುದಿಲ್ಲ.ಹಾಗೆ ಮಾತಾಡಿದರೆ ವಿವಾದ ಆಗಬಹುದುನಮ್ಮ ಪಕ್ಷದ ದುರ್ಬಲತೆಗೆ ಯಾವ ಟಾನಿಕ್ ಕೊಡ್ಬೇಕೋ ಅದನ್ನು ಕೊಡ್ತೀವಿ. ನಮ್ಮ ಸಾಮರ್ಥ್ಯ, ನಮ್ಮ ಮಿತಿ ನಮಗೆ ಗೊತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು