ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಏಕೆ?


Team Udayavani, Mar 11, 2021, 6:20 AM IST

ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಏಕೆ?

ಮಹಿಳೆ, ಹೆಣ್ಣು, ಸ್ತ್ರೀ.. ಈ ಪದಗಳ ಅರ್ಥ ಬಹಳ ವಿಶಾಲವಾದದ್ದು ಮಾತ್ರವಲ್ಲದೆ ಅಷ್ಟೇ ಅಪ್ಯಾಯ ಮಾನವಾದದ್ದು. ಹೆಣ್ಣು ಒಂದು ಪೂರ್ಣ ವೃತ್ತವಿದ್ದಂತೆ. ಆ ಪೂರ್ಣ ವೃತ್ತದೊಳಗೆ ಏನೆಲ್ಲ ಇರಬೇಕು ಅವೆಲ್ಲ ಅಂತರ್ಗತವಾಗಿರುತ್ತದೆ. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಈ ಮಾತಿನಲ್ಲಿ ಹೆಣ್ಣು ಎಂಬ ಪದಕ್ಕೆ ವಿಶಾಲವಾದ ವ್ಯಾಖ್ಯಾನ ಸಿಗುತ್ತದೆ. ಹೆಣ್ಣು ಎಲ್ಲವನ್ನು ಸಮದೂಗಿಸುವ ಜಾಣೆ, ತ್ಯಾಗಮಯಿ.

ಅಪ್ಪ ಅಂದರೆ ಆಕಾಶ ಏನೋ ನಿಜ, ಆದರೆ ಅಮ್ಮ ಅಂದರೆ ಈ ಭೂಮಿ. ಇವಳಲ್ಲಿ ಸ್ವೀಕಾರವೂ ಇದೆ, ಸವಾಲೂ ಇದೆ. ಇಷ್ಟೆಲ್ಲ ಇದ್ದರೂ ಹೆಣ್ಣು ಅಸಹಾಯಕಿ, ಅಶಕ್ತೆ ಎಂದು ಬಿಂಬಿಸುವ ಎಷ್ಟೋ ಘಟನೆಗಳು ಇಂದಿಗೂ ನಡೆಯುತ್ತಿವೆ. ಎಷ್ಟೇ ಕ್ರಿಯಾಶೀಲೆಯಾಗಿರೂ ಎಲ್ಲ ಕ್ಷೇತ್ರಗಳಲ್ಲೂ ತನ್ನ ಬಾಹುಗಳನ್ನು ಚಾಚಿದ್ದರೂ ಸಶಕ್ತೀಕರಣ ಅನ್ನುವುದು ಮಹಿಳೆಯರ ಮಟ್ಟಿಗೆ ಆಧುನಿಕ ಜಗತ್ತಿನ ಅತೀ ಆವಶ್ಯಕತೆಗಳಲ್ಲಿ ಒಂದು. ಒಂದಲ್ಲ ಒಂದು ಕಾರಣ ಗಳಿಂದ ಒಳಗೊಳಗೆ ಬೆಂದು ಬಸವಳಿಯುವ ಕಣ್ಣು ಈ ಹೆಣ್ಣು ಎಂದರೆ ತಪ್ಪಾಗಲಾರದು. ಯಂಡಮೂರಿ ವೀರೇಂದ್ರನಾಥ್‌ ಹೇಳಿದಂತೆ ಬದುಕಿನಲ್ಲಿ ಎದುರಾಗುವ ಹೊಸ ಅನುಭವಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಟುಸತ್ಯವನ್ನು ಜೀರ್ಣಿಸಿಕೊಳ್ಳುತ್ತ ಮುಂದೆ ಸಾಗುವ ವ್ಯಕ್ತಿತ್ವವೇ ಮಾನಸಿಕ ಬೆಳವಣಿಗೆ ಅಥವಾ ಮನೋವಿಕಾಸ. ಪ್ರತೀ ಮಹಿಳೆಯಲ್ಲೂ ಈ ರೀತಿಯ ಮಾನಸಿಕ ಬೆಳವಣಿಗೆಯಾದಲ್ಲಿ ಮಹಿಳೆಯ ಸಶಕ್ತೀಕರಣ ಸಾಧ್ಯ. ಮಹಿಳೆ ತನ್ನನ್ನು ತಾನು ಶಕ್ತಿ ಎಂದು ಒಪ್ಪಿಕೊಳ್ಳುವುದು, ತನ್ನ ಸಂಪನ್ಮೂಲಗಳ ಮೇಲೆ ನಿಯಂತ್ರಣ, ಆತ್ಮವಿಶ್ವಾಸ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದಿಟ್ಟತನದಿಂದ ಬಂದು ದೆಲ್ಲವನ್ನು ಎದುರಿಸುವುದು.. ಇವೆಲ್ಲವೂ ಮಹಿಳಾ ಸಶಕ್ತೀಕರಣದ ಪ್ರಮುಖ ಅಂಶಗಳು.

ಮಹಿಳೆ ಮನೆಗಷ್ಟೇ ಸೀಮಿತವಲ್ಲ, ಮನೆಯಿಂದಾಚೆ ಸಪ್ತಸಾಗರದಾಚೆಗೆ ದಾಟಿ, ಬಾಹ್ಯಾಕಾಶದಲ್ಲಿ ಕೂಡ ಪಯಣಿಸಿ, ಇಂದಿನ ಆಧುನಿಕ ಯುಗದ ಮಹಿಳೆ ಯರ ಸ್ಥಾನಮಾನಗಳನ್ನು ಹೆಚ್ಚಿಸಿದ್ದಾರೆ. ಗುರುತರ ಜವಾಬ್ದಾರಿ ನಿಭಾಯಿಸಿ, ಪುರುಷ ಸಮಾನವಾದ ಕರ್ತವ್ಯ ಬದ್ಧತೆ ಮೆರೆದಿದ್ದಾರೆ.

ಭಾರತೀಯ ಸಂವಿಧಾನವು ಅನುಚ್ಛೇದ 14 ಮತ್ತು 39ರ ಅಡಿಯಲ್ಲಿ ಮಹಿಳೆಯರಿಗೆ ಲಿಂಗ ತಾರತಮ್ಯ ರಹಿತ ಸಮಾನ ಅವಕಾಶ ಕಲ್ಪಿಸಿದೆ. ನಗರ ಪ್ರದೇಶಗಳಿಂದ ಹಿಡಿದು ಹಳ್ಳಿಹಳ್ಳಿಗಳಲ್ಲೂ ಹುಟ್ಟಿಕೊಂಡ ಸ್ತ್ರೀಶಕ್ತಿ ಸಂಘಗಳು ಮಹಿಳೆಯರು ಹೊರ ಪ್ರಪಂಚದ ಜ್ಞಾನವನ್ನು ಪಡೆದು ಸ್ವಾವಲಂಬಿಗಳಾಗಲು ನೆರವಾಗಿದೆ. ಸ್ವಯಂ ವಿಶ್ವಾಸ, ಧೈರ್ಯ, ಸ್ವಾವ ಲಂಬನೆಯ ಬದುಕಿಗೆ ಹೆಣ್ಣನ್ನು ತೆರೆದಿಟ್ಟಿದೆ. ಆಧುನಿಕ ಜಗದಲ್ಲಿ ಪ್ರತೀ ಮನೆಯ ಹೆಣ್ಣು ಸಂಸಾರದ ನೊಗ ಹೊತ್ತು ಮನೆಯ ಒಳಗೂ ಹೊರಗೂ ದುಡಿದು ಸಶಕ್ತೆ ಅನ್ನಿಸಿಕೊಂಡಿದ್ದಾಳೆ. ಸಂಸಾರದಲ್ಲಿ ಇದ್ದುಕೊಂಡು ಔದ್ಯೋಗಿಕ ಕ್ಷೇತ್ರದಲ್ಲಿ ಸಫ‌ಲತೆ ಪಡೆಯಲು ಸುಲಭ ಸಾಧ್ಯವಿಲ್ಲ. ಆದರೆ ಹೆಣ್ಣು ಈ ದಿಕ್ಕಿನಲ್ಲೂ ಮುಂದುವರಿದು ಸರ್ವಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಸಮಾನತೆ ಮೆರೆದಿದ್ದಾಳೆ. ಸರ್ವಶಕ್ತೆಯಾದ ಹೆಣ್ಣಿಗೆ ಅಶಕ್ತೆಯ ಭಾವ ಕಾಡುವುದಾದರೂ ಏಕೆ?. ಯಾವಾಗ ಹೆಣ್ಣು ಸ್ವತಃ ತನ್ನಲ್ಲಿ ತಾನು ವಿಶ್ವಾಸವನ್ನು ಇರಿಸಿ, ಧೈರ್ಯದಿಂದ ಹೆಜ್ಜೆ ಮುಂದಿಡುವ ಸಂಕಲ್ಪ ಮಾಡುವಳ್ಳೋ, ಆವಾಗ ಹೆಣ್ಣಿನ ಸಶಕ್ತೀಕರಣ ಸಾಧ್ಯ. ಆತ್ಮವಿಶ್ವಾಸ, ಎಲ್ಲವನ್ನೂ ಸಾಧಿಸಬಲ್ಲೆ ಎನ್ನುವ ಭರವಸೆಯ ತುಡಿತ, ಹಿಡಿದ ಛಲ ಬಿಡದೆ ಮುನ್ನುಗ್ಗುವಿಕೆ, ಪೊಳ್ಳು ಅಪವಾದಗಳಿಗೆ ತಲೆಬಾಗದೆ ಸ್ವಂತಿಕೆ ಬೆರೆತ ಜೀವನೋತ್ಸಾಹ, ಅಪರಿಮಿತ ಧೈರ್ಯ ಜತೆಗೂಡಿದಾಗ ಹೆಣ್ಣು ಸಶಕ್ತೆಯಾಗಬಲ್ಲಳು.
- ಮಂಜುಳಾ ಪ್ರಸಾದ್‌, ದಾವಣಗೆರೆ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.