Kumble ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಾಯ
Team Udayavani, Dec 6, 2023, 12:40 AM IST
ಕುಂಬಳೆ: ಗೋವಾದಿಂದ ಮರಳುತ್ತಿದ್ದಾಗ ಕುಂಬಳೆ ಶಿರಿಯದಲ್ಲಿ ರೈಲುಗಾಡಿಯಿಂದ ಹೊರಕ್ಕೆಸೆಯಲ್ಪಟ್ಟ ಮಲಪ್ಪುರಂ ಕೊಂಡೋಟಿ ನಿವಾಸಿ, ದ್ವಿತೀಯ ವರ್ಷ ಪದವಿ ವಿದ್ಯಾರ್ಥಿ ಫಾಯಿ (20) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಾಕ್ಕೆ ಪ್ರವಾಸ ಹೋಗಿದ್ದ 35ರಷ್ಟು ವಿದ್ಯಾರ್ಥಿಗಳು ಗೋವಾದಿಂದ ವಾಪಸಾಗುತ್ತಿದ್ದಾಗ ರೈಲುಗಾಡಿಯಲ್ಲಿ ಶೌಚಾಲಯಕ್ಕೆ ಹೋಗುತ್ತಿದ್ದಾಗ ಆಯತಪ್ಪಿ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಇದನ್ನು ನೋಡಿದ ಇತರ ವಿದ್ಯಾರ್ಥಿಗಳು ರೈಲು ಗಾಡಿಯನ್ನು ಚೈನ್ ಎಳೆದು ನಿಲ್ಲಿಸಿದರು.