ಮನುಕುಲದ ಉಳಿವಿಗೆ ಹವಾಮಾನವೇ ಶ್ರೀರಕ್ಷೆ: ಇಂದು ವಿಶ್ವ ಹವಾಮಾನ ದಿನ
Team Udayavani, Mar 23, 2021, 7:15 AM IST
ಇಂದು ವಿಶ್ವ ಹವಾಮಾನ ದಿನ. ಹವಾಮಾನ ನಮ್ಮ ದೈನಂದಿನ ಜೀವನದೊಂದಿಗೆ ಅಗಾಧವಾಗಿ ಬೆಸೆದುಕೊಂಡಿರುವ ಅಂಶವಾಗಿದೆ. ಹವಾಮಾನ ಸಹಜವಾಗಿದ್ದರೆ ಮಾತ್ರ ಮನುಷ್ಯ ಜೀವನ ಕೂಡ ಏರುಪೇರು ಇಲ್ಲದೆ ಸಹಜವಾಗಿರಲು ಸಾಧ್ಯ. ಅದೇ ಕೆಟ್ಟ ಹವಾಮಾನವಿದ್ದರೆ ಅವರ ದೈನಂದಿನ ಕೆಲಸ ಕಾರ್ಯಗಳು ವ್ಯತ್ಯಯವಾಗುತ್ತವೆ.
ದಿನದ ಹಿನ್ನೆಲೆ: 1950ರ ಮಾರ್ಚ್ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು.
ಈ ವರ್ಷ ದಿನದ ವಿಷಯವೆಂದರೆ ‘The ocean, our climate and weather’. ಹವಾಮಾನದ ವಿಷಯಕ್ಕೆ ಬಂದಾಗ ಸಾಗರವು ಇಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಭೂಮಿಯ ಮೇಲ್ಮೆ„ಯ ಶೇ. 70ರಷ್ಟು ಭಾಗವನ್ನು ಒಳಗೊಂಡಿದೆ.
ಅಪಾಯದಲ್ಲಿ ಸಾಗರ: ಶೇ. 90ರಷ್ಟು ಹೆಚ್ಚುವರಿ ಶಾಖವನ್ನು ಸಾಗರವು ಹೀರಿಕೊಳ್ಳುತ್ತದೆ. ಹೀಗಾಗಿ ಸಾಗರವು ಹವಾಮಾನ ಬದಲಾವಣೆಯ ಪರಿಣಾಮವಾಗಿ ಹೆಚ್ಚುತ್ತಿರುವ ತಾಪಮಾನದಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಸಾಗರ ತಾಪಮಾನ ಏರಿಕೆ ಮತ್ತು ಸಾಗರ ರಸಾಯನಶಾಸ್ತ್ರದಲ್ಲಿನ ಬದಲಾವಣೆಗಳು ಈಗಾಗಲೇ ಸಮುದ್ರ ಪರಿಸರ ವ್ಯವಸ್ಥೆಗಳನ್ನು ಕಲುಷಿತಗೊಳಿಸಿದೆ.
ದ್ವೀಪಗಳಿಗೆ ಅಪಾಯ: ಸಮುದ್ರ ಮಟ್ಟ ಏರಿಕೆ ಮತ್ತು ಹೆಚ್ಚು ತೀವ್ರವಾದ ಚಂಡಮಾರುತದ ಘಟನೆಗಳು ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಸಂಭವಿಸುವ ತೀವ್ರ ಸಮುದ್ರಮಟ್ಟದ ಘಟನೆಗಳ ಆವರ್ತನವನ್ನು ಹೆಚ್ಚಿಸುತ್ತದೆ. ಅನೇಕ ತಗ್ಗು ಪ್ರದೇಶದ ಕರಾವಳಿ ನಗರಗಳು ಮತ್ತು ಸಣ್ಣ ದ್ವೀಪಗಳಿಗೆ ಹೆಚ್ಚಿನ ಅಪಾಯಗಳನ್ನುಂಟುಮಾಡಲಿದೆ.
ಸುಸ್ಥಿರ ಅಭಿವೃದ್ಧಿಗೆ ಸಾಗರ ವಿಜ್ಞಾನ: ಸಮುದ್ರದ ಉಷ್ಣತೆ ವಿಪರೀತ ಹೆಚ್ಚಾದ ಪರಿಣಾಮ ಮಂಜುಗಡ್ಡೆ ಕರಗುತ್ತಿದೆ. 2020ರಲ್ಲಿ, ಆರ್ಕ್ಟಿಕ್ ಸಮುದ್ರದಲ್ಲಿ ಹಿಮದ ಪ್ರಮಾಣ ಕನಿಷ್ಠ ದಾಖಲೆಯಲ್ಲಿ ಕಡಿಮೆಯಾಗಿದೆ. 2100ರ ವೇಳೆಗೆ ಸಾಗರವು ನಾಲ್ಕು ಪಟ್ಟು ಹೆಚ್ಚಿನ ಶಾಖವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ