ಶಬರಿಮಲೆ ರೈಲ್ವೇ ಯೋಜನೆಗೆ ಕೇರಳ ಸರಕಾರ ಒಪ್ಪಿಗೆ
Team Udayavani, Jan 12, 2021, 2:09 AM IST
ಕಾಸರಗೋಡು: ಅಂಗಮಾಲಿಯಿಂದ ಎರುಮೇಲಿ ತನಕದ ನೂತನ ಶಬರಿ ರೈಲು ಹಳಿ ನಿರ್ಮಿಸುವ ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ. 50ರಷ್ಟು ಮೊತ್ತವನ್ನು ಕೇರಳ ಸರಕಾರವೇ ಭರಿಸುವುದಾಗಿ ಒಪ್ಪಿಗೆ ಸೂಚಿಸಿದೆ.
ಒಟ್ಟು 2,815 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಅರ್ಧದಷ್ಟು ಮೊತ್ತವನ್ನು ಕಿಫ್ಬಿ ಸಂಸ್ಥೆಯ ಮೂಲಕ ಸಂಗ್ರಹಿಸಿ ಭರಿಸಲು ಕೇರಳ ಸರಕಾರವು ತೀರ್ಮಾನಿಸಿದೆ. ಉಳಿದ ಶೇ. 50 ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಶಬರಿಮಲೆಯನ್ನು ರಾಷ್ಟ್ರೀಯ ತೀರ್ಥಾಟನಾ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಈ ಹೊಸ ರೈಲು ಹಳಿ ಯೋಜನೆಯನ್ನು ಕೈಗೊಳ್ಳಲಾಗಿದೆ.
ಹೊಸದಿಲ್ಲಿಗೆ ನಿತ್ಯ ನೇರ ವಿಮಾನ :
ಮಂಗಳೂರು: ಮಂಗಳೂರಿನಿಂದ ಹೊಸದಿಲ್ಲಿಗೆ ಪ್ರತಿದಿನ ನೇರ ವಿಮಾನ ಸೇವೆ ಮತ್ತೆ ಆರಂಭವಾಗಿದೆ.
ಇಂಡಿಗೋ 6ಇ 6698 ವಿಮಾನವು ಮಂಗಳೂರಿನಿಂದ ರಾತ್ರಿ 9.50ಕ್ಕೆ ಹೊರಟು ಹೊಸದಿಲ್ಲಿಗೆ ತೆರಳಿದರೆ, 6ಇ 671 ವಿಮಾನವು ಹೊಸದಿಲ್ಲಿಯಿಂದ ಸಂಜೆ 6 ಗಂಟೆಗೆ ಹೊರಟು ಮಂಗಳೂರು ತಲುಪುತ್ತದೆ.
ಲಾಕ್ಡೌನ್ ಬಳಿಕ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆ ಇತ್ತಾದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ಕಾರಣದಿಂದ ಕೊಂಚ ದಿನ ಸ್ಥಗಿತವಾಗಿತ್ತು. ಮತ್ತೆ ನೇರ ವಿಮಾನ ಸೇವೆ ಆರಂಭವಾಗಿದೆ. ಜತೆಗೆ ಮಂಗಳೂರಿನಿಂದ ಮುಂಬಯಿ ಹಾಗೂ ಬೆಂಗಳೂರಿಗೆ ತೆರಳಿದ ಇಂಡಿಗೋ ವಿಮಾನದ ಮುಖೇನವೂ ಹೊಸದಿಲ್ಲಿಗೆ ತೆರಳಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ