ಕಾಸರಗೋಡು: “ವಂದೇ ಭಾರತ್’ ಎಕ್ಸ್ಪ್ರೆಸ್’ ರೈಲಿನ ಮೇಲೆ ಕಲ್ಲೆಸೆತ
Team Udayavani, May 2, 2023, 6:50 AM IST
ಕಾಸರಗೋಡು: ಕೇರಳದಲ್ಲಿ ಹೊಸದಾಗಿ ಆರಂಭಿಸಲಾದ “ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.
ಮಲಪ್ಪುರಂ ಜಿಲ್ಲೆಯ ತಿರೂರ್ ಸಮೀಪ ಸೋಮವಾರ ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕಲ್ಲುಗಳು ರೈಲಿನ ಕೆಲವು ಕಿಟಕಿ ಗಾಜುಗಳ ಮೇಲೆ ಸಣ್ಣ ಗೀರುಗಳು ಬಿದ್ದಿವೆ. ಯಾರಿಗೂ ಗಾಯಗಳಾಗಿಲ್ಲ; ರೈಲು ತಿರುವನಂತಪುರಕ್ಕೆ ಪ್ರಯಾಣ ಮುಂದುವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎ. 25ರಂದು ರಾಜ್ಯದ ರಾಜಧಾನಿ ತಿರುವನಂತಪುರವನ್ನು ಉತ್ತರದ ಕೇರಳದ ಜಿಲ್ಲೆ ಕಾಸರಗೋಡಿನೊಂದಿಗೆ ಸಂಪರ್ಕಿಸುವ “ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ಚಾಲನೆ ನೀಡಿದ್ದರು.