ವಿಧಾನ ಕದನ 2023: ಕುಂದಾಪುರಕ್ಕೆ ಆರನೇ ಬಾರಿಗೂ ಹಾಲಾಡಿಯವರಾ?

ಕಾಂಗ್ರೆಸ್‌ನಲ್ಲಿ ಎದುರಾಳಿ ಕಂಡು ಲೆಕ್ಕಾಚಾರ

Team Udayavani, Mar 17, 2023, 8:00 AM IST

kundapur

ಕುಂದಾಪುರ: ನಾಲ್ಕು ಬಾರಿ ಬಿಜೆಪಿಯಿಂದ, ಒಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿ ವಿಜಯದ ಸರಪಳಿ ಕಡಿಯದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಈ ಬಾರಿಯೂ ಅವಕಾಶ ಸಿಕ್ಕರೆ ಕಣಕ್ಕಿಳಿಯುವ ಹುರಿಯಾಳು. ಕಾಂಗ್ರೆಸ್‌ನಿಂದ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಯಾರಿಗೆ ಅವಕಾಶ ಸಿಗುತ್ತದೆಂಬ ಲೆಕ್ಕಾಚಾರ ನಡೆದಿದೆ.

ಬಿಜೆಪಿ ವರಿಷ್ಠರು ಆಗಾಗ ಹೇಳುತ್ತಿರುವ ಅಭ್ಯರ್ಥಿ ಬದಲಾವಣೆ ಕುಂದಾಪುರ ಕ್ಷೇತ್ರದಲ್ಲಿ ನಡೆಯಲಿದೆಯೇ, 70 ವಯೋಮಾನ ದಾಟಿದವರಿಗೆ ಟಿಕೆಟ್‌ ನಿರಾಕರಿಸಲಾಗುತ್ತದೆಯೇ, 72 ವಯಸ್ಸಿನ ಹಾಲಾಡಿ ಅವರನ್ನು ಬದಲಿಸಿದರೆ ಬಿಜೆಪಿ ಈ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಕಾಪಿಟ್ಟುಕೊಳ್ಳಲು ಯಾವ ತಂತ್ರಗಾರಿಕೆ ಮಾಡುತ್ತದೆ ಎಂಬುದು ರಹಸ್ಯವಾಗಿಯೇ ಇದೆ. ಈ ಮಧ್ಯೆ ಹಾಲಾಡಿ ಅವರು ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ.

ಬಿಜೆಪಿಯಲ್ಲೂ ಆಕಾಂಕ್ಷಿಗಳು
ಒಂದು ವೇಳೆ ಹಾಲಾಡಿ ಅವರ ಬದಲಿಗೆ ಎಂಬ ಪ್ರಶ್ನೆ ಉದ್ಭವಿಸಿದರೆ ಎಂಬುದಕ್ಕೆ ಸದ್ಯ ಕ್ಷೇತ್ರದಲ್ಲಿ ಓಡಾಡುತ್ತಿರುವ ಹೆಸರುಗಳೆಂದರೆ ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರದು. ಕೋಟ ಶ್ರೀನಿವಾಸ ಪೂಜಾರಿ ಅಥವಾ ಅಚ್ಚರಿಯ ಆಯ್ಕೆಯಾಗಿ ಸಾಮಾನ್ಯ ಕಾರ್ಯಕರ್ತನೂ ಸ್ಪರ್ಧಿಸಲೂಬಹುದು ಎಂಬ ಅಭಿಪ್ರಾಯವೂ ಇದೆ.

ಕಾಂಗ್ರೆಸ್‌ನಲ್ಲಿ ಹೇಗಿದೆ
1999ರಿಂದ ಕಳೆದುಕೊಂಡ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ. ಕಾಂಗ್ರೆಸ್‌ನಿಂದ ಈ ಹಿಂದೆ ಸ್ಪರ್ಧಿಸಿದ ಮಲ್ಯಾಡಿ ಶಿವರಾಮ ಶೆಟ್ಟರು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಪ್ರತಾಪಚಂದ್ರ ಶೆಟ್ಟರ ಹೆಸರಿಗೆ ಕಾರ್ಯಕರ್ತರ ಅಭಯಮುದ್ರೆ ಇದ್ದರೂ ಸುಲಭದಲ್ಲಿ ದೊರೆತ ವಿಧಾನಪರಿಷತ್‌ ಅನ್ನೇ ತೊರೆದವರು ಇಲ್ಲಿ ಸ್ಪರ್ಧೆಗೆ ಇಳಿಯುತ್ತಾರೆಯೇ ಎಂಬ ಪ್ರಶ್ನೆ ಇದೆ. ಕಳೆದ ಬಾರಿ ಸ್ಪರ್ಧಿಸಿದ್ದ ರಾಕೇಶ್‌ ಮಲ್ಲಿಯವರೂ ಬಂಟ್ವಾಳದತ್ತ ಕಣ್ಣು ನೆಟ್ಟಿದ್ದಾರೆ. ಉಳಿದಂತೆೆ ಮೊಳಹಳ್ಳಿ ದಿನೇಶ ಹೆಗ್ಡೆ, ಶ್ಯಾಮಲಾ ಭಂಡಾರಿ, ಅಶೋಕ್‌ ಪೂಜಾರಿ ಬೀಜಾಡಿ ಮತ್ತಿತರರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು ಆಕಾಂಕ್ಷಿಗಳು ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ.

ಬಂಟರ ಹಿಡಿತ
ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಹೊರತುಪಡಿಸಿ 1952ರಿಂದ ಈವರೆಗೆ ಈ ಕ್ಷೇತ್ರದಲ್ಲಿ ಗೆದ್ದವರು ಬಂಟರು ಎನ್ನುವುದು ಗಮನಾರ್ಹ. ಈ ಸೂಕ್ಷ$ಗಮನಿ ಸಿಯೇ ಬಿಜೆಪಿ ಮತ್ತು ಕಾಂಗ್ರೆಸ್‌ ಆಖಾಡಕ್ಕೆ ಇಳಿಯುತ್ತದೆ. ಈ ಬಾರಿ ಆ ಸಂಪ್ರದಾಯ ಮುರಿಯುವುದೇ ಎಂಬುದು ಬಿಜೆಪಿಯ ಹೊಸ ಪ್ರಯೋಗದ ಮೇಲೆ ಅವಲಂಬಿಸಿದ್ದು, ಬದಲಾವಣೆಯ ಪರಿಣಾಮಗಳನ್ನೂ ಲೆಕ್ಕ ಹಾಕಲಾಗುತ್ತಿದೆ. ಗುಜರಾತ್‌ ಮಾದರಿ ಇಲ್ಲಿಗೆ ಅನ್ವಯವಾಗುವುದೇ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

~ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

TrainMangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Mangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollur ಕೋವಿಯಿಂದ ಗುಂಡಿಕ್ಕಿ ದನ ಹತ್ಯೆ

Kollur ಕೋವಿಯಿಂದ ಗುಂಡಿಕ್ಕಿ ದನ ಹತ್ಯೆ

Gangolli ಬೈಕ್‌ಗೆ ಗೂಡ್ಸ್‌ ಢಿಕ್ಕಿ ; ಸವಾರಗೆ ಗಾಯ

Gangolli ಬೈಕ್‌ಗೆ ಗೂಡ್ಸ್‌ ಢಿಕ್ಕಿ ; ಸವಾರನಿಗೆ ಗಾಯ

1-sadasa-d

Thekkatte; ಬೇಳೂರು ಗ್ರಾಮಸಭೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು

1-sadadas

Tragedy: ಹೆಮ್ಮಾಡಿಯಲ್ಲಿ ತುಂಡಾದ ವಿದ್ಯುತ್‌ ತಂತಿ ತಗುಲಿ ದಂಪತಿ ದುರ್ಮರಣ

Kundapura: ಗಂಗಡಬೈಲು ಸೇತುವೆ ಕಾಮಗಾರಿ ಅಪೂರ್ಣ; ಸಂಚಾರ ದುಸ್ತರ

Kundapura: ಗಂಗಡಬೈಲು ಸೇತುವೆ ಕಾಮಗಾರಿ ಅಪೂರ್ಣ; ಸಂಚಾರ ದುಸ್ತರ

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

SIDDU IMP

Karnataka: ಏಳನೇ ವೇತನ ಆಯೋಗದ ಅಧ್ಯಕ್ಷ , ಸದಸ್ಯರ ಜತೆ ಸಿಎಂ ಸಭೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.