ಕಾಸರಗೋಡಿನ ಸಾಹಿತ್ಯ ಲೋಕ : ಡಾ| ನಾ. ಮೊಗಸಾಲೆ


Team Udayavani, Mar 26, 2018, 9:30 AM IST

ಹಿಂದೆ ವಿಶಾಲ ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಇಂದೂ ಬಹುಭಾಷೆಗಳನ್ನು ಬಲ್ಲ ಅಚ್ಚಗನ್ನಡ ನೆಲ. ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಪತ್ರಿಕಾ ರಂಗ ಅಲ್ಲದೆ ಸಾಂಸ್ಕೃತಿಕವಾಗಿ ಯಕ್ಷಗಾನ, ಕ್ರೀಡೆ, ಭೂತಾರಾಧನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಿಂಚಿದವರು ಈ ನೆಲದ ಜನ. ಇಲ್ಲಿನ ಸಾಹಿತಿಗಳು ನಿರಂತರವಾಗಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ವರ್ತಮಾನದಲ್ಲೂ ನೀಡುತ್ತಿದ್ದಾರೆ. ಹಲವು ಮಂದಿಗಳು ಹೊರನಾಡುಗಳಲ್ಲಿ ನೆಲೆಸಿ ಸಾಹಿತ್ಯಾರಾಧನೆಗೈಯ್ಯುತ್ತಾ ತಮ್ಮ ಹುಟ್ಟೂರಿಗೆ ಕೀರ್ತಿಯನ್ನು ತಂದಿದ್ದಾರೆ. ಅಂತವರಲ್ಲಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಬಹುಮುಖ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಡಾ. ನಾರಾಯಣ ಮೊಗಸಾಲೆಯವರು ಉಲ್ಲೇಖಾರ್ಹರು. ಸಾಹಿತ್ಯ ಕ್ಷೇತ್ರದಲ್ಲಿ ಅಖೀಲ ಕರ್ನಾಟಕ ಮಟ್ಟದ ಸಂಘಟಕರಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅವರು ಸಾಹಿತ್ಯ ಲೋಕಕ್ಕೆ ನಾ.ಮೊಗಸಾಲೆ ಎಂದೇ ಪರಿಚಿತರು.


ನಾ.ಮೊಗಸಾಲೆಯವರು ಕಾಸರಗೋಡು ತಾಲೂಕಿನ ಕೋಳ್ಯೂರು ಗ್ರಾಮದ ಮೊಗಸಾಲೆ ಎಂಬಲ್ಲಿ ದಿ| ವಿಠಲ(ಬಟ್ಟಪ್ಪ) ಭಟ್ಟ – ಸರಸ್ವತಿ ದಂಪತಿಯ ಪುತ್ರನಾಗಿ 1944 ಆಗಸ್ಟ್‌ 27ರಂದು ಜನಿಸಿದರು. ಕೇಶವ ಭಟ್ಟ(ಕೃಷಿ), ಡಾ| ಮಹಾಬಲ ಭಟ್ಟ, ಡಾ| ಗಣಪತಿ ಭಟ್ಟ ಅವರು ಸಹೋದರರು. ಪಾರ್ವತಿ, ಲಕ್ಷ್ಮೀ, ಶಾರದೆ ಸಹೋದರಿಯರು. ಮೊಗಸಾಲೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಳ್ಯೂರು ಶಂಕರನಾರಾಯಣ ಶಾಲೆಯಲ್ಲಿ ಮತ್ತು ಮಾಧ್ಯಮಕದಿಂದ ಹೈಸ್ಕೂಲ್‌ ತನಕದ ಅಧ್ಯಯನವನ್ನು ಕನ್ಯಾನದ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದರು. ಅನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಡಿ.ಎಸ್‌.ಎ.ಸಿ. ಆಯುರ್ವೇದ ಡಿಪ್ಲೋಮಾ ಪದವಿ ಪಡೆದು 1965ರಲ್ಲಿ ಕಾರ್ಕಳ ತಾಲೂಕಿನ ಅತೀ ಹಿಂದುಳಿದ ಪ್ರದೇಶವಾದ ಕಾಂತಾವರದ ಗ್ರಾಮೀಣ ಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡು ಅಲ್ಲಿಯೇ 2002ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಮೊಗಸಾಲೆಯವರಿಗೆ ಎಳವೆಯಲ್ಲಿಯೇ ಹೆಚ್ಚಿನ ಸಾಹಿತ್ಯಾಸಕ್ತಿಯಿತ್ತು. ತಮ್ಮ ಹಿರಿಯರಿಗಿದ್ದ ಸಾಹಿತ್ಯ ಮತ್ತು ಯಕ್ಷಗಾನಾಸಕ್ತಿಗಳ ಪ್ರಭಾವವು ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುವಂತಾಗಲು ಕಾರಣವಾಯಿತು. ಇಂದು ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ “ಲ್ಯಾಂಡ್‌ ಮಾರ್ಕ್‌’ ಆಗಿ ಗುರುತಿಸಲ್ಪಡುವ ಅನೇಕ ಊರುಗಳ ಪಟ್ಟಿಯಲ್ಲಿ ಕಾಂತಾವರವೂ ಗುರುತಿಸಲ್ಪಡುತ್ತಿದ್ದು, “ಕಾಂತಾವರ ಎಂದರೆ ಭಾರೀ ಕನ್ನಡ ಸಾಹಿತ್ಯದ ಚಟುವಟಿಕೆಗಳ ಕೇಂದ್ರ’ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೆಳವಣಿಗೆಯ ಹಿಂದಿನ ಸಾಹಸೀ ರೂವಾರಿಯು ನಾ. ಮೊಗಸಾಲೆಯವರಾಗಿರುತ್ತಾರೆ.

ಸಾಧನೆಗಳು: ಮೊದಲು ಕಾಂತಾವರದಲ್ಲಿ “ರೈತ ಯುವಕ ವೃಂದ’ದ ಸ್ಥಾಪನೆಯ ರೂವಾರಿಯಾಗಿ ರೈತರನ್ನು ಸಂಘಟಿಸಿದರು. ಕಾಂತಾವರ ಕನ್ನಡ ಸಂಘದ ಸ್ಥಾಪಕ ಹಾಗೂ ಈ ತನಕವೂ ಅದರ ಕರ್ಣಧಾರತ್ವ ವಹಿಸಿ-ಮುದ್ದಣ ಕಾವ್ಯ ಪ್ರಶಸ್ತಿ,  ಸುವರ್ಣರಂಗ ಸನ್ಮಾನ್‌ ಪ್ರಶಸ್ತಿ, ಕಾಂತಾವರ ಪುರಸ್ಕಾರ, ಕಾಂತಾವರ ಲಲಿತಕಲಾ ಪುರಸ್ಕಾರ ಎಂಬ ಪ್ರಶಸ್ತಿಗಳಿಗೆ ಚಾಲನೆ ನೀಡಿದರು. “ನಾಡಿಗೆ ನಮಸ್ಕಾರ’ ಎಂಬ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಮೂಲಕ ಅವಿಭಜಿತ ದ.ಕ. ಜಿಲ್ಲೆ ಮತ್ತು ಕಾಸರಗೋಡಿನ ಸಾಧಕರ ಪರಿಚಯ ಮಾಡುತ್ತಿದ್ದಾರೆ. ಪ್ರತಿ ತಿಂಗಳ ಎರಡನೇ ರವಿವಾರ “ನುಡಿನಮನ’ ಎಂಬ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ ನಡೆಸುವಿಕೆ ಮತ್ತು ಇಲ್ಲಿಯ ಉಪನ್ಯಾಸಗಳನ್ನು “ನುಡಿಹಾರ’ ಎಂಬ ಸಂಪುಟಗಳಲ್ಲಾಗಿ ಪ್ರಕಟಿಸಿರುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಸುಪ್ರಸಿದ್ಧ ಸಾಹಿತಿ-ಕವಿವರ್ಯರ ಹೆಸರಿನಲ್ಲಿ ಸಾಹಿತ್ಯ ವಿಚಾರ ಸಂಕಿರಣಗಳು ಮತ್ತು ನವೋದಯ ಕಾವ್ಯ ಸಮೀಕ್ಷೆ, ನವ್ಯ ಸಾಹಿತ್ಯ ಸಮೀಕ್ಷೆ, ದಲಿತ ಬಂಡಾಯ ಕಾವ್ಯ ಸಮೀಕ್ಷೆ, ಮುಸ್ಲಿಂ ಲೇಖಕಿಯರಿಂದ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ. ಅನೇಕ ಸಾಹಿತಿಗಳ ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿ ಅಭಿನಂದನಾ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಹಲವಾರು ಸಂಸ್ಮರಣಾ ಗ್ರಂಥಗಳ ಮತ್ತು ಸ್ಮರಣ ಸಂಚಿಕೆಗಳ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ವಿವಿಧೆಡೆಗಳಲ್ಲಿ ಪ್ರಶಸ್ತಿ ಪುರಸ್ಕೃತ ಕವಿಗಳನ್ನೆಲ್ಲಾ ಆಹ್ವಾನಿಸಿ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಗಳನ್ನು ನಡೆಸಿರುತ್ತಾರೆ. ಸರಕಾರದಿಂದ ನೆರವು ಪಡೆದು ಕಾಂತಾವರದಲ್ಲಿ “ಕನ್ನಡ ಭವನ’ವನ್ನು ನಿರ್ಮಿಸಿರುತ್ತಾರೆ. ಮೂಡುಬಿದಿರೆಯ “ವರ್ಧಮಾನ ಪ್ರಶಸ್ತಿ ಪೀಠ’ ಮತ್ತು ಕಾಂತಾವರದಲ್ಲಿ “ಅಲ್ಲಮ ಪ್ರಭು ಪೀಠ’ಗಳು ಸ್ಥಾಪನೆಯಾದಂದಿನಿಂದ ಅವುಗಳ ಪ್ರಧಾನ ನಿರ್ದೇಶಕ ಸ್ಥಾನದ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ.

ನಾ.ಮೊಗಸಾಲೆಯವರ ಪ್ರಕಟಿತ ಕೃತಿಗಳು
1. ಕವನ ಸಂಗ್ರಹಗಳು –
ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ, ಅರುವತ್ತರ ತೇರು, ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಪೂರ್ವೋತ್ತರ, ಕರಣ ಕಾರಣ.

2. ಕಾದಂಬರಿಗಳು – ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ, ಮುಖಾಂತರ, ಧಾತು.

3. ಸಣ್ಣ ಕಥೆಗಳು – ಆಶಾಂಕುರ, ಹಸಿರು ಬಿಸಿಲು, ಸುಂದರಿಯ ಎರಡನೆ ಅವತಾರ, ಸೀತಾಪುರದ ಕಥೆಗಳು, ಸೀತಾಪುರದಲ್ಲಿ ಕತೆಗಳೇ ಇಲ್ಲ.

4. ಲೇಖನ ಸಂಕಲನಗಳು – ಮೊಗಸಾಲೆಯವರ ಒಲವು ನಿಲುವು, ಬಿಸಿಲು ಕೋಲು, ರೀತಿನೀತಿಗಳ ನಡುವಿನ ಪ್ರೀತಿ, ಅರಿವಿನೊಡನೆ ಅನುಸಂಧಾನ, ಶಬ್ದ ನಿಶಬ್ದಗಳ ನಡುವಿನ ಮಾತು.

5. ಸಂಪಾದನಾ ಕೃತಿಗಳು – ವಾಣಿ, ಪ್ರಸ್ತುತ, ಮುದ್ದಣ, ಕಾಂತಶ್ರೀ, ಮನೋರಮ, ರತ್ನಾಕರ, ಸ್ವರ್ಣನಂದಾದೀಪ, ದರ್ಪಣ, ಕೋಳ್ಯೂರು, ನುಡಿಹಾರ (4 ಸಂಪುಟಗಳು).

6. ವೈದ್ಯಕೀಯ ಕೃತಿಗಳು – ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ಆರೋಗ್ಯ ಅನಾರೋಗ್ಯದ ನಡುವೆ, ಆರೋಗ್ಯ ಅನಾರೋಗ್ಯಕ್ಕೆ ಆಯ್ಕೆ ಇದೆಯೇ, ದಾಂಪತ್ಯ ಯೋಗ, ಹೆಣ್ಣು ಹೆಣ್ಣನ್ನು ಅರಿಯುವ ಬಗ್ಗೆ, ಪ್ರತಿಕ್ಷಣವೂ ನಿಮ್ಮದೇ.

7. ಗೀತನಾಟಕ – ಪುರೂರವ – ಅಂಕಣ ಬರಹ – ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳಲ್ಲಿ ಆರೋಗ್ಯ ಸಲಹೆ, ಕನ್ನಡ ಪತ್ರಿಕೆಯಲ್ಲಿ ‘ಸಂಜೆ ಬಿಸಿಲಿನ ಅನುಭವ’.

– “ನನ್ನದ್ದಲ್ಲದ್ದು’ ಮತ್ತು ‘ಉಲ್ಲಂಘನೆ’ ಕಾದಂಬರಿಗಳಿಗೆ ಹಾಗೂ “ಇದಲ್ಲ ಇದಲ್ಲ’ ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನದ ಗೌರವ ಲಭಿಸಿವೆ. ಅವರ “ತೊಟ್ಟಿ’ ಕಾದಂಬರಿ ತೆಲುಗಿಗೆ ಅನುವಾದವಾಗಿದ್ದು ಈಗ ಸಿನಿಮಾರೂಪದಲ್ಲಿ ಹೊರಬರುತ್ತಿದೆ. ದೃಷ್ಟಿ, ಉಲ್ಲಂಘನೆ ತೆಲುಗಿಗೆ, ಮರಾಠಿಗೆ, ಇಂಗ್ಲೀಷಿಗೆ ಹಾಗೂ “ನನ್ನದ್ದಲ್ಲದ್ದು’ ಮಲಯಾಳಕ್ಕೆ ಅನುವಾದಗೊಂಡಿವೆ. ಅಲ್ಲದೆ “ಮುಖಾಂತರ’ ಹಾಗೂ ‘ಸೀತಾಪುರದ ಕತೆಗಳು’ ಇಂಗ್ಲೀಷಿನಲ್ಲೂ ಅನುವಾದಗೊಂಡಿವೆ.

“ಬಯಲು ಬೆಟ್ಟ’ ಮೊಗಸಾಲೆಯವರ ಆತ್ಮವೃತ್ತಂತ ಕೃತಿಯಾಗಿದೆ. “‘ಮೊಗಸಾಲೆ-50′, “ಆಯಸ್ಕಾಂತಾವರ’ ಅವರಿಗೆ ಅರ್ಪಿಸಲ್ಪಟ್ಟ ಅಭಿನಂದನ ಗ್ರಂಥಗಳಾಗಿವೆ. ಬೆಳಗೋಡು ರಮೇಶ ಭಟ್ಟರು “ಮೊಗಸಾಲೆಯ ಮುಖಾಂತರ’ ಎಂಬ ಜೀವನ ಚರಿತ್ರೆಯನ್ನು ಬರೆದಿರುತ್ತಾರೆ. ಡಾ| ದೀಪಾ ಫಡೆR ಅವರು ಮೊಗಸಾಲೆಯವರ ಬದುಕು ಬರಹಗಳ ಕುರಿತು “ಲೋಕಸಂವಾದಿ’ ಎನ್ನುವ ಹೊತ್ತಗೆ ಹೊರತಂದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೊಗಸಾಲೆಯವರ ಬದುಕು ಬರಹದ ಬಗ್ಗೆ ಪ್ರಬಂಧ ಮಂಡಿಸಿ ಮೂಡುಕೋಣಾಜೆ ಡಾ| ಮಾಧವ ರಾವ್‌ ಅವರು ಪಿ.ಎಚ್‌.ಡಿ. ಯನ್ನು ಪಡೆದಿರುತ್ತಾರೆ. “ಉಲ್ಲಂಘನೆ’ ಕಾದಂಬರಿಯ ಕುರಿತು ಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಹರಿಣಾಕ್ಷಿ ಅವರು ಎಂ.ಫಿಲ್‌. ನ್ನು ಪಡೆದಿರುತ್ತಾರೆ. ಮೈಸೂರು, ಮಂಗಳೂರು ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅವರ ಕೃತಿಗಳ ಬಗ್ಗೆ ಪಿ.ಎಚ್‌.ಡಿ. ಅಧ್ಯಯನಗಳು ನಡೆಯುತ್ತಿವೆ.

ಪ್ರಶಸ್ತಿ ಪುರಸ್ಕಾರಗಳು
ಪ್ರತಿಷ್ಠಿತವಾಗಿರುವ ಡಾ| ಶಿವರಾಮ ಕಾರಂತ, ಬಿ.ಎಚ್‌. ಶ್ರೀಧರ, ಕಡೆಂಗೋಡ್ಲು ಶಂಕರ ಭಟ್ಟ, ಉಗ್ರಾಣ ಮಂಗೇಶರಾವ್‌, ದಿನಕರ ದೇಸಾಯಿ, ವಿಶುಕುಮಾರ್‌, ನಿರಂಜನ, ಡಿ.ಎಸ್‌. ಕರ್ಕಿ, ಡಾ| ಪಿ.ಎಸ್‌. ಶಂಕರ್‌, ಕುವೆಂಪು, ಸೂರ್ಯನಾರಾಯಣ ಚಡಗ, ಚದುರಂಗ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಪೆರ್ಲ ಕೃಷ್ಣ ಭಟ್‌, ಯುಗಪುರುಷದ ಉಡುಪ-ಮೊದಲಾದವರ ಹೆಸರಿನಲ್ಲಿರುವ 20ಕ್ಕೂ ಮಿಕ್ಕಿ ಪ್ರಶಸ್ತಿಗಳು ಮೊಗಸಾಲೆಯವರ ಕೃತಿಗಳಿಗೆ ಸಂದಿವೆ. ಇವುಗಳ ಜೊತೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸರಕಾರದ ಗಳಗನಾಥ ಕಾದಂಬರಿ ಪ್ರಶಸ್ತಿಗಳೂ ಅವರ ಒಟ್ಟು ಸಾಹಿತ್ಯ ಸೇವೆಗೆ ಸಂದಿವೆ.

ಕರ್ನಾಟಕ ಸರಕಾರದ ಪ್ರತಿಷ್ಠಿತ ಸಾಂಸ್ಕೃತಿಕ ಪ್ರಶಸ್ತಿಗಳಾದ ಪಂಪಾ ಪ್ರಶಸ್ತಿ, ಗಾನಚಿಂತಾಮಣಿ, ಅತ್ತಿಮಬ್ಬೆ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಪ್ರೊ| ಕೆ.ಜಿ. ಕುಂದಣಗಾರ, ಗಡಿನಾಡ ಸಾಹಿತ್ಯ ಪ್ರಶಸ್ತಿ, ಸಂಗೊಳ್ಳಿರಾಯಣ್ಣ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಮೊಗಸಾಲೆಯವರನ್ನು ನೇಮಿಸಿ ಗೌರವಿಸಲಾಗಿದೆ. ಇವರಿಗೆ ಮೂಡಬಿದಿರೆಯಲ್ಲಿ ಜರಗಿದ 71ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿಯಲ್ಲಿ ಜರಗಿದ 80ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯಗಾಯನ ಕವಿಗೋಷ್ಠಿಯ ಅಧ್ಯಕ್ಷತೆ, 2016ರ ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ, ಸವಣೂರಿನಲ್ಲಿ ಜರಗಿದ ದ.ಕ. ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿuಯ ಅಧ್ಯಕ್ಷತೆ, ಅಜೆಕಾರಿನಲ್ಲಿ ನಡೆದ ಕಾರ್ಕಳ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ಆಕಾಶವಾಣಿ ಸಂಯೋಜಿಸಿದ 2008ರ ಸಾಲಿನ ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ, ನಿಟ್ಟೆಯಲ್ಲಿ ಜರಗಿದ ಉಡುಪಿ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರಿನ ಕಡಲ ಕಿನಾರೆಯಲ್ಲಿ ನಡೆದ 5ನೇ ರಾಜ್ಯಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2008ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳು ಶ್ರವಣಬೆಳಗೊಳದ ದಿಗಂಬರ ಜೈನಮಠದ ಆವರಣದಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆಯ ರಾಷ್ಟ್ರೀಯ ಬಾಲಕವಿಗೋಷ್ಠಿಯ ಅಧ್ಯಕ್ಷತೆ, ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳು ನಡೆಸಿದ 25ಕ್ಕೂ ಮಿಕ್ಕ ಕವಿಗೋಷ್ಠಿಗಳ ಅಧ್ಯಕ್ಷತೆಯ ಗೌರವ ಲಭಿಸಿದೆ.

ಡಾ| ಮೊಗಸಾಲೆಯವರಿಗೆ ವೈದ್ಯಕೀಯ ಸಾಹಿತ್ಯ ರಚನೆಗಾಗಿ “ಬಿಷಕ್‌ ಸಾಹಿತ್ಯ ರತ್ನ’ ಪ್ರಶಸ್ತಿ, ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘದಿಂದ “ಪರಶುರಾಮ’ ಪುರಸ್ಕಾರ ಪ್ರಶಸ್ತಿ, ಜೀವಮಾನದ ಸಾಹಿತ್ಯ ಸೇವೆಗಾಗಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ’, ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಶಿವರಾಮ ಕಾರಂತ ಗೌರವ ಪ್ರಶಸ್ತಿ’, ಗುಲ್ಬರ್ಗಾದ ಡಾ| ಬಿ.ಎಸ್‌. ಶಂಕರ ಪ್ರತಿಷ್ಠಾನದ “ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’, ಪೇಜಾವರ ಶ್ರೀಗಳಿಂದ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ, ಮೂಡಬಿದಿರೆಯ ಎಸ್‌.ಕೆ.ಎಫ್‌. ಶಿಕ್ಷಣ ಪ್ರತಿಷ್ಠಾನದಿಂದ “ಶ್ರೇಷ್ಠ ಸಾಧಕ’ ಪ್ರಶಸ್ತಿ, ಪುತ್ತೂರು ವಿವೇಕಾನಂದ ಕಾಲೇಜಿನ “ನಿರಂಜನ’ ಸಾಹಿತ್ಯ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಡಾ| ಶಿವರಾಮ ಕಾರಂತ ಪುರಸ್ಕಾರ ಪ್ರಶಸ್ತಿ, ಲಕ್ಷ್ಮೀಶ ಕಾವ್ಯ ವೈಭವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿದ್ವತ್‌ ಸಮ್ಮಾನ ಪ್ರಶಸ್ತಿ, ಹುಟ್ಟೂರು ಕೋಳ್ಯೂರು ಮಹಾಗಣಪತಿ ಶಂಕರನಾರಾಯಣ ಯಕ್ಷಗಾನ ಸಂಘದಿಂದ “ಹುಟ್ಟೂರ ಸಾಧಕ’ ಸನ್ಮಾನ ಪ್ರಶಸ್ತಿ, ಮೈಸೂರಿನ ಸುತ್ತೂರು ಮಠದ “ಶಿವರಾತ್ರೀಶ್ವರ’ ಪ್ರಶಸ್ತಿ, ಸಾಹಿತ್ಯ ಸೇವೆಗಾಗಿ 2004ರ ಕರ್ನಾಟಕ ಸರಕಾರದ ಪ್ರತಿಷ್ಠಿತ “ರಾಜ್ಯೋತ್ಸವ’ ಪ್ರಶಸ್ತಿ ಮೊದಲಾದ ಪ್ರಮುಖ ಪ್ರಶಸ್ತಿಗಳು ಡಾ| ಮೊಗಸಾಲೆಯವರನ್ನು ಅರಸಿಕೊಂಡು ಬಂದಿವೆ.

ವೇಣೂರು ಕುಞೊnàಡಿ ರಾಮಕೃಷ್ಣಯ್ಯ – ಸೀತಮ್ಮ ದಂಪತಿಯ ಸುಪುತ್ರಿ ಪ್ರೇಮಲತಾ ಮೊಗಸಾಲೆಯವರ ಸಹಧರ್ಮಿಣಿ. ಇವರಿಗೆ ಮೂವರು ಮಕ್ಕಳು. ಹಿರಿಯವ ನಿರಂಜನ ಸ್ವೋದ್ಯೋಗಿಯಾಗಿರುತ್ತಾರೆ. ಎರಡನೇ ಸುದರ್ಶನ ಅವರು ಬಹುರಾಷ್ಟ್ರೀಯ ಸಾಫ್ಟವೇರ್‌ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಕಿರಿಯರಾದ ಪ್ರಸನ್ನ ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿರುತ್ತಾರೆ.

ಇದೀಗ ಮಾರ್ಚ್‌ 31 ಮತ್ತು ಎಪ್ರಿಲ್‌ 1ರಂದು ಕಾಸರಗೋಡಿನ ಮುಳ್ಳೇರಿಯಾದಲ್ಲಿ ಜರಗುವ ಕಾಸರಗೋಡು ಜಿಲ್ಲಾ 11ನೇಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ನೀಡಿರುವುದು ಕಾಸರಗೋಡು ಮಣ್ಣಿನ ಮಗನಾದ ಮೊಗಸಾಲೆಯವರ ಕನ್ನಡ ಸಾಹಿತ್ಯ ಪರ ಸೇವೆಗಳಿಗೆ ಸಲ್ಲುವ ಗೌರವ ಆಗಿದೆ.

– ಕೆ. ಕೇಳು ಮಾಸ್ತರ್‌ ಅಗಲ್ಪಾಡಿ

ಟಾಪ್ ನ್ಯೂಸ್

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.