Kasaragod ರೈಲು ಬುಡಮೇಲು ಕೃತ್ಯಕ್ಕೆ ಯತ್ನ; ಫೋರೆನ್ಸಿಕ್ ಪುರಾವೆ ಲಭ್ಯ
Team Udayavani, Aug 19, 2023, 10:13 PM IST
ಕಾಸರಗೋಡು: ಕಳನಾಡು ರೈಲು ಸುರಂಗದ ಬಳಿ ರೈಲು ಹಳಿಯಲ್ಲಿ ಕ್ಲೋಸೆಟ್ನ ತುಂಡುಗಳನ್ನು ಹಾಗು ಕಲ್ಲುಗಳನ್ನು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಫೋರೆನ್ಸಿಕ್ ತಜ್ಞರು ನಡೆಸಿದ ಸೂಕ್ಷ್ಮ ಪರಿಶೀಲನೆಯಲ್ಲಿ ಹಲವು ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾದ ಕ್ಲೋಸೆಟ್ಗಳ ತುಂಡಿನ ಬೆರಳ ಗುರುತುಗಳನ್ನು ಗುರುತಿಸುವ ಯತ್ನವೂ ನಡೆಯುತ್ತಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಪಕ್ಕದ ಮನೆಯೊಂದರ ತ್ಯಾಜ್ಯ ವಸ್ತು ತಂದು ಹಾಕುವ ಸ್ಥಳದಿಂದ ಕ್ಲೋಸೆಟ್ ತುಂಡುಗಳನ್ನು ತಂದು ರೈಲು ಹಳಿಯಲ್ಲಿ ಇರಿಸಲಾಗಿತ್ತು ಎಂಬುವುದು ತನಿಖೆಯಿಂದ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ಕಣ್ಗಾವಲು : ರೈಲಿಗೆ ಕಲ್ಲು ತೂರಾಟ ನಡೆಸುವವರನ್ನು ಪತ್ತೆಹಚ್ಚಲು ರಹಸ್ಯ ಸ್ಕಾÌಡ್ಗಳೊಂದಿಗೆ ಹೊಸದುರ್ಗ ಪೊಲೀಸರು ರಂಗಕ್ಕಿಳಿದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಸ್ಥಳಗಳಲ್ಲಿ ರೈಲು ಗಾಡಿಗೆ ಕಲ್ಲು ತೂರಾಟ ನಡೆದಿದೆ. ಇಂತಹ ಕೃತ್ಯ ನಡೆಸುವವರನ್ನು ಹಿಡಿಯಲು ಸ್ಥಳೀಯರ ಸಹಾಯದಿಂದ ರಹಸ್ಯ ಸ್ಕಾಡ್ಗಳನ್ನು ರೂಪೀಕರಿಸಿ ಕಾರ್ಯಾಚರಣೆ ಆರಂಭವಾಗಿದೆ. ಇಂತಹ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಯಾರನ್ನಾದರೂ ಕಂಡರೆ ಪೊಲೀಸರಿಗೆ ತಿಳಿಸಬೇಕೆಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ