ಯಮುನೋತ್ರಿ ರೋಪ್ ವೇಗೆ ಹಸಿರು ನಿಶಾನೆ: 5 ಗಂಟೆ ಪ್ರಯಾಣಕ್ಕೆ ಕೇವಲ 10 ನಿಮಿಷ ಸಾಕು!
ಬಹುಕಾಲದ ಬೇಡಿಕೆ ಈಡೇರುತ್ತಿರುವುದರ ಬಗ್ಗೆ ದೇಗುಲದ ಅರ್ಚಕರು ಸಂತಸ ವ್ಯಕ್ತಪಡಿಸಿದ್ದಾರೆ.
Team Udayavani, Feb 15, 2023, 1:12 PM IST
ಡೆಹ್ರಾಡೂನ್(ಉತ್ತರಾಖಂಡ್): ಸುಮಾರು ಒಂದು ದಶಕಗಳ ವಿಳಂಬದ ನಂತರ ಯಮುನೋತ್ರಿ ಯಾತ್ರಾರ್ಥಿಗಳಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದ್ದು, ಯಮುನೋತ್ರಿ ದೇಗುಲಕ್ಕೆ ರೋಪ್ ವೇ ನಿರ್ಮಿಸುವ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಾಗಿ ಬುಧವಾರ (ಫೆ.15) ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಾ- ನತಾಶಾ ಪುನರ್ ವಿವಾಹ: ಜೋಡಿಯ ಡ್ಯಾನ್ಸ್ ಸ್ಟೆಪ್ ಸಖತ್ ವೈರಲ್
ಯಮುನೋತ್ರಿ ದೇಗುಲ ಹಾಗೂ ಖಾರ್ಸಾಲಿ ಗ್ರಾಮ ಸಂಪರ್ಕಿಸುವ ಯೋಜನೆಯ ಅಭಿವೃದ್ಧಿಗಾಗಿ ಸರ್ಕಾರ ಶೀಘ್ರದಲ್ಲೇ 3.8 ಹೆಕ್ಟೇರ್ ಭೂಮಿಯನ್ನು ವರ್ಗಾಯಿಸಲಿದೆ. 3.7 ಕಿಲೋ ಮೀಟರ್ ಉದ್ದದ ರೋಪ್ ವೇ ನಿರ್ಮಾಣದಿಂದ 5 ಗಂಟೆಗಳ ಪ್ರಯಾಣದ ಸಮಯ ಕೇವಲ 10 ನಿಮಿಷಗಳಲ್ಲೇ ಕ್ರಮಿಸಬಹುದಾಗಿದೆ ಎಂದು ವರದಿ ವಿವರಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಯೋಜನೆಯ ನಿರ್ಮಾಣ ಕಾರ್ಯ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು, ಎರಡು ವರ್ಷಗಳಲ್ಲಿ ರೋಪ್ ವೇ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ, ವಿಶೇಷವಾಗಿ ವಯಸ್ಸಾದವರಿಗೆ ಪರ್ತತದ ತುದಿ ಏರಲು 5 ಕಿಲೋ ಮೀಟರ್ ಚಾರಣ ತಪ್ಪಿಸಲು ಸಹಾಯಕವಾಗಲಿದೆ.
ಕಳೆದ ವರ್ಷ ಯಮುನೋತ್ರಿಯ ಪುಣ್ಯಕ್ಷೇತ್ರದ ಯಾತ್ರೆಯಲ್ಲಿ 81 ಯಾತ್ರಿಕರು ದುರಂತ ಅಂತ್ಯ ಕಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಯಮುನೋತ್ರಿಗೆ ರೋಪ್ ವೇ ಬೇಕೆಂಬ ಬಹುಕಾಲದ ಬೇಡಿಕೆ ಈಡೇರುತ್ತಿರುವುದರ ಬಗ್ಗೆ ದೇಗುಲದ ಅರ್ಚಕರು ಸಂತಸ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಸೂರತ್ ರಾವಲ್, ಯಮುನೋತ್ರಿಗೆ ರೋಪ್ ವೇ ನಿರ್ಮಿಸುವ ಪ್ರಯತ್ನ 2006ರಲ್ಲಿ ಪ್ರಾರಂಭವಾಗಿತ್ತು. ಆದರೆ ಕಳೆದ 16 ವರ್ಷಗಳಿಂದ ಸರ್ಕಾರದ ಕಡತ ಧೂಳು ತಿನ್ನುತ್ತಾ ಬಿದ್ದಿತ್ತು ಎಂದು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್