ಲೇನ್‌ ವ್ಯವಸ್ಥೆ ಪಾಲಿಸದ ಬಸ್‌ಗಳು; ರಸ್ತೆಯೇ ನಿಲ್ದಾಣ !

ಸುಗಮ ಸಂಚಾರಕ್ಕೆ ತೊಂದರೆ

Team Udayavani, Dec 18, 2020, 4:34 AM IST

ಲೇನ್‌ ವ್ಯವಸ್ಥೆ ಪಾಲಿಸದ ಬಸ್‌ಗಳು; ರಸ್ತೆಯೇ ನಿಲ್ದಾಣ !

ಬಾವುಟಗುಡ್ಡ ಬಳಿ ಇರುವ ಬಸ್‌ಬೇಗೆ ಕೆಲವು ಬಸ್‌ಗಳು ಪ್ರವೇಶಿಸುವುದಿಲ್ಲ.

ಮಹಾನಗರ: ನಗರದಲ್ಲಿ ಬಸ್‌ಗಳ ಸುಗಮ ಸಂಚಾರದ ಉದ್ದೇಶಕ್ಕಾಗಿ ಹಲವು ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್‌ ಬೇ/ಬಸ್‌ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸರಕಾರಿ, ಖಾಸಗಿ ಸಹಿತ ನಗರದ ಮೂಲಕ ಓಡಾಡುವ ಹಲವಾರು ಬಸ್‌ಗಳು ಬಸ್‌ ಈ ಲೇನ್‌ ವ್ಯವಸ್ಥೆ ಪಾಲಿಸದ ಕಾರಣ ಇತರ ವಾಹನ ಚಾಲಕರು, ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ.

ಹಂಪನಕಟ್ಟೆ, ಬಂಟ್ಸ್‌ ಹಾಸ್ಟೆಲ್‌, ಲಾಲ್‌ಬಾಗ್‌, ಬಾವುಟಗುಡ್ಡ, ಪಿವಿಎಸ್‌ ಜಂಕ್ಷನ್‌, ಜ್ಯೋತಿ ಚಿತ್ರಮಂದಿರ ಬಳಿ, ಬಿಜೈ ಸಹಿ¤ ಅನೇಕ ಕಡೆಗಳಲ್ಲಿ ಬಸ್‌ ಲೇ/ಬೇಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆ, ಬಸ್‌ ಲೇನ್‌ ಪ್ರತ್ಯೇಕಿಸಲು ಕೋನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಡೆ ಗಳಲ್ಲಿ ಮಾರ್ಕಿಂಗ್‌ ಮಾಡಲಾಗಿದೆ. ಈ ಮಾರ್ಕಿಂಗ್‌ ಒಳಗೇ ಬಸ್‌ಗಳು ಸಂಚರಿಸ ಬೇಕು ಅಥವಾ ಪ್ರಯಾಣಿಕರನ್ನು ಇಳಿಸ ಬೇಕು. ಆದರೆ ಈ ನಿಯಮ ಹಲವು ಕಡೆಗಳಲ್ಲಿ ಪಾಲನೆ ಆಗುತ್ತಿಲ್ಲ.

ನಗರದ ಜ್ಯೋತಿ ಚಿತ್ರಮಂದಿರ ಬಳಿ ಇರುವ ಬಸ್‌ ಲೇನ್‌ ಒಳಗೆ ಕಾಸರಗೋಡು, ಬೆಂಗಳೂರು, ತಲಪಾಡಿ, ಸಿಟಿ ಬಸ್‌ಗಳು ಸಹಿತ ಇನ್ನಿತರ ಕಡೆಗಳಿಗೆ ತೆರಳುವ ಸರಕಾರಿ, ಖಾಸಗಿ ಬಸ್‌ಗಳು ಇದೇ ಬಸ್‌ ಬೇ ಅಥವಾ ಬಸ್‌ ಲೇನ್‌ ಮುಖೇನ ಸಂಚರಿಸಬೇಕು. ಆದರೆ ಬಸ್‌ಗಳ ಪರಸ್ಪರ ಪೈಪೋಟಿಯ ವೇಗದಲ್ಲಿ ಕೆಲವು ಬಸ್‌ಗಳು ಲೇನ್‌ಗಳನ್ನು ಪಾಲನೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಕೋನ್‌ಗಳು ಚಕ್ರದಡಿಗೆ ಸಿಲುಕಿ ಮುರಿದು ಹೋಗಿವೆ. ಈ ಬಗ್ಗೆ ಪೊಲೀಸ್‌ ಇಲಾಖೆ ಕೆಲವು ಸಮಯಗಳ ಹಿಂದೆ ಬಸ್‌ ಮಾಲಕರ ವಿರುದ್ಧ ದೂರು ದಾಖಲು ಮಾಡಿತ್ತು.

ವಾಹನ ದಟ್ಟನೆಯಿಂದ ಸದಾ ಗಿಜಿಗಿ ಡುತ್ತಿರುವ ಹಂಪನಕಟ್ಟೆ ಬಸ್‌ ನಿಲ್ದಾಣದ ಬಳಿಯೂ ಇದೇ ಸಮಸ್ಯೆ. ಹಂಪನಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಬಸ್‌ಗಳು, ಖಾಸಗಿ ವಾಹನಗಳು ಸಾಲಿನಲ್ಲಿ ನಿಂತಿರುತ್ತವೆ. ಕೆಲವು ಬಸ್‌ಗಳು ಬಸ್‌ ಲೇನ್‌ಗಳಿಗೆ ಬರುವುದಿಲ್ಲ.

ಕಾರಣ ಏನು?
ಬಸ್‌ ಚಾಲಕರು, ಮಾಲಕರು ಹೇಳು ವಂತೆ ಮಂಗಳೂರಿನಲ್ಲಿರುವ ಬಸ್‌ ಬೇ/ಲೇನ್‌ಗಳು ಅವೈಜ್ಞಾನಿಕವಾಗಿದೆ. ಇದರಲ್ಲಿ ಬಸ್‌ ಸಂಚರಿಸಲು ಕಷ್ಟವಾಗುತ್ತದೆ. ಇನ್ನು ಖಾಸಗಿ ಬಸ್‌ ಚಾಲಕರಿಗೆ ಸಮಯ ಪಾಲನೆ ಅತೀ ಮುಖ್ಯ. ಹೀಗಿದ್ದಾಗ, ಬಸ್‌ ಲೇನ್‌ ಪ್ರವೇಶಿಸುವಲ್ಲಿ ವಿಳಂಬ ನೀತಿ ಅಳವಡಿ ಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ನಿಯಮ ಪಾಲನೆಯಾಗುತ್ತಿಲ್ಲ
ಪಾಲಿಕೆ, ಸಂಚಾರಿ ಇಲಾಖೆಯು ಸುಗಮ ಸಂಚಾರದ ದೃಷ್ಟಿಯಿಂದ ಬಸ್‌ ಬೇ/ಲೇನ್‌ ಅಳವಡಿಸಿದೆ. ಇದನ್ನು ಬಸ್‌ ಚಾಲಕರು ಉಪಯೋಗಿಸಬೇಕು. ಕೆಲವು ಕಡೆಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಬಸ್‌ಬೇಗಳಲ್ಲಿ ಖಾಸಗಿ ವಾಹನ ನಿಲ್ಲಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳ ಬೇಕು ಎಂದು ಜಿ.ಕೆ. ಭಟ್‌ ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ಬಸ್‌ ಲೇನ್‌
ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಸುಗಮ ಸಂಚಾರಕ್ಕೆಂದು ಕೆಲವೊಂದು ಜಂಕ್ಷನ್‌ಗಳಲ್ಲಿ ಬಸ್‌ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳು ಅವೈಜ್ಞಾನಿ ಕವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್‌ ಆಯುಕ್ತರ ಗಮನಕ್ಕೂ ತಂದಿದ್ದೇವೆ. ಕೆಲವೊಂದು ಜಂಕ್ಷನ್‌ಗಳಲ್ಲಿನ ಬಸ್‌ ಲೇನ್‌ಗಳಲ್ಲಿ ಬಸ್‌ಗಳು ಸಾಲು ಸಾಲು ನಿಂತಿರುತ್ತವೆ. ಹೀಗಿದ್ದಾಗ ಮುಂದಿನ ಬಸ್‌ ನಿರ್ಗಮಿಸದೆ ಹಿಂದಿನ ಬಸ್‌ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಸ್‌ ಲೇನ್‌ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎನ್ನುತ್ತಾರೆ.

ಉಲ್ಲಂಘಿಸಿದರೆ ಕ್ರಮ
ನಗರದ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಸ್‌ ಬೇ/ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಮುಖೇನ ಬಸ್‌ಗಳು ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಬಸ್‌ ಲೇನ್‌ಗಳಲ್ಲಿ ಕೆಲವು ಕಡೆ ಕೋನ್‌ಗಳು ತುಂಡಾಗಿದ್ದು, ಸದ್ಯದಲ್ಲೇ ಹೊಸ ಕೋನ್‌ ಅಳವಡಿಸುತ್ತೇವೆ.
-ನಟರಾಜ್‌, ಟ್ರಾಫಿಕ್‌ ಎಸಿಪಿ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.