ಜನಮನ ಸೆಳೆಯುತ್ತಿರುವ ಹಸುರು ಭವನ


Team Udayavani, Feb 25, 2019, 1:00 AM IST

hasuru-bhavana.jpg

ಕಾಸರಗೋಡು: ಹರಿತ ಕೇರಳ ಮಿಷನ್‌ ನಿರ್ಮಿಸಿರುವ ಹಸುರು ಭವನ ಸೌಂದರ್ಯ ಮತ್ತು ಪರಿಸರ ಪ್ರೇಮದ ಕುರಿತು ಜಾಗೃತಿ ಮೂಡಿಸುವ ಮೂಲಕ ಜನತೆಯ ಗಮನ ಸೆಳೆಯತ್ತಿದೆ. 

ಉತ್ಪನ್ನಗಳ ಪ್ರದರ್ಶನ
ರಾಜ್ಯ ಸರಕಾರ ಒಂದು ಸಾವಿರ ದಿನಗಳನ್ನು ಪೂರೈಸಿದ ಸಂಭ್ರಮಾಚರಣೆ ಅಂಗವಾಗಿ ಕಾಂಞಂಗಾಡ್‌ ಅಲಾಮಿಪಳ್ಳಿ ಬಸ್‌ ನಿಲ್ದಾಣ ಆವರಣದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಉತ್ಪನ್ನ ಪ್ರದರ್ಶನ ಮಳಿಗೆಗಳ ಸಾಲಿನಲ್ಲಿ ಸೇರಿದ ಈ ಹಸುರು ಮನೆ ವಿಶೇಷತೆಯಿಂದ ಕೂಡಿದೆ.

ಹಳೆಯ ಕಾಲದ ಮನೆಗಳನ್ನು ನೆನಪಿಸುವ ರೀತಿ ಈ ಹಸುರು ಭವನ ನಿರ್ಮಾಣಗೊಂಡಿದೆ. ತ್ಯಾಜ್ಯ ಸಂಸ್ಕರಣೆ, ಸೌರಶಕ್ತಿ ಬಳಕೆ, ಜಲಸಂರಕ್ಷಣೆ  ಇತ್ಯಾದಿಗಳಿಗೆ ಆದ್ಯತೆ ನೀಡಿ ಮನೆ ನಿರ್ಮಾಣವಾಗಿದೆ. 

ಜನ ವಾಸಿಸುವ ಮನೆಯನ್ನು ಯಾವ ರೀತಿ ಪ್ರಕೃತಿ ಸ್ನೇಹಿ ಕೇಂದ್ರವಾಗಿಸಬಹುದು ಎಂದು ಪ್ರಾಯೋಗಿಕವಾಗಿ ತೋರುವ ಯತ್ನದಲ್ಲಿ ಹರಿತ ಕೇರಳ ಮಿಷನ್‌ ಯಶಸ್ವಿಯಾಗಿದೆ.

ಪ್ರಕೃತಿಗೆ ಪೂರಕವಾದ ಸಾಮಗ್ರಿಗಳಿಂದಲೇ ಮನೆಯ ನಿರ್ಮಾಣವಾಗಿದೆ. ಅಡುಗೆ ಮನೆಯ ತ್ಯಾಜ್ಯ ಸಂಸ್ಕರಣೆಗೆ ಕಿಚನ್‌ ಬಿನ್‌ಗಳು, ಬಯೋಗ್ಯಾಸ್‌ ಬಳಸಿ ಅಡುಗೆ ಸಿದ್ಧಪಡಿಸುವ ಸೌಲಭ್ಯಗಳು, ಸೌರಶಕ್ತಿ ಬಳಸಿ ಬೆಳಕಿನ ವ್ಯವಸ್ಥೆ, ಮನೆಗೆ ಬೇಕಾದ ತರಕಾರಿಗಳನ್ನು ಹಿತ್ತಿಲಲ್ಲೇ ಬೆಳೆಯುವ ವಿಧಾನ, ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸದೇ ಇರುವುದು, ಮಳೆ ನೀರು ಸಂಗ್ರಹಿಸಿ ಬಾವಿಗೆ ನೀರನ್ನು ರೀಚಾರ್ಜ್‌ ಮಾಡುವುದು ಇತ್ಯಾದಿ ಜನಾಕರ್ಷಣೆ ವಿಚಾರಗಳಿವೆ.

ಪ್ರಕೃತಿಸ್ನೇಹಿ
ಬೇಡಡ್ಕ, ಕಿನಾನೂರು-ಕರಿಂದಳಂ ಪಂಚಾಯತ್‌ನಲ್ಲಿ ಕೃಷಿಕರು ಬೆಳೆದು, ಬ್ರಾಂಡ್‌ ಆಗಿಸಿದ ವಿಶೇಷ ರೀತಿಯ ಅಕ್ಕಿ ಪ್ರದರ್ಶನ, ಪ್ಲಾಸ್ಟಿಕ್‌ ಗ್ರೋಬ್ಯಾಗ್‌ಗಳ ಬದಲಿಗೆ ಕುಟುಂಬಶ್ರೀ ಕಾರ್ಯಕರ್ತರು ಹಾಳೆಯಿಂದ  ತಯಾರಿಸಿದ ಬ್ಯಾಗ್‌ಗಳು, ಹಳೆಯ ಕೊಡೆ, ಬಟ್ಟೆಗಳಿಂದ ಹಸುರು ಕ್ರಿಯಾ ಸೇನೆ ಸದಸ್ಯರು ಸಿದ್ಧಪಡಿಸಿರುವ ಚೀಲಗಳು ಇಲ್ಲಿ ಪ್ರದರ್ಶನದಲ್ಲಿವೆ. 

ಜನಜಾಗೃತಿ
ಹರಿತ ಕೇರಳ ಮಿಷನ್‌ ಜಿಲ್ಲೆಯಲ್ಲಿ ನಡೆಸಿದ ಚಟುವಟಿಕೆಗಳ ನೂರಾರು ಚಿತ್ರಗಳ ಪ್ರದರ್ಶನ, ರಾಜ್ಯ ಮಟ್ಟದಲ್ಲಿ ಜಾರಿಗೊಳಿಸಿದ ಯೋಜನೆಗಳ ಮಾಹಿತಿ ಇತ್ಯಾದಿ ಪ್ರದರ್ಶನ ಇಲ್ಲಿವೆ. ಜತೆಗೆ ಕಿರು ಹೊತ್ತಗೆಯ ಮೂಲಕ ಜನಜಾಗೃತಿ ಮಾಹಿತಿಯನ್ನೂ ಹಂಚಲಾಗುತ್ತಿದೆ.

ಉದ್ಘಾಟನೆ  
ಕಾಂಞಂಗಾಡ್‌ ಅಲಾಮಿಪಳ್ಳಿ ಬಸ್‌ ನಿಲ್ದಾಣ ಆವರಣದಲ್ಲಿ ರಾಜ್ಯ  ಸರಕಾರದ    ಒಂದು ಸಾವಿರ ದಿನಗಳನ್ನು   ಪೂರೈಸಿದ ಅಂಗವಾಗಿ  ನಡೆಯುತ್ತಿರುವ ವಿವಿಧ ಇಲಾಖೆಗಳ ಉತ್ಪನ್ನಗಳ ಪ್ರದರ್ಶನ ಮಳಿಗೆಗಳ ಅಂಗವಾಗಿ ಸ್ಥಾಪಿಸಿದ  ಹರಿತ ಕೇರಳ ಮಿಷನ್‌ನ ಹಸುರು ಭವನ ಉದ್ಘಾಟನೆಗೊಂಡಿತು.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಹಸುರು ಮನೆಯನ್ನು ಉದ್ಘಾಟಿಸಿದರು. 

ಹರಿತ ಕೇರಳ ಮಿಷನ್‌ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್‌, ಕೆ.ಅಮೃತ ರಾಘವನ್‌, ಎಲಿಝಬೆತ್‌ ಮ್ಯಾಥ್ಯೂ, ಪಿ. ಅಶ್ವಿ‌ನ್‌, ಗೀತು, ಕೆ. ಬಾಲನ್‌, ಸ್ನೇಹಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.