ಮಳೆನೀರು ಹರಿವಿಗೆ ರಾಜ ಕಾಲುವೆ, ಸುರಕ್ಷಾ ಕ್ರಮಕ್ಕೆ ಬೇಕು ಮಾಸ್ಟರ್‌ ಪ್ಲ್ಯಾನ್‌

ಮಂಗಳೂರು ವಿಮಾನ ನಿಲ್ದಾಣ ಸುತ್ತ ಗುಡ್ಡ ಜರಿತಕ್ಕೆ ತಡೆಗೋಡೆ ಅಗತ್ಯ

Team Udayavani, Jul 22, 2022, 11:42 AM IST

7

ಬಜಪೆ: ಮಳೆಗಾಲ ಆರಂಭವಾದಂತೆ ಮಂಗಳೂರು ವಿಮಾನ ನಿಲ್ದಾಣದ ಸುತ್ತ ಗುಡ್ಡಗಳು ಜರಿಯುತ್ತಿವೆ. ಗುಡ್ಡ ಜರಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೂ ತೊಂದರೆ ಯಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಿದ್ದ ಮಳೆನೀರನ್ನು ಕೂಡ ಒಂದೆಡೆ ಹರಿಯಬಿಡುವ ಕಾರಣ ಈಗಾಗಲೇ ಕೆಲವೆಡೆ ಅನಾಹುತಗಳಾಗಿವೆ. ವಿಮಾನ ನಿಲ್ದಾಣದ ಸುರಕ್ಷೆ ದೃಷ್ಟಿಯಿಂದ ಪ್ರಾಧಿಕಾರ ಹೆಚ್ಚೆತ್ತುಕೊಳ್ಳುವ ಅಗತ್ಯವಿದೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಶೀಘ್ರ ಹೆಜ್ಜೆ ಇಡಬೇಕಾಗಿದೆ.

ಅದ್ಯಪಾಡಿ, ಕೊಳಂಬೆಯಲ್ಲಿ ಗುಡ್ಡ ಜರಿತ

ಈ ವರ್ಷದ ಮಳೆಗೂ ಕೊಳಂಬೆ ವಿಟ್ಲಬೆಟ್ಟು ಪ್ರದೇಶದಲ್ಲಿ, ಅದ್ಯಪಾಡಿ ಸಂಕೇಶ ಪ್ರದೇಶ ಹಾಗೂ ಇತರೆಡೆ ಗುಡ್ಡ ಜರಿತವಾಗಿದೆ. ತಡೆಗೋಡೆಗಳು ನಿರ್ಮಾಣ ಕಾರ್ಯವೂ ಎರಡು ಕಡೆ ನಡೆದಿದೆ.

ಕೊಳಂಬೆ, ಅದ್ಯಪಾಡಿ ಗುಡ್ಡಗಳ ಭೂಸ್ವಾಧೀನ ಅಗತ್ಯ

ಕೊಳಂಬೆ, ಅದ್ಯಪಾಡಿಯಲ್ಲಿ ರನ್‌ ವೇಗೆ ತಾಗಿಕೊಂಡು ಗುಡ್ಡಗಳಿವೆ. ಇದು ಖಾಸಗಿ ಜಾಗವಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿಗೆ ಅನುಮತಿ ಇಲ್ಲ. ಖಾಸಗಿ ಜಾಗದವರಿಗೆ ಏನೂ ಮಾಡದ ಪರಿಸ್ಥಿತಿ. ಅದ್ಯಪಾಡಿ ಪದವು ಪ್ರದೇಶವನ್ನು ಬಿಟ್ಟು ಇತರೆಡೆ ಮನೆ ಇಲ್ಲದ ಪ್ರದೇಶಗಳನ್ನು ಭೂಸ್ವಾಧೀನ ಮಾಡಿದಲ್ಲಿ. ವಿಮಾನ ನಿಲ್ದಾಣ, ರನ್‌ವೇಯ ಸುತ್ತ ಗುಡ್ಡಗಳಿಗೆ ಸುರಕ್ಷೆ ದೃಷ್ಟಿಯಿಂದ ತಡೆಗೋಡೆಗಳನ್ನು ನಿರ್ಮಿಸಬಹುದಾಗಿದೆ.

ಪ್ರತೀ ವರ್ಷ ಮಳೆಗಾಲದಲ್ಲಿ ಕೊಳಂಬೆ, ಅದ್ಯಪಾಡಿ ಗುಡ್ಡ ಪ್ರದೇಶ ತಪ್ಪಲಲ್ಲಿರುವ ಮನೆಯವರು ಯಾ ವಾಗ ಗುಡ್ಡ ಕುಸಿತವಾಗುತ್ತದೋ, ಮಳೆ ನೀರು ನಮ್ಮ ಕಡೆಗೆ ಬರುತ್ತದೋ ಎಂಬ ಭಯದಲ್ಲಿರುತ್ತಾರೆ.

ವಿಮಾನ ನಿಲ್ದಾಣದ ಗುಡ್ಡ ನೀರನ್ನು ಕಾಂಕ್ರೀಟ್‌ ಅಳವಡಿಸಿದ ಕೊಳವೆ ಅಥವಾ ಕಾಲುವೆಗಳ ಮೂಲಕ ವಿಂಗಡಿಸಿ ವಿವಿಧೆಡೆ ಹರಿಯ ಬಿಡುವುದರಿಂದ ಗುಡ್ಡ ಜರಿಯುವುದನ್ನು ತಡೆಯಬಹುದು. ಇದೀಗ ವಿಮಾನ ನಿಲ್ದಾಣದ ಗುಡ್ಡದ ನೀರನ್ನು ಒಂದೇ ಬದಿಯಲ್ಲಿ ಹರಿಯಬಿಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ತಡೆಗೋಡೆ ನಿರ್ಮಿಸಿದರೆ ವಿಮಾನ ನಿಲ್ದಾಣಕ್ಕೆ ಚಿರತೆ, ಹುಲಿ, ಕಾಡು ಕೋಣ ಕಾಟ ಕಡಿಮೆಯಾಗಲಿದೆ. ವಿಮಾನ ನಿಲ್ದಾಣದ ಸುರಕ್ಷಾ ದೃಷ್ಟಿಯಿಂದ ತುರ್ತು ಕಾರ್ಯ ಮಾಡಬೇಕಾಗಿದೆ. ಇದರ ಜತೆಗೆ ಕೊಳಂಬೆ, ಅದ್ಯಪಾಡಿ ಅಲ್ಲಿನ ಮನೆಗಳ ಹಿತವನ್ನು ಕಾಪಾಡಬೇಕಾಗಿದೆ.

2 ವರ್ಷಗಳ ಹಿಂದೆ ಹಾನಿ

ಕರಂಬಾರು, ಕೊಳಂಬೆ ವಿಟ್ಲಬೆಟ್ಟು ಪ್ರದೇಶದಲ್ಲಿ ವಿಮಾನ ನಿಲ್ದಾಣದ ರನ್‌ ವೇ ನೀರು ಬಂದು ಎರಡು ವರ್ಷಗಳ ಹಿಂದೆ ಮನೆಗಳಿಗೆ ಹಾನಿಯಾಗುತ್ತು. ಅದ್ಯಪಾಡಿ ಪದವಿನಲ್ಲಿ ಈ ಬಾರಿ ರಸ್ತೆಗೆ ಹಾನಿಯಾಗಿ ವಾಹನ ಸಂಚಾರ ಕಡಿತಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ರನ್‌ ವೇ ನೀರು ಒಂದೆಡೆ ಬಿಟ್ಟಿರುವುದು.

ರಸ್ತೆ ವಿಸ್ತರಣೆ ಅಗತ್ಯ

ವಿಮಾನ ನಿಲ್ದಾಣದ ಗುಡ್ಡಗಳನ್ನು ಭೂಸ್ವಾಧೀನ ಮಾಡಿದ್ದಲ್ಲಿ ಕೆಳಗಡೆ ಇರುವ ಪ್ರದೇಶಗಳ ರಸ್ತೆ ವಿಸ್ತರಿಸಲು ಅನುಕೂಲವಾಗುತ್ತದೆ. ಕರಂಬಾರು ಪ್ರದೇಶದಲ್ಲಿ ಈಗಾಗಲೇ ರಾಜಕಾಲುವೆ ನಿರ್ಮಿಸಿದಂತೆ, ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಗುಡ್ಡದಿಂದ ಬರುವ ಮಳೆ ನೀರು ಹರಿಯಲು ಕಾಂಕ್ರೀಟ್‌ ಅಳವಡಿಸಿದ ರಾಜ ಕಾಲುವೆಗಳ ನಿರ್ಮಾಣ ಮಾಡಬೇಕು. ಇದರಿಂದ ಗುಡ್ಡ ಕುಸಿತವೂ ತಡೆಯಬಹುದು. ಮಳೆ ನೀರು ಹರಿದು ಗುಡ್ಡದ ಕೆಳಗಿನ ಪ್ರದೇಶಗಳಿಗೆ ಹಾನಿಯಾಗುವುದನ್ನು ನಿಯಂತ್ರಿಸಬಹುದು. ರಾಜ ಕಾಲುವೆ ನೀರನ್ನು ನೇರವಾಗಿ ಗುರುಪುರ ನದಿ ಸೇರುವಂತೆ ಮಾಡಬೇಕಾಗಿದೆ.

-ಸುಬ್ರಾಯ್‌ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.