Kasaragod ರೈಲಿನಿಂದ ಬಿದ್ದು ವ್ಯಕ್ತಿ ಸಾವು
Team Udayavani, Aug 7, 2023, 8:56 PM IST
ಕಾಸರಗೋಡು: ಅಬಕಾರಿ ಇಲಾಖೆಯ ಕಾಸರಗೋಡು ವಿಭಾಗೀಯ ಪ್ರಿವೆಂಟೀವ್ ಆಫೀಸರ್ ಕಲ್ಯಾಶ್ಮೇರಿ ಸೆಂಟ್ರಲ್ ನಿವಾಸಿಯಾದ ಪಿ. ಅಶೋಕನ್(52) ಕಣ್ಣೂರು ರೈಲು ನಿಲ್ದಾಣದಿಂದ ಸುಮಾರು 300 ಮೀಟರ್ ದೂರದಲ್ಲಿ ರೈಲುಗಾಡಿಯಿಂದ ಬಿದ್ದು ಸಾವಿಗೀಡಾದರು.
ಶನಿವಾರ ರಾತ್ರಿ ಕೆಲಸ ಮುಗಿಸಿ ಕಾಚ್ಚೆಗುಡೆ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ರೈಲಿನಿಂದ ಕೆಳಗಿಳಿಯಲು ಸಿದ್ಧತೆ ನಡೆಸುತ್ತಿದ್ದಾಗ ಆಯ ತಪ್ಪಿ ಬಿದ್ದಿರಬೇಕೆಂದು ಶಂಕಿಸಲಾಗಿದೆ.