ಸಿಟಿ ಬಸ್‌ ಸಮಯ ಪಾಲನೆಗೆ ಸಿಸಿ ಕೆಮರಾ ನಿಗಾ

ಬಸ್‌ ಸಿಬಂದಿ, ಮಾಲಕರ ನಡುವೆ ಸಮನ್ವಯ ಸಾಧಿಸುವ ಉದ್ದೇಶ

Team Udayavani, May 30, 2022, 11:18 AM IST

cc-camera

ಮಹಾನಗರ: ಸಮಯ ಪಾಲನೆ ವಿಷಯದಲ್ಲಿ ಸಿಟಿ ಬಸ್‌ ಸಿಬಂದಿ ಮತ್ತು ಮಾಲಕರ ನಡುವಣ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮಂಗಳೂರಿನ ಐದು ಕಡೆಗಳಲ್ಲಿ ಸೋಲಾರ್‌ ಸಿಸಿ ಕೆಮರಾ ಅಳವಡಿಸಲು ಬಸ್‌ ಮಾಲಕ ಒಕ್ಕೂಟ ನಿರ್ಧರಿಸಿದೆ.

ಮೊದಲನೇ ಹಂತದಲ್ಲಿ ನಂತೂರಿ ನಲ್ಲಿ ಈಗಾಗಲೇ ಸೋಲಾರ್‌ ಸಿಸಿ ಕೆಮರಾ ಅಳವಡಿಸಲಾಗಿದ್ದು, ಬಸ್‌ಗಳ ಚಲನವಲನಗಳ ಬಗ್ಗೆ ನಿಗಾ ಇಡಲಾ ಗುತ್ತಿದೆ. ಕೆಲವೊಂದು ಸಿಟಿ ಬಸ್‌ಗಳಲ್ಲಿ ಸಮರ್ಪಕ ಸಮಯ ಪಾಲನೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದು ಸಿಬಂದಿ ನಡುವಣ ಜಗಳಕ್ಕೆ ಕಾರಣ ವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟವು ನಗರದ ಕೆಲವು ಬಸ್‌ ಪಾಯಿಂಟ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಿ ನಿಗಾ ಇಡಲು ಮುಂದಾಗಿದೆ.

ಸದ್ಯ ಮಂಗಳಾದೇವಿ ಕಡೆಯಿಂದ ಕಂಕನಾಡಿ- ನಂತೂರು- ಲಾಲ್‌ಬಾಗ್‌ -ಕೂಳೂರು-ಸುರತ್ಕಲ್‌ -ಕಾಟಿಪಳ್ಳ ರೂಟ್‌ಗೆ ದಿನಂಪ್ರತಿ ಸುಮಾರು 38 ಬಸ್‌ಗಳು ಕಾರ್ಯಾಚರಿಸುತ್ತವೆ. ಈ ರೂಟ್‌ನ ಕೆಲವು ಬಸ್‌ ಗಳ ಸಮಯ ಪಾಲನೆಯ ಬಗ್ಗೆ ಚಾಲಕರು, ನಿರ್ವಾಹಕರ ಗಲಾಟೆಯ ದೂರುಗಳು ಮಾಲಕರಿಗೆ ಬರುತ್ತಿದ್ದವು. ಪೊಲೀಸ್‌ ಇಲಾಖೆಯಿಂದಲೂ ಹಲವು ಬಾರಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅನುಮತಿಯೊಂದಿಗೆ ಸಿಸಿ ಕೆಮರಾ ಅಳವಡಿಸಲಾಗಿದೆ.

ಸೋಲಾರ್‌ ಸಿ.ಸಿ. ಕೆಮರಾ ವ್ಯವಸ್ಥೆ ಹೇಗೆ?

ಸೌರ ವಿದ್ಯುತ್‌ ಸಹಾಯದಿಂದ ಈ ಸಿಸಿ ಕೆಮರಾ ಕಾರ್ಯನಿರ್ವಹಿಸುತ್ತದೆ. ನಂತೂರಿನಲ್ಲಿ ಸುಮಾರು 15 ಅಡಿ ಎತ್ತರದ ಕಂಬದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಸೋಲಾರ್‌ ಪ್ಯಾನಲ್‌ ಮುಖೇನ ಇದರಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆ. 5 ಜಿ ವೈಫೈ ರೂಟರ್‌ ಅಳವಡಿಸಲಾಗಿದ್ದು, ಅದಕ್ಕೆ ಮೊಬೈಲ್‌ ಸಿಮ್‌ ಜೋಡಿಸಲಾಗಿದೆ. ಮೂರು ಮೆಗಾಪಿಕ್ಸೆಲ್‌ ಕೆಮರಾ ಅಳವಡಿಸಲಾಗಿದೆ. 40 ವ್ಯಾಟ್‌ ಸೋಲಾರ್‌ ಪ್ಯಾನಲ್‌ಗೆ 12 ಎಎಚ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. 128 ಜಿ.ಬಿ. ಮೊಮೊರಿ ಕಾರ್ಡ್‌ ಮುಖೇನ ವೀಡಿಯೋ ಸಂಗ್ರಹವಾಗಿ ಈ ವೀಡಿಯೋ ಫೂಟೇಜ್‌ಗಳನ್ನು ನೆಟ್‌ವರ್ಕ್‌ ಮುಖೇನ ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಐದು ಕಡೆ ಕೆಮರಾ

ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟದಿಂದ ನಂತೂರಿ ನಲ್ಲಿ ಈಗಾಗಲೇ ಸೋಲಾರ್‌ ಸಿಸಿ ಕೆಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸುರತ್ಕಲ್‌ 2 ಕಡೆಗಳಲ್ಲಿ, ಬಿಜೈ ಕೆಎಸ್ಸಾರ್ಟಿಸಿ ಖಾಸಗಿ ಬಸ್‌ ತಂಗುದಾಣ ಬಳಿ, ಲಾಲ್‌ಬಾಗ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಲಾಲಾಬಾಗ್‌- ಕಾಟಿಪಳ್ಳ ನಡುವೆ ಸುಮಾರು 70 ಬಸ್‌ಗಳು ಸಂಚರಿಸುತ್ತವೆ. ಆ ಭಾಗದ ಕೆಲವು ಕಡೆಗಳಲ್ಲಿಯೂ ಕೆಲವು ಕಡೆ ಸಿಸಿ ಕೆಮರಾ ಅಳವಡಿಸಲು ಚಿಂತಿಸಲಾಗಿದೆ. ರಾಮಚಂದ್ರ ಪಿಲಾರ್‌, ಕರಾವಳಿ ವಲಯ ಸಿಟಿ ಬಸ್‌ ಮಾಲಕರ ಒಕ್ಕೂಟ ಪ್ರ.ಕಾರ್ಯದರ್ಶಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.