2,500 ಸ್ಮಾರ್ಟ್ಕಾರ್ಡ್ ವಿತರಣೆ; ಸಿಟಿ ಬಸ್ಗಳ “ಸ್ಮಾರ್ಟ್ ಕಾರ್ಡ್’ಗೆ ಬಹು ಬೇಡಿಕೆ
Team Udayavani, Aug 7, 2020, 12:42 PM IST
ಮಹಾನಗರ: ನಗರದ ಸಿಟಿಬಸ್ಗಳಲ್ಲಿ ಜಾರಿಗೆ ಬಂದಿರುವ “ಸ್ಮಾರ್ಟ್ಕಾರ್ಡ್’ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಮೂಲಕವೇ ಪ್ರಯಾಣಿಕರು ಸಿಟಿಬಸ್ಗಳಲ್ಲಿ ಸಂಚರಿಸಲು ಉತ್ಸುಕತೆ ತೋರುತ್ತಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 2,500 ಸ್ಮಾರ್ಟ್ ಕಾರ್ಡ್ಗಳನ್ನು ಪ್ರಯಾಣಿಕರು ಪಡೆದುಕೊಂಡಿ ದ್ದಾರೆ. ಒಂದು ಬಸ್ನ ಒಂದು ದಿನದ ಗಳಿಕೆಯಲ್ಲಿ ಶೇ. 15ರಷ್ಟು ಸ್ಮಾರ್ಟ್ ಕಾರ್ಡ್ ಮೂಲಕ ದೊರೆಯುತ್ತಿದೆ. ಪುತ್ತೂರು-ಮಂಗಳೂರು ಬಸ್ನಲ್ಲಿಯೂ ಈ ಪರಿಕಲ್ಪನೆ ಮುಂದುವರಿಸಲು ಇದೀಗ ಯೋಜನೆ ರೂಪಿಸಲಾಗುತ್ತಿದೆ.
ಏನಿದು ಸ್ಮಾರ್ಟ್ಕಾರ್ಡ್?
ಸ್ಮಾರ್ಟ್ಕಾರ್ಡ್ ಅಂದರೆ ನಗದು ರಹಿತ ಪ್ರಯಾಣಕ್ಕೆ ಅವಕಾಶ ಎಂಬುದು ತಾತ್ಪರ್ಯ. ಇದು ಸಂಪೂರ್ಣ ಡಿಜಿಟಲ್. ಸದ್ಯ ಸಿಟಿ ಬಸ್ನ ಎಲ್ಲ ನಿರ್ವಾಹಕರಲ್ಲಿ “ಇಟಿಎಂ’ ಟಿಕೆಟ್ ಮೆಶಿನ್ ಇದೆ. ಈ ಕಾರ್ಡ್ ಪಡೆದವರು ನಿಗದಿತವಾಗಿ ರೀಚಾರ್ಜ್ ಮಾಡಿಕೊಂಡು ಬಸ್ನಲ್ಲಿ ಪ್ರಯಾಣಿಸು ವಾಗ ಕಾರ್ಡ್ ಸ್ವೆ„ಪ್ ಮಾಡಬೇಕು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್ ನಿಂದ ಕಡಿತವಾಗುತ್ತದೆ. ನಗರದ ಎಲ್ಲ ಸಿಟಿ ಬಸ್ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು “ಚಲೋ’ ಸಂಸ್ಥೆಯ ಸಹಯೋಗದೊಂದಿಗೆ ಸಿಟಿ ಬಸ್ ಮಾಲಕರ ಸಂಘ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಪ್ರಯಾಣಿಕರಿಗೆ “ಸ್ಮಾರ್ಟ್ ಕಾರ್ಡ್’ ಉಚಿತ
ಸ್ಮಾರ್ಟ್ಕಾರ್ಡ್ ಪಡೆಯಲು ಪ್ರಯಾ ಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ಕಂಡಕ್ಟರ್ ಅವರಲ್ಲಿ ಈ ಕಾರ್ಡ್ ಉಚಿತವಾಗಿ ಪಡೆಯಬಹುದು ಹಾಗೂ ಅವರ ಬಳಿಯೇ ಹಣ ಕೊಟ್ಟು ರೀಚಾರ್ಜ್ ಕೂಡ ಮಾಡಿಸಬಹುದು. ಜತೆಗೆ ನಗರದಲ್ಲಿ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ ಸಹಿತ ವಿವಿಧ ಕಡೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. 10,000ಕ್ಕೂ ಅಧಿಕ ಕಾರ್ಡ್ ಗಳನ್ನು ಪ್ರಯಾಣಿಕರಿಗೆ ನೀಡಲು ಉದ್ದೇಶಿಸಲಾಗಿದೆ.
ಉತ್ತಮ ಸ್ಪಂದನೆ
ಸ್ಮಾರ್ಟ್ ಕಾರ್ಡ್’ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ಕಾರ್ಡ್ ಪಡೆಯಲು ಉತ್ಸುಕತೆ ತೋರುತ್ತಿದ್ದಾರೆ. ಬಸ್ನಲ್ಲಿ ಕಂಡಕ್ಟರ್ ಮೂಲಕವೇ ಇದೀಗ ಕಾರ್ಡ್ ವಿತರಿಸಲಾಗುತ್ತಿದೆ. ಜತೆಗೆ ರೀಚಾರ್ಜ್ ಕೂಡ ಅವರಿಂದಲೇ ಮಾಡಲಾಗುತ್ತದೆ.
- ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…