ಬಜಪೆ ಪಟ್ಟಣ ಪಂಚಾಯತ್‌ನಿಂದ ಚರಂಡಿ ದುರಸ್ತಿ


Team Udayavani, Nov 10, 2022, 3:10 PM IST

17

ಬಜಪೆ: ಬಜಪೆ ಪೇಟೆಯ ರಾಜ್ಯ ಹೆದ್ದಾರಿ 67ರ ಬಜಪೆ ಚರ್ಚ್‌ ಕಟ್ಟಡದ ಎದುರಲ್ಲಿ ಚರಂಡಿ ಹೂಳಿನಿಂದ ತುಂಬಿ ಬ್ಲಾಕ್‌ ಆಗಿದ್ದು ಇದರಿಂದ ರಸ್ತೆಯ ಬದಿಯಲ್ಲಿ ಚರಂಡಿಯ ನೀರು ನಿಂತು ಪಾದಚಾರಿ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುವ ಬಗ್ಗೆ ಉದಯವಾಣಿ ಸುದಿನ ಜು.17ರಂದು ವರದಿಯನ್ನು ಪ್ರಕಟಿಸಿತ್ತು.

ಇದಕ್ಕೆ ಈಗ ಬಜಪೆ ಪ. ಪಂ.ನಿಂದ ಸ್ಪಂದನೆ ದೊರಕಿದ್ದು, ಚರಂಡಿಯ ಹೂಳು ತೆಗೆಯುವ, ಅದನ್ನು ಸರಿಪಡಿಸುವ ಕಾರ್ಯ ಎರಡು ದಿನಗಳಿಂದ ನಡೆಯುತ್ತಿದೆ. ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಯಾವುದೇ ತಡೆಗಳು ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ.

ಹೂಳು ತುಂಬಿ ಬ್ಲಾಕ್‌

ಕಟೀಲು-ಬಜಪೆ ರಾಜ್ಯ ಹೆದ್ದಾರಿಯ ಹಾಗೂ ಬಜಪೆ -ಕೈಕಂಬ ರಾಜ್ಯ ಹೆದ್ದಾರಿ ಚರ್ಚ್‌ ಎದುರು ಸರ್ಕಲ್‌ನಲ್ಲಿ ಸಂಪರ್ಕಿಸುತ್ತದೆ. ಬಜಪೆ ಪೇಟೆಯಲ್ಲಿ ಚರಂಡಿಯಲ್ಲಿ ಮಳೆಯ ನೀರು ಜತೆ ಹೊಟೇಲ್‌ ಹಾಗೂ ಇತರ ಅಂಗಡಿಗಳ ನೀರು ಆ ಚರಂಡಿಯಲ್ಲಿ ಹರಿಯುತ್ತಿದ್ದು ಚರಂಡಿಯಲ್ಲಿ ಹೂಳು ತುಂಬಿದ ಕಾರಣ ನೀರು ಹರಿಯಲು ಜಾಗವಿಲ್ಲದೇ ಚರಂಡಿಯ ಮೇಲಿನಿಂದಲೇ ತ್ಯಾಜ್ಯ ನೀರು ಹರಿದಾಡುತ್ತಿದ್ದು. ಇದರ ಕೆಟ್ಟ ವಾಸನೆ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು.

ಚರಂಡಿಯ ಹೂಳನ್ನು ಜೆಸಿಬಿಯ ಮೂಲಕ ತೆಗೆಯಲಾರಂಭಿಸಿದೆ ಹಾಗೂ ಸ್ಲ್ಯಾಬ್‌ನ್ನು ಹಾಕಲಾಗಿದೆ. ಈಗಾಗಲೇ ಮೂರು ಟಿಪ್ಪರ್‌ನಷ್ಟು ಹೂಳನ್ನು ತೆಗೆಯಲಾಗಿದೆ. ಚರಂಡಿಯಲ್ಲಿ ಇನ್ನೂ ಐದಾರು ಟಿಪ್ಪರ್‌ನಷ್ಟು ಹೂಳು ತುಂಬಿರುವ ಸಾಧ್ಯತೆಗಳು ಇವೆ.

ಪೈಪ್‌ ಮೂಲಕ ಅನಧಿಕೃತವಾಗಿ ತ್ಯಾಜ್ಯ ನೀರು

ಕೆಲವು ಅಂಗಡಿಗಳಿಂದ ಅನಧಿಕೃತ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಪೈಪ್‌ ಮೂಲಕ ಬೀಡಲಾಗುತ್ತಿತ್ತು ಕಂಡು ಬಂದಿದ್ದು ಪೈಪ್‌ಗೆ ಮುಚ್ಚಳ ಹಾಕಿ ಬಂದ್‌ ಮಾಡಲಾಗಿದೆ. ಬಜಪೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪೂರ್ಣಕಲಾ ವೈ. ಕೆ.ಸ್ಥಳಕ್ಕೆ ಭೇಟಿ ನೀಡಿದ್ದು, ತ್ಯಾಜ್ಯ ನೀರನ್ನು ಪೈಪ್‌ಗ್ಳ ಮೂಲಕ ಅನಧಿಕೃತವಾಗಿ ಚರಂಡಿಗೆ ಬೀಡುತ್ತಿದ್ದ ಪೈಪ್‌ಗ್ಳನ್ನು ಮುಚ್ಚಲು ಹಾಗೂ ಚರಂಡಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿಯವಂತೆ ಮಾಡಲು ಸೂಚನೆ ನೀಡಿದ್ದಾರೆ.

ಟಾಪ್ ನ್ಯೂಸ್

e cigerette

ವಿದೇಶಿ ಸಿಗರೇಟ್‌ ವಶ

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

arrest

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಸೆರೆ

exam

ಉಭಯ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಗಮ ಆರಂಭ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

kaadaane

ಕಡಿರುದ್ಯಾವರ: ಕಾಡಾನೆ ಸಂಚಾರ

ಶ್ರೀನಿವಾಸ್‌ ಸೇರ್ಪಡೆಗೆ ಕಾಂಗ್ರೆಸಿಗರ ವಿರೋಧ

ಶ್ರೀನಿವಾಸ್‌ ಸೇರ್ಪಡೆಗೆ ಕಾಂಗ್ರೆಸಿಗರ ವಿರೋಧ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e cigerette

ವಿದೇಶಿ ಸಿಗರೇಟ್‌ ವಶ

exam

ಉಭಯ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಗಮ ಆರಂಭ

ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಎಂ.ಜಿ. ಮಹೇಶ್‌

ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಎಂ.ಜಿ. ಮಹೇಶ್‌

arrest 3

ಮಾದಕದ್ರವ್ಯ ಸೇವನೆ: ಬಂಧನ

1-sads-asd

ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

e cigerette

ವಿದೇಶಿ ಸಿಗರೇಟ್‌ ವಶ

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

arrest

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಸೆರೆ

exam

ಉಭಯ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಗಮ ಆರಂಭ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ