ಇಡಯಿಲೆಕ್ಕಾಡ್‌: ವಾನರ ಪಡೆಗೂ “ಓಣಂ ಸದ್ಯ’


Team Udayavani, Sep 14, 2019, 5:22 AM IST

13KSDE19

ಕಾಸರಗೋಡು: ಸಾಮರಸ್ಯದ ರಾಷ್ಟ್ರೀಯ ಭಾವೈಕ್ಯತೆಯ ಓಣಂ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದ ಕೇರಳೀಯರು ಸಂತೋಷದ ಹೊನಲಿನಲ್ಲಿ ತೇಲಾಡಿದರು. ಇದೇ ವೇಳೆ ಕಾಸರಗೋಡು ಜಿಲ್ಲೆಯ ಇಡಯಿಲೆಕ್ಕಾಡ್‌ನ‌ಲ್ಲಿ ವಾನರ ಪಡೆಗೆ “ಓಣಂ ಸದ್ಯ’ ನೀಡಿ ಸಂಭ್ರಮಪಟ್ಟರು.ವಲಿಯಪರಂಬದ ಇಡಯಿಲೆಕ್ಕಾಡ್‌ನ‌ ಬನದಲ್ಲಿ 12 ವಿವಿಧ ಖಾದ್ಯಗಳ ಭೂರಿ ಭೋಜನವನ್ನು ವಾನರ ಪಡೆಗೆ ನೀಡಲಾಯಿತು

ಇಡಯಿಲೆಕ್ಕಾಡ್‌ನ‌ ನವೋದಯ ಗ್ರಂಥಾಲಯ ಮತ್ತು ಬಾಲವೇದಿಯ ನೇತೃತ್ವದಲ್ಲಿ ನಿರಂತರವಾಗಿ 12 ನೇ ವರ್ಷದಲ್ಲೂ ಮಂಗಗಳಿಗೆ ಓಣಂ ಸದ್ಯ ನೀಡಲಾಯಿತು. ಇಡಯಿಲೆಕ್ಕಾಡ್‌ನ‌ ಬನದಲ್ಲಿ ಡೆಸ್ಕ್ ಹಾಗು ಕುರ್ಚಿಗಳನ್ನು ಇರಿಸಿ ಬಾಳೆ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಿದ ಖಾದ್ಯಗಳ ಸವಿಯೊಂದಿಗೆ ಮಂಗಗಳಿಗೆ ಬಾಳೆ ಎಲೆಯಲ್ಲಿ ಭೋಜನ ಇರಿಸಲಾಯಿತು. ಹಲಸಿನ ಹಣ್ಣು, ಪಪ್ಪಾಯಿ, ಚಿಕ್ಕು, ಪೇರಳೆ, ಮುಳ್ಳು ಸೌತೆ, ಟೊಮೆಟೋ, ಅನನಾಸು ಮೊದಲಾದ ಹಣ್ಣು ಹಂಪಲುಗಳನ್ನು ಹಾಗು ಬೆಂಡೆ, ಬೀಟ್‌ರೂಟ್‌, ಫ್ಯಾಶನ್‌ ಫ್ರುಟ್‌, ಅಲಸಂಡೆ, ಕ್ಯಾರೆಟ್‌ಗಳಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಬಾಳೆ ಎಲೆಯಲ್ಲಿ ಬಡಿಸಲಾಗಿತ್ತು.

ಬನದಲ್ಲಿರುವ ವಾನರ ಪಡೆಗೆ ನಿತ್ಯವೂ ಊಟ ಬಡಿಸುವ ಚಾಲಿಲ್‌ ಮಾಣಿಕಮ್ಮ ಅವರ ನೇತೃತ್ವದಲ್ಲಿ ಓಣಂ ಸದ್ಯವನ್ನು ಬಡಿಸಲಾಯಿತು. ಬೆಳಗ್ಗೆ 10.30 ಕ್ಕೆ ಆರಂಭಿಸಿದ ಓಣಂ ಸದ್ಯ ಬಡಿಸುವ ಕಾರ್ಯ ಹನ್ನೊಂದು ಗಂಟೆಗೆ ಸಂಪನ್ನಗೊಂಡಿತು. ಆ ಬಳಿಕ ಮಂಗಗಳ ಪಡೆ ಅಲ್ಲಿಗೆ ಮುತ್ತಿಗೆ ಹಾಕಿತು. 12 ನೇ ವರ್ಷದ ಓಣಂ ಸದ್ಯದ ಅಂಗವಾಗಿ 12 ಬಗೆಯ ಖಾದ್ಯಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.

ಜೈವ ವೈವಿಧ್ಯ ಸಂಪನ್ನವಾಗಿರುವ ಇಡಯಿಲೆಕ್ಕಾಡ್‌ ಬನದಲ್ಲಿ ಮಂಗಗಳ ಸಂಖ್ಯೆ ಐದಕ್ಕೆ ಇಳಿದಾಗ ಮಂಗಗಳ ವಂಶ ನಾಶಕ್ಕೆ ಕಾರಣ ಕಂಡುಕೊಳ್ಳಲು ಯತ್ನಿಸಲಾಯಿತು. ಇದರ ಅಂಗವಾಗಿ ತೃಶ್ಶೂರಿನ ಮೃಗಾಲಯದ ಸಹಕಾರದೊಂದಿಗೆ ನಡೆಸಿದ ಅಧ್ಯಯನದಿಂದ ಮಂಗಗಳಿಗೆ ನೀಡುವ ಖಾದ್ಯಗಳಲ್ಲಿ ಉಪ್ಪಿನ ಅಂಶಗಳಿರುವುದರಿಂದ ಸಂತಾನ ಶಕ್ತಿ ಕಡಿಮೆಯಾಗಿರುವುದು ಮಂಗಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಯಿತು ಎಂದು ಕಂಡುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಓಣಂ ಸದ್ಯದಲ್ಲಿ ಉಪ್ಪು ಬೆರಸದೆ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಇತ್ತೀಚಿನ ವರ್ಷಗಳಲ್ಲಿ ರೂಢಿಯಾಯಿತು. ಇದರಿಂದಾಗಿ ಮಂಗಳ ಸಂಖ್ಯೆ ಅಧಿಕವಾಯಿತು. ಇದೀಗ ಈ ಪರಿಸರದಲ್ಲಿ ಸುಮಾರು 40 ರಷ್ಟು ಮಂಗಗಳಿವೆ.

ನವೋದಯ ಗ್ರಂಥಾಲಯದ ಅಧ್ಯಕ್ಷ ಪಿ.ವಿ. ಪ್ರಭಾಕರನ್‌, ಕಾರ್ಯದರ್ಶಿ ಪಿ.ವೇಣುಗೋಪಾಲನ್‌, ವಲಿಯಪರಂಬ ಪಂಚಾಯತ್‌ ಸದಸ್ಯ ಸಿ.ಕೆ. ಕರುಣಾಕರನ್‌, ಪರಿಸರ ಕಾರ್ಯಕರ್ತ ಆನಂದ ಪೇಕಡಂ, ಬಾಲವೇದಿ ಸಂಚಾಲಕ ಎಂ.ಬಾಬು, ಬಾಲವೇದಿ ಪದಾಧಿಕಾರಿಗಳಾದ ಆರ್ಯ ಎಂ, ಬಾಬು, ವಿ.ಫಿದಲ್‌ ಮೊದಲಾದವರು ನೇತೃತ್ವ ನೀಡಿದರು.

ಮಂಗಗಳಿಗೆ ಓಣಂ ಸದ್ಯ
ಮಂಗಗಳಿಗೆ ಓಣಂ ಸದ್ಯ ನೀಡುವ ಸಂಭ್ರಮದ ಹಿನ್ನೆಲೆಯಲ್ಲಿ ಇಡಯಿಲೆಕ್ಕಾಡ್‌ನ‌ಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ತೆಂಗಿನ ಒಲಿಯಿಂದ ವಿವಿಧ ಆಕೃತಿಗಳಲ್ಲಿ ರಚಿಸಿದ ಹೂಗಳು, ಪಕ್ಷಿಗಳು ಮೊದಲಾದವುಗಳನ್ನು ತೂಗು ಹಾಕಲಾಯಿತು. ಕಾಡಿನ ಹೂಗಳನ್ನು ಬಳಸಲಾಯಿತು. ಬ್ಯಾನರ್‌ ಸ್ಥಾಪಿಸಲಾಗಿತ್ತು. ಈ ಪ್ರದೇಶದಲ್ಲಿ ಸುಮಾರು 40 ರಷ್ಟು ಮಂಗಗಳಿದ್ದು, ಈ ಪೈಕಿ 30 ಮಂಗಗಳು ಓಣಂ ಸದ್ಯ ಉಂಡು ತೇಗಲು ಬಂದಿದ್ದವು. ಓಣಂ ಸದ್ಯದ ಜತೆಗೆ ಸ್ಟೀಲ್‌ ಗ್ಲಾಸ್‌ಗಳಲ್ಲಿ ನೀರನ್ನು ಇರಿಸಲಾಗಿತ್ತು. ಮಂಗಗಳಿಗೆ ಓಣಂ ಸದ್ಯ ಬಡಿಸುವ ಸಂಭ್ರಮವನ್ನು ವೀಕ್ಷಿಸಲು ನೂರಾರು ಮಂದಿ ತಲುಪಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.