ವೀಕೆಂಡ್ ಕರ್ಪ್ಯೂ: ಶಿರಸಿ ನಗರದಲ್ಲಿರುವ ಗ್ರಾಮೀಣ ರೈತರಿಗೆ ವಿನಾಯಿತಿಗೆ ಆಗ್ರಹ
Team Udayavani, Jan 7, 2022, 3:13 PM IST
ಶಿರಸಿ: ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊಂದಿ, ನಗರ ಪ್ರದೇಶದಲ್ಲಿ ವಾಸ್ತವ್ಯ ಮಾಡುತ್ತಿರುವ ರೈತಾಪಿ ಕುಟುಂಬದ ಸದಸ್ಯರಿಗೆ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ನಗರ ವಾಸ್ತವ್ಯದ ಸ್ಥಳದಿಂದ ಕೃಷಿ ಕ್ಷೇತ್ರಕ್ಕೆ ಓಡಾಡಲು ವಿನಾಯಿತಿ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ಅಗ್ರಹಿಸಿದ್ದಾರೆ.
ಕೃಷಿ ಭೂಮಿ ಗ್ರಾಮೀಣ ಭಾಗದಲ್ಲಿ ಹೊಂದಿರುವ ಮತ್ತು ನಗರ ಪ್ರದೇಶದಲ್ಲಿ ಮನೆ ಹೊಂದಿರುವಂತಹ ರೈತಾಪಿ ಕುಟುಂಬದ ಸದಸ್ಯರು ದಿನನಿತ್ಯ ಕೃಷಿ ಚಟುವಟಿಕೆಗೆ ಗ್ರಾಮೀಣ ಭಾಗಕ್ಕೆ ಓಡಾಡುವುದು ಅನಿವಾರ್ಯವಾಗಿರುತ್ತದೆ. ಇಂತಹ ರೈತಾಪಿ ಕುಟುಂಬದ ಸದಸ್ಯರಿಗೆ ವೀಕೆಂಡ್ ಕರ್ಪ್ಯೂನಿಂದ ಕೃಷಿ ಚಟುವಟಿಕೆಗೆ ನಿರ್ಭಂದಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊಂದಿ ಪಹಣಿ ಪತ್ರಿಕೆ ಹೊಂದಿರುವಂತಹ ರೈತ ಕುಟುಂಬಗಳಿಗೆ ಅವಶ್ಯ ಚಟುವಟಿಕೆಗಳಿಗೆ ವೀಕೆಂಡ್ ಕರ್ಪ್ಯೂದಿಂದ ವಿನಾಯಿತಿ ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
ಗ್ರಾಮೀಣ ರೈತರು ಕೃಷಿ ಪೂರಕ ಚಟುವಟಿಕೆಗೆ ಸಂಬಂಧಿಸಿ ನಗರ ಪ್ರದೇಶಕ್ಕೆ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ, ಪಹಣಿ ಪತ್ರಿಕೆಯ ದಾಖಲೆ ಹೊಂದಿರುವಂತಹ ರೈತ ಕುಟುಂಬ ಸದಸ್ಯರಿಗೂ ನಗರ ಪ್ರದೇಶದಲ್ಲಿ ಸಂಚರಿಸುವ ಸಂದರ್ಭದಲ್ಲಿ ಕಿರುಕುಳ ಮತ್ತು ತೊಂದರೆ ಆಗದ ರೀತಿಯಲ್ಲಿ ಜಿಲ್ಲಾಡಳಿತವು ಕ್ರಮ ಜರುಗಿಸಬೇಕೆಂದು ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ