ಕಾಸರಗೋಡಿನವರ ಪ್ರೀತಿಗೆ ಪಾತ್ರರಾಗಿದ್ದ ಅಟಲ್‌ಜಿ


Team Udayavani, Aug 18, 2018, 6:00 AM IST

17-kbl-20-b.jpg

ಕುಂಬಳೆ: ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್‌ಬಿಹಾರಿ ವಾಜಪೇಯಿಯವರು ದೇವರ ಸ್ವಂತ ನಾಡು ಕೇರಳವನ್ನೂ ಪ್ರೀತಿಸುತ್ತಿದ್ದರು. 1967 ರಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಜರಗಿದ ಜನಸಂಘದ ಅಧಿವೇಶನದ ಬಳಿಕ ಪಕ್ಷದ ಪ್ರಚಾರಕ್ಕಾಗಿ ಅನೇಕ ಬಾರಿ ಕೇರಳಕ್ಕೆ ಆಗಮಿಸಿದ್ದರು. ಕಳೆದ 2000ರಲ್ಲಿ ಪಂಚಕರ್ಮ ಚಿಕೆತ್ಸೆಗಾಗಿ ಕೇರಳದಲ್ಲಿ ಒಂದುವಾರತಂಗಿದ್ದರು. ಚಿಕಿತ್ಸೆಯಿಂದ ಮತ್ತು ಇಲ್ಲಿನ ವಾತಾವರಣದಿಂದ ಉಲ್ಲಸಿತನಾಗಿರುವೆನೆಂದಿದ್ದರು. 

ಕಾಸರಗೋಡಿಗೂ ಹಲವುಬಾರಿ ಬಂದಿದ್ದರು. ಕಾಸರಗೋಡಿಗೆ ಪ್ರಥಮವಾಗಿ ಆಗಮಿಸಿದಾಗ ಸ್ಥಳೀಯ ವಿನಾಯಕ ಕಾಮತ್‌ ರವರ ಮನೆಯಲ್ಲಿ ತಂಗಿದ್ದರು. ಜನಸಂಘದ ಪ್ರಚಾರಕ್ಕಾಗಿ 1972ರಲ್ಲಿ ಜನಸಂಘ ಮತ್ತು ಬಿ.ಜೆ.ಪಿ. ಪ್ರಚಾರಕ್ಕೆ 1982ರಲ್ಲಿ ಕಾಸರಗೋಡಿಗೆ ಆಗಮಿಸಿ ತಮ್ಮ ಅಸ್ಖಲಿತ ಭಾಷಣದಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದ್ದರು.1977ರಲ್ಲಿ ಕೇಂದ್ರ ಜನತಾ ಸರಕಾರದ ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶ ಸಚಿವರಾಗಿದ್ದ ಅಟಲ್‌ಜಿಯವರು ಕಾಞಂಗಾಡಿಗೆ ಆಗಮಿಸಿದ್ದರು. 1987ರಲ್ಲಿ ಕುಂಬಳೆ ಗಾಂಧಿ ಮೈದಾನದಲ್ಲಿ ಜರಗಿದ ಪಕ್ಷದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಶಹಬ್ಟಾಸ್‌ ಎನಿಸಿದ್ದರು.

ಅಂದು ಇವರ ಭಾಷಣವನ್ನು ಕೇಳಲು ಇತರ ಪಕ್ಷದವರೂ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದರು.ಆ ಬಳಿಕ ಈ ಮೈದಾನದಲ್ಲಿ ನಡೆದ ಯಾವ ರಾಜಕೀಯ ಪಕ್ಷದ ನಾಯಕರ ಭಾಷಣಕ್ಕೂ ಇಷ್ಟು ಜನ ಸೇರಿಲ್ಲವಂತೆ. ಆ ದಿನ ಮಧ್ಯಾಹ್ನ ಕಾಸರಗೋಡಿನ ಕೆ. ವಿಶ್ವನಾಥ ಕಾಮತ್‌ ಅವರ ಮನೆಯಲ್ಲಿ ಭೋಜನ ಸ್ವೀಕರಿಸಿ ಕುಂಬಳೆಗೆ ಆಗಮಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ರಾತ್ರಿ ಕುಂಬಳೆಯ ಅವಿಭಕ್ತ ಕುಟುಂಬವಾಗಿದ್ದ ಕೃಷ್ಣದಾಸ್‌ ಜೋಷಿಯವರ ಮನೆಯಲ್ಲಿ ರಾತ್ರಿ ನಾಯಕರ ಮತ್ತು ಕಾರ್ಯಕರ್ತರೊಂದಿಗೆ ಭೋಜನ ಸ್ವೀಕರಿಸಿ ಮಂಗಳೂರಿಗೆ  ತೆರಳಿದ್ದರು. 

ಈ ಮಹಾನ್‌ ನಾಯಕ ಜಿಲ್ಲೆಗೆ ಆಗಮಿಸಿದಾಗ  ಪಕ್ಷದ ನಾಯಕರಾದ   ಕೆ.ಜಿ. ಮಾರಾರ್‌, ಒ. ರಾಜಗೋಪಾಲ್‌, ಪಿ.ಪಿ. ಮುಕುಂದನ್‌, ಎಂ. ಉಮಾನಾಥ ರಾವ್‌, ಮಡಿಕೈ ಕಮ್ಮಾರನ್‌, ಎಚ್‌. ಶಂಕರ ಆಳ್ವ, ಕೆ. ವಿಶ್ವನಾಥ ಕಾಮತ್‌, ಬಿ. ಸರ್ವೋತ್ತಮ ಪೈ, ಎಂ. ನಾರಾಯಣ ಭಟ್‌, ವಿ. ರವೀಂದ್ರನ್‌ ಟಿ.ಆರ್‌. ಕೆ. ಭಟ್‌, ಕೆ. ದಾಮೋದರ ಭಟ್‌, ಕೆ. ಜಗದೀಶ್‌ ಮೊದಲಾದ ಅನೇಕ ನಾಯಕರು ಸಾಂಪ್ರದಾಯಿಕ  ಸ್ವಾಗತ ನೀಡಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನಿಧನಕ್ಕೆ ಜಿಲ್ಲೆಯಾದ್ಯಂತ ವಿವಿಧೆಡೆ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.

ಅತಿಥಿ ಗೃಹಕ್ಕಿಂತ ಕಾರ್ಯಕರ್ತರ ಮನೆಯಲ್ಲಿ  ತಂಗಲು ಒಲವು
ಕಾಸರಗೋಡಿನ ಜನರ ಮತ್ತು ಇಲ್ಲಿನ ಭಕ್ಷéಭೋಜನವನ್ನು  ಅಟಲ್‌ಜಿ ಮೆಚ್ಚಿದ್ದರು. ಸರಕಾರಿ ಅತಿಥಿ ಮಂದಿರಗಳಲ್ಲಿ ಉಪಾಹಾರ, ಭೋಜನ ಸ್ವೀಕರಿಸಲು ಮತ್ತು ತಂಗಲು ಒಲವು ತೋರದೆ ಅತ್ಯಂತ ಸರಳವಾಗಿ ಪಕ್ಷದ ಕಾರ್ಯಕರ್ತರ ಮನೆಯವರ ಆದರಾತಿಥ್ಯವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು.ಮನೆಯವರೊಂದಿಗೆ ಆತ್ಮೀಯತೆ ಯಿಂದ ಬೆರೆಯುತ್ತಿದ್ದರೆನ್ನುತ್ತಾರೆ ಕುಂಬಳೆ ಜೋಶಿ ಮನೆಯವರು. ಇವರು ಆಗಮಿಸಿದಾಗ ಮನೆಯವರೊಂದಿಗೆ ಕ್ಲಿಕ್ಕಿಸಿದ ಫೂಟೊಗಳು ಕಾಸರಗೋಡು ಜಿಲ್ಲೆಯ ಕೆಲವು ಮನೆಗಳಲ್ಲಿ ಕೆಡದಂತೆ ಇರಿಸಲಾಗಿದೆ. ಸರಳ ಸಜ್ಜನ ನಾಯಕನ ಜೀವನ ಚರಿತ್ರೆಯ ಕುರಿತು ಹಿರಿಯರು ಕಿರಿಯರಿಗೆ ಹೇಳುತ್ತಿದ್ದಾರೆ.

ಕುಂಬಳೆ ಜೋಶಿ ಮನೆಯವರಿಂದ ಹಾರಾರ್ಪಣೆಗೈದು ತಿಲಕವಿರಿಸಿ ಸ್ವಾಗತ.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kasaragod ಆನ್‌ಲೈನ್‌ ಟ್ರೇಡಿಂಗ್‌ ಮೂಲಕ 80.49 ಲಕ್ಷ ರೂ. ಲಪಟಾವಣೆ

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kerala: ದ್ವಿಚಕ್ರ ವಾಹನ ಹಿಂಬದಿ ಸವಾರ ಮಾತನಾಡಿದರೂ ದಂಡ!

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kumbla ಆತ್ಮಹತ್ಯೆ ಯತ್ನ ವೇಳೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Kodagu: ಗಾಳಿ ಮಳೆಯ ಹೊಡೆತಕ್ಕೆ ಧರೆಗುರುಳಿದ ಮರಗಳು, ಕುಸಿದ ಧರೆ: ಹಲವೆಡೆ ಆತಂಕ ಸೃಷ್ಟಿ

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.