Vande Bharat Train: ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲು… ಪ್ರಯಾಣಿಕರು ಪಾರು
Team Udayavani, Aug 18, 2023, 6:50 AM IST
ಕಾಸರಗೋಡು: ಕಾಸರಗೋಡಿನಿಂದ ಆ. 16ರ ಮುಂಜಾನೆ 2.30ಕ್ಕೆ ತಿರುವನಂತಪುರಕ್ಕೆ ಹೊರಟ ವಂದೇ ಭಾರತ್ ಎಕ್ಸ್ ಪ್ರಸ್ ರೈಲಿಗೆ ತಲಶೇರಿ ಮಾಹಿಯ ಸಮೀಪ 3.43ರ ವೇಳೆಗೆ ಕಲ್ಲು ತೂರಲಾಗಿದೆ.
ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ರೈಲಿನ ಒಂದು ಹವಾನಿಯಂತ್ರಿತ ಬೋಗಿಯ ಗಾಜು ಹಾನಿಗೀಡಾಗಿದೆ. ವಂದೇ ಭಾರತ್ ರೈಲಿಗೆ ನಿರಂತರ ನಾಲ್ಕನೇ ಬಾರಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದೆ.