
ಯೋಗಿಯ ಬಾಲ್ ಎದುರಿಸುವ ಬ್ಯಾಟ್ಸ್ ಮನ್ ವಿಪಕ್ಷಗಳಲ್ಲಿ ಇಲ್ಲ: ರಾಜನಾಥ್ ಸಿಂಗ್
Team Udayavani, Dec 19, 2021, 7:14 PM IST

ಲಕ್ನೋ : ”ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡುವ ‘ಇನ್ಸ್ವಿಂಗರ್ಗಳು’ ಮತ್ತು ‘ಔಟ್ಸ್ವಿಂಗರ್ಗಳನ್ನು’ ಯಾರೂ ಎದುರಿಸಲು ಸಾಧ್ಯವಾಗುವುದಿಲ್ಲ” ಎಂದು ಕ್ರಿಕೆಟ್ ಸಾದೃಶ್ಯ ಬಳಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಜನ ವಿಶ್ವ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ”ಆದಿತ್ಯನಾಥ್ ಅವರನ್ನು ಆಲ್ ರೌಂಡರ್ ಎಂದು ಕರೆದು, ಯೋಗಿ ಆದಿತ್ಯನಾಥ್ ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ. ಅವರು ಆಲ್ ರೌಂಡರ್. ಅವರು ಬ್ಯಾಟಿಂಗ್ ಮಾಡಬಹುದು, ಮತ್ತು ಬೌಲ್ ಮಾಡಿದಾಗ, ಸ್ಟಂಪ್ಗಳನ್ನು ಕಿತ್ತುಹಾಕುತ್ತಾರೆ, ಅವರ ಇನ್ಸ್ವಿಂಗರ್ಗಳು ಮತ್ತು ಔಟ್ಸ್ವಿಂಗರ್ಗಳನ್ನು ಎದುರಿಸಲು ಎಸ್ಪಿ, ಬಿಎಸ್ಪಿ ಅಥವಾ ಕಾಂಗ್ರೆಸ್ ಗಾಗಲಿ ಸಾಧ್ಯವಾಗುವುದಿಲ್ಲ” ಎಂದರು.
”ಸಿಎಂ ರಾಜ್ಯದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಸಮರ್ಥರಾಗಿದ್ದಾರೆ ಮತ್ತು ಅಭಿವೃದ್ಧಿಗೆ ಸಹ ಶ್ರಮಿಸುತ್ತಿದ್ದಾರೆ.ಇಲ್ಲಿ ಯೋಗಿ ಅದ್ಭುತಗಳನ್ನು ಮಾಡಿದ್ದಾರೆ. ಯೋಗಿ ಎನ್ನುವ ಎರಡು-ವರ್ಣಮಾಲೆಯ ಹೆಸರು ಅಪರಾಧಿಗಳ ಎದೆಯಲ್ಲಿ ಭಯವನ್ನು ಉಂಟುಮಾಡುತ್ತಿದೆ. ಹಿಂದೆ, ಅಪರಾಧಿಗಳು ಸೂರ್ಯಾಸ್ತದ ನಂತರ ಪಿಸ್ತೂಲ್ಗಳನ್ನು ಝಳಪಿಸುತ್ತಾ ಹೊರಬರುತ್ತಿದ್ದರು, ಆದರೆ ಇಂದು ಯಾರೂ ಹಾಗೆ ಮಾಡಲು ಧೈರ್ಯ ಮಾಡುತ್ತಿಲ್ಲ” ಎಂದರು.
ಯೋಗಿ ಅವರನ್ನು ಪರಿ ಪರಿಯಾಗಿ ಶ್ಲಾಘಿಸಿದ ಕೇಂದ್ರ ಸಚಿವರು, ”ಯೋಗಿ ಎಂಬ ಹೆಸರು ಅಕ್ಷರಶಃ ಯೋಗದ ಸಾಧಕ ಎಂದರ್ಥ, ಸಿಎಂ ಯೋಗದ ಭಂಗಿಗಳ ಎಲ್ಲಾ ಅನುಗ್ರಹದಿಂದ ರಾಜ್ಯಕ್ಕೆ ಅಭಿವೃದ್ಧಿಯನ್ನು ತರುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು “ಹೆಡ್ ಸ್ಟ್ಯಾಂಡ್” ಮಾಡಲಾಗುವುದು” ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ

Madhya Pradesh: ಜೀಪ್ ಮೇಲೆ ಉರುಳಿ ಬಿದ್ದ ಸಿಮೆಂಟ್ ಬಲ್ಕರ್ ವಾಹನ; 7 ಮಂದಿ ಮೃತ್ಯು

500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
