ಸಿಡಿಲು ಬಡಿದು ಗರ್ಭಿಣಿ ದನ ಸಾವು, ತೆಂಗಿನ ಮರಕ್ಕೆ ಬೆಂಕಿ
Team Udayavani, Apr 9, 2023, 6:02 AM IST
ಕಾಸರಗೋಡು: ಸಿಡಿಲು ಬಡಿದು ಎಂಟು ತಿಂಗಳ ಗರ್ಭಿಣಿ ಹಸು ಸಾವಿಗೀಡಾಗಿದ್ದು, ತೆಂಗಿನ ಮರಗಳಿಗೆ ಬೆಂಕಿ ತಗಲಿ ಉರಿದು ಹೋಗಿದೆ. ಮನೆಯ ವಿದ್ಯುತ್ ಉಪಕರಣಗಳು ಹಾನಿಗೀಡಾದ ಘಟನೆ ನಾರಂಪಾಡಿಯಲ್ಲಿ ನಡೆದಿದೆ.
ನಾರಂಪಾಡಿಯ ಉಮ್ಮರ್ ಅವರ ದನ ಸಿಡಿಲಿಗೆ ಬಲಿಯಾಗಿದೆ. ಸಿಡಿಲು ಮನೆ ಸಮೀಪದ ಹಟ್ಟಿಗೆ ಬಡಿದಿದ್ದು, ಅಲ್ಲಿ ಕಟ್ಟಿ ಹಾಕಲಾಗಿದ್ದ ದನ ಮೃತಪಟ್ಟಿತು. ಸಿಡಿಲಿನ ಆಘಾತಕ್ಕೆ ಉಮ್ಮರ್ ಅವರ ಕಾಂಕ್ರೀಟ್ ಹಾಕಿದ ಮನೆಯ ವಿದ್ಯುತ್ ವಯರಿಂಗ್ ಮತ್ತು ಉಪಕರಣಗಳು ಹಾನಿಗೀಡಾಗಿವೆ. ಮನೆ ಹಿತ್ತಿಲಿನಲ್ಲಿದ್ದ ಎರಡು ತೆಂಗಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಆರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ