Kumble; ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು
Team Udayavani, Aug 30, 2023, 12:21 AM IST
ಕುಂಬಳೆ: ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಓಡಿಸುತ್ತಿದ್ದ ಸಂದರ್ಭ ನಡೆದ ಆಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಫರ್ಹಾಸ್ (18) ಮೃತಪಟ್ಟಿದ್ದಾರೆ.
ಕಳೆದ ಶುಕ್ರವಾರ ಪೇರಾಲು ಕಣ್ಣೂರು ಕುನ್ನಿಲ್ ನಿವಾಸಿ ದಿ| ಆಬ್ದುಲ್ಲ ಆವರ ಪುತ್ರ ಪುತ್ತಿಗೆ ಅಂಗಡಿಮೊಗರು ಸರಕಾರಿ ಹಯ್ಯರ್ ಸೆಕೆಂಡರಿ ವಿದ್ಯಾಲಯದಲ್ಲಿ ಪ್ಲಸ್ ಟು ವಿದ್ಯಾರ್ಥಿ ಫರ್ಹಾಸ್ ಶಾಲೆ ಬಿಟ್ಟು ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪೊಲೀಸರು ಹಿಂಬಾಲಿಸಿದಾಗ ಭಯದಲ್ಲಿ ಕಾರು ಆಯತಪ್ಪಿ ಅಪಘಾತಕ್ಕೀಡಾಗಿತ್ತು.
ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಫರ್ಹಾಸ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.