ಪಿಎಫ್‌ಐನ ನೇತಾರರ ಆಸ್ತಿ ಮುಟ್ಟುಗೋಲು ಕ್ರಮಕ್ಕೆ ಚಾಲನೆ

ಹರತಾಳ ಸಂದರ್ಭ ನಷ್ಟ

Team Udayavani, Jan 22, 2023, 7:53 AM IST

ಹರತಾಳ ಸಂದರ್ಭ ನಷ್ಟ: ಪಿಎಫ್‌ಐನ ನೇತಾರರ ಆಸ್ತಿ ಮುಟ್ಟುಗೋಲು ಕ್ರಮಕ್ಕೆ ಚಾಲನೆ

ಕಾಸರಗೋಡು: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಇತ್ತೀಚೆಗೆ ನಡೆಸಿದ ಹರತಾಳದ ಸಂದರ್ಭ ಉಂಟಾದ ವ್ಯಾಪಕ ಹಾನಿಗೆ ಸಂಬಂಧಿಸಿ ಹರತಾಳಕ್ಕೆ ನೇತೃತ್ವ ನೀಡಿದ ಪಿಎಫ್‌ಐ ನೇತಾರರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಹೈಕೋರ್ಟ್‌ ನೀಡಿದ ನಿರ್ದೇಶನದಂತೆ ಮುಟ್ಟುಗೋಲು ಕ್ರಮಕ್ಕೆ ಕಂದಾಯ ಅಧಿಕಾರಗಳ ನೆರವಿನೊಂದಿಗೆ ಪೊಲೀಸರು ಚಾಲನೆ ನೀಡಿದ್ದಾರೆ.

ಮುಟ್ಟುಗೋಲು ಹಾಕುವ ಪೂರ್ಣ ಮಾಹಿತಿಯನ್ನು ರಾಜ್ಯ ಭೂಕಂದಾಯ ಆಯುಕ್ತರಿಗೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಲಾಗಿದೆ.

ಇದರಂತೆ ಕಾಸರಗೋಡು ಜಿಲ್ಲೆಯ ಐವರು ಪಿಎಫ್‌ಐ ನೇತಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಅಗತ್ಯದ ಕ್ರಮಗಳಲ್ಲಿ ಪೊಲೀಸರು ತೊಡಗಿದ್ದಾರೆ.

ಕಾಸರಗೋಡು ತಾಲೂಕಿನಲ್ಲಿರುವ ಪಿಎಫ್‌ಐ ಜಿಲ್ಲಾ ಸಮಿತಿ ಕಚೇರಿ ಸಮಿತಿ ಕಾರ್ಯವೆಸಗುತ್ತಿದ್ದ ಪೆರುಂಬಳ ಬಳಿಯ ಚಂದ್ರಗಿರಿ ಚಾರಿಟೆಬಲ್‌ ಟ್ರಸ್ಟ್‌ಗೆ ಸೇರಿದ ಜಾಗ ಹಾಗೂ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಕ್ರಮ ಆರಂಭಿಸಲಾಗಿದೆ. ಇದಲ್ಲದೆ ಪಿಎಫ್‌ಐ ನೇತಾರರಾದ ಮೀಂಜದ ಮೊಹಮ್ಮದಲಿ, ನಾಯಮ್ಮಾರಮೂಲೆಯ ಎನ್‌.ಯು. ಅಬ್ದುಲ್‌ ಸಲಾಂ, ಆಲಂಪಾಡಿಯ ಉಮ್ಮರ್‌ ಫಾರೂಕ್‌, ಹೊಸದುರ್ಗ ತಾಲೂಕಿನ ನಂಙರತ್ತ್ ಸಿರಾಜುದ್ದೀನ್‌, ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ತೆಕ್ಕೇ ತೃಕ್ಕರಿಪುರ ಗ್ರಾಮದ ಸಿ.ಟಿ. ಸುಲೈಮಾನ್‌ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.

ಒಟ್ಟು ನಷ್ಟ 5.20 ಕೋಟಿ ರೂ.
ಪಿಎಫ್‌ಐ ಮುಖಂಡರನ್ನು ಎನ್‌ಐಎ ಬಂಧಿಸಿದ್ದನ್ನು ಪ್ರತಿಭಟಿಸಿ 2022 ಸೆ. 22ರಂದು ಪಿಎಫ್‌ಐ ಕೇರಳ ರಾಜ್ಯ ಘಟಕ ಮಿಂಚಿನ ಹರತಾಳಕ್ಕೆ ಕರೆ ನೀಡಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು 5.20 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಹೈಕೋರ್ಟ್‌ಗೆ ಪೊಲೀಸರು ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್

police siren

ಗಾಂಜಾ ಮಾರಾಟ : ಮೂವರು ಪೊಲೀಸ್‌ ವಶ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

accident 2

ಉದ್ಯಾವರ : ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಗಂಭೀರ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police siren

ಗಾಂಜಾ ಮಾರಾಟ : ಮೂವರು ಪೊಲೀಸ್‌ ವಶ

ಕಾಸರಗೋಡು: ಬೇಸಗೆ ರಜೆಗೆ ಮುನ್ನವೇ ತಲುಪಿದ ಪಠ್ಯಪುಸ್ತಕ

ಕಾಸರಗೋಡು: ಬೇಸಗೆ ರಜೆಗೆ ಮುನ್ನವೇ ತಲುಪಿದ ಪಠ್ಯಪುಸ್ತಕ

death

ಬಾವಿಯಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

SUICIDE

ಕವಯಿತ್ರಿ ಶ್ವೇತಾ ಕಜೆ ಆತ್ಮಹತ್ಯೆ

ಟಿಪ್ಪರ್‌ ಲಾರಿ-ಬೈಕ್‌ ಢಿಕ್ಕಿ: ವಿದ್ಯಾರ್ಥಿ ಸಾವು

ಟಿಪ್ಪರ್‌ ಲಾರಿ-ಬೈಕ್‌ ಢಿಕ್ಕಿ: ವಿದ್ಯಾರ್ಥಿ ಸಾವು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

police siren

ಗಾಂಜಾ ಮಾರಾಟ : ಮೂವರು ಪೊಲೀಸ್‌ ವಶ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ