ಬದಿಯಡ್ಕ: ಏಳ್ಕಾನ ಹೊಳೆಯಲ್ಲಿ ಮಾನವ ಅಸ್ಥಿಪಂಜರ ಪತ್ತೆ
Team Udayavani, Aug 22, 2022, 8:33 PM IST
ಬದಿಯಡ್ಕ: ಸಮೀಪದ ಏಳ್ಕಾನದ ಹೊಳೆಯಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದೆ. ದೇಹವು ಸಂಪೂರ್ಣವಾಗಿ ಶಿಥಿಲವಾಗಿದ್ದು ಸುಮಾರು ಒಂದು ತಿಂಗಳ ಹಿಂದೆಯೇ ಮೃತಪಟ್ಟಿರುವಂತಿದೆ.
ಸ್ಥಳೀಯರ ಮಾಹಿತಿಯನುಸಾರ ಬದಿಯಡ್ಕ ಪೊಲೀಸರು ಸೋಮವಾರ ಸ್ಥಳ ಮಹಜರು ನಡೆಸಿ ಅಸ್ಥಿಪಂಜರವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಪರಿಸರದಲ್ಲಿ ತಿಂಗಳ ಹಿಂದೆ ನಾಪತ್ತೆಯಾಗಿರುವವರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.ವಾರಸುದಾರರಿದ್ದಲ್ಲಿ ಬದಿಯಡ್ಕ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.