ದಾನಿಗಳಿಂದ ವಿದ್ಯಾರ್ಥಿಗಳ ಪೋಷಕರಿಗೆ ಸ್ಮಾರ್ಟ್ ಫೋನ್ ವಿತರಣೆ
Team Udayavani, Jul 6, 2021, 1:05 PM IST
ಬದಿಯಡ್ಕ: ಎಯುಪಿ ಶಾಲೆ ಪಳ್ಳತ್ತಡ್ಕ ದಲ್ಲಿ ಆನ್ಲೈನ್ ಕಲಿಕಾ ಸೌಲಭ್ಯವಿಲ್ಲದ ಒಟ್ಟು 25 ಮಕ್ಕಳಿಗೆ ಶಾಲಾ ಅಧ್ಯಾಪಕರು ಹಾಗೂ ನೌಕರ ವೃಂದ , ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಊರ ದಾನಿಗಳ ನೆರವಿನೊಂದಿಗೆ ಮಕ್ಕಳ ಹೆತ್ತವರಿಗೆ ಮೊಬೈಲನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ವಾರ್ಡ್ ಮೆಂಬರ್ ಹಮೀದ್ ಪಳ್ಳತಡ್ಕ ಉದ್ಘಾಟಿಸಿದರು.
ವಾರ್ಡ್ ಸದಸ್ಯೆ ಶ್ರೀಮತಿ ಅನಿತಾ ಶುಭ ಹಾರೈಸಿದರು. ಪಿ.ಟಿ.ಎ ಸದಸ್ಯರಾದ ಹಮೀದ್ ಉಪಸ್ಥಿತರಿದ್ದರು. ಸಭೆಯಲ್ಲಿ ಮೊಬೈಲ್ ಫಲಾನುಭವಿಗಳು , ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಊರವರು, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಣಿ ಎಂ.ಎಂ ಸ್ವಾಗತಿಸಿ, ಮಲ್ಲಿಕಾ ಟೀಚರ್ ಧನ್ಯವಾದವಿತ್ತರು. ಶಾಲಾ ಅಧ್ಯಾಪಕರಾದ ಶ್ರೀ ಗುರುಪ್ರಸಾದ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕೋವಿಡ್ ನಿಯಮವನ್ನು ಪಾಲಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.