ಪ.ಬಂಗಾಲದ ವಿದ್ಯಾರ್ಥಿ ನಾಪತ್ತೆ:ಹೆತ್ತವರು ಬರಿಗೈಯಲ್ಲಿ ವಾಪಸ್
Team Udayavani, Aug 7, 2018, 3:32 PM IST
ಮಂಗಳೂರು: ಕಾಲೇಜೊಂದಕ್ಕೆ ಸೇರ್ಪಡೆಗಾಗಿ ಪಶ್ಚಿಮ ಬಂಗಾಲದಿಂದ ಮಂಗಳೂರಿಗೆ ವಾರದ ಹಿಂದೆ ಬಂದು ಕೂಳೂರಿನಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಭಿಜಿತ್ ಡೇ ಬಗ್ಗೆ ಸುಮಾರು 10 ದಿನಗಳ ಕಾಲ ಶೋಧ ನಡೆಸಿದ ಹೆತ್ತವರು ಕೊನೆಗೂ ಬರಿಗೈಯಲ್ಲಿ ಕೋಲ್ಕತಾಕ್ಕೆ ವಾಪಸಾಗಿದ್ದಾರೆ.
ಬಿ.ಕಾಂ. ಓದಿದ ವಿದ್ಯಾರ್ಥಿ ಅಭಿಜಿತ್ ಮಣಿಪಾಲದಲ್ಲಿ ಎಂ.ಕಾಂ. ಓದಬೇಕೆಂದು ಕಳೆದ ಜುಲೈ 25ರಂದು ಮಂಗಳೂರಿಗೆ ಬಂದಿದ್ದು, ಜು. 27ರಂದು ಆತನ ತಂದೆ ದೇವ್ ಕುಮಾರ್ ಮತ್ತು ತಾಯಿ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಹೆತ್ತವರನ್ನು ಎದುರ್ಗೊಂಡ ಅಭಿಜಿತ್ ಬಳಿಕ ಮಣಿಪಾಲಕ್ಕೆಂದು ಹೆತ್ತವರ ಜತೆ ಹೊರಟು ಟ್ಯಾಕ್ಸಿಯಲ್ಲಿ ಕೂಳೂರಿಗೆ ಬಂದಿದ್ದರು. ಅಲ್ಲಿ ಹೊಟೇಲ್ ಒಂದರಲ್ಲಿ ಚಹಾ ಸೇವಿಸಿ ಹೊರಗೆ ಬರುವಷ್ಟರಲ್ಲಿ ಅಭಿಜಿತ್ ನಾಪತ್ತೆಯಾಗಿದ್ದನು.
ಮರುದಿನ ಅಭಿಜಿತ್ ಸೋದರ ದೇಬ್ಜಿತ್ ಮಂಗಳೂರಿಗೆ ಬಂದಿದ್ದರು.ಕಾವೂರು ಪೊಲೀಸರು ದೇಬ್ಜಿತ್ ಮತ್ತು ಹೆತ್ತವರ ಜತೆಗೂಡಿ ಎಲ್ಲ ಕಡೆ ಅಭಿಜಿತ್ನನ್ನು ಹುಡುಕಾಡಿದ್ದರು. ಕೊನೆಗೂ ಎಲ್ಲಿಯೂ ಸಿಗದೆ ಹೆತ್ತವರು ಆ. 4ರಂದು ರಾತ್ರಿ ಬೆಂಗಳೂರಿಗೆ ತೆರಳಿ ರವಿವಾರ ಅಲ್ಲಿಂದ ಕೋಲ್ಕಾತಾಕ್ಕೆ ಪ್ರಯಾಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ