ಕುಂಬಳೆ :ಕೊಲೆ ಪ್ರಕರಣ; ಆರೋಪಿಗಳ ಪತ್ತೆಗಾಗಿ ಲುಕೌಟ್ ನೋಟಿಸ್ ಬಿಡುಗಡೆ
Team Udayavani, Jun 30, 2022, 6:02 PM IST
ಕುಂಬಳೆ: ಪುತ್ತಿಗೆಯ ಮುಗುರೋಡಿನ ಅಬೂಬಕ್ಕರ್ ಸಿದ್ಧಿಕ್(31) ಹತ್ಯೆಯ ಇಬ್ಬರು ಆರೋಪಿಗಳಾದ ಮಂಜೇಶ್ವರ ಉದ್ಯಾವರ ಅಬ್ದುಲ್ ಅಜೀಜ್(36) ಮತ್ತು ಅಬ್ದುಲ್ ರಹೀಂ (41) ನನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಬಂಧಿಸಿದೆ.
ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಲುಕೌಟ್ ನೋಟಿಸ್ ಬಿಡುಗಡೆಗೊಳಿಸಿ ಎಲ್ಲ ವಿಮಾನ ನಿಲ್ದಾಣಗಳಿಗೆ ರವಾನಿಸಲಾಗಿದೆ.
ಅನ್ವರ್ ಮತ್ತು ಅನ್ಸಾರಿಯವರನ್ನು ಮತ್ತು ಅಬೂಬಕ್ಕರ್ ಸಿದ್ಧಿಕ್ ಅವರನ್ನು ತಂಡವು ಕರೆದೊಯ್ಯಲು, ಹತ್ಯೆ ಬಳಿಕ ಬಂದ್ಯೋಡು ಆಸ್ಪತ್ರೆಗೆ ದಾಖಲಿಸಲು, ಬಳಿಕ ಪರಾರಿಯಾಗಲು ಬಳಸಿದ 5 ಕಾರುಗಳನ್ನು ವಶಪಡಿಸಲಾಗಿದೆ. ಪ್ರಕರಣದ ಆರೋಪಿಯೋರ್ವನ ಮನೆಯಿಂದ 4.50 ಲಕ್ಷ ರೂ. ಹಣವನ್ನು ತನಿಖಾ ತಂಡ ವಶಪಡಿಸಿದೆ.
ಚಿನ್ನ ಖರೀದಿಸಲು ವಿದೇಶಕ್ಕೆ ಕಳುಹಿಸಿದ 40 ಲಕ್ಷ ರೂ. ಬೆಲೆಯ ಡಾಲರ್ ನಾಪತ್ತೆಯಾಗಿರುವುದು ಅಪಹರಣ, ಹತ್ಯೆಗೆ ಕಾರಣವೆಂಬುದಾಗಿ ಸ್ಪಷ್ಟವಾಗಿದೆ. ಎಲ್ಲ ಆರೋಪಿಗಳ ಮಾಹಿತಿ ದೊರಕಿದ್ದು ಶೀಘ್ರವಾಗಿ ಎಲ್ಲರನ್ನೂ ಬಂಧಿಸಲಾಗುವುದೆಂದು ಎಸ್ಪಿ ಡಾ| ವೈಭವ್ ಸಕ್ಸೇನ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ