ಕೆಕೆಎಂಎ ಕರ್ನಾಟಕ ಶಾಖೆಯ ವತಿಯಿಂದ ಚಾರ್ಟಡ್ ವಿಮಾನ ಇಂದು ಮಂಗಳೂರಿಗೆ
Team Udayavani, Jul 4, 2020, 3:05 PM IST
ಮಂಗಳೂರು: ಕೆಕೆಎಂಎ ಕರ್ನಾಟಕ ಶಾಖೆಯ ವತಿಯಿಂದ ಕುವೈಟ್ ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮೊದಲ ಖಾಸಗಿ ವಿಮಾನ ಬರಲಿದೆ.
ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಇದರ ಕರ್ನಾಟಕಾ ಶಾಖೆಯ ವತಿಯಿಂದ ವಿಮಾನ ಕುವೈಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದೆ.
ಭಾರತೀಯ ಮೂಲದ ಇಂಡಿಗೋ ಸಂಸ್ಥೆಯ ವಿಮಾನವು 165 ಅನಿವಾಸಿ ಕನ್ನಡಿಗರನ್ನು ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ ಹಾಗೂ ತಾಯಿನಾಡಿನಲ್ಲಿ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿಯೊಬ್ಬ ಪ್ರಯಾಣಿಕರಿಗೂ ಕೆಕೆಎಂಎ ವತಿಯಿಂದ ಆಹಾರ ಮತ್ತು ಸುರಕ್ಷಿತಾ ಪೊಟ್ಟಣವನ್ನು ನೀಡಲಾಗುತ್ತದೆ. ಈ ವಿಮಾನ ಜೂ. 27ರಂದು ಬರಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಇಂದಿಗೆ ಮುಂದೂಡಲಾಗಿತ್ತು.
ಕೆ.ಕೆ.ಎಂ ಕರ್ನಾಟಕ ಶಾಖೆಯ ತಂಡದ ಸದಸ್ಯರ ಶ್ರಮದಿಂದ ಯಾವುದೇ ತೊಂದರೆ ಇಲ್ಲದೇ ಚಾರ್ಟಡ್ ವಿಮಾನದ ಬುಕ್ಕಿಂಗ್ ಹಣ ಸಂಗ್ರಹ ಮತ್ತು ಅವರ ಧಾಖಲೆಗಳ ಸಂಗ್ರಹಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಕೆಕೆಎಂಎ ಕರ್ನಾಟಕ ಅಧ್ಯಕ್ಷರಾದ ಎಸ್ ಎಂ ಮೊಹಮ್ಮದ ಅಝರ್ ತಿಳಿಸಿದ್ದಾರೆ
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಕೆಎಂಎ ಹೆಲ್ಪ್ ಡೆಸ್ಕ್ ತಂಡವೂ ನಿರಂತರ ಕಾರ್ಯ ನಿರ್ವಹಿಸಿದ್ದು, ಕುವೈಟ್ ನಲ್ಲಿ ಟಿಕೆಟ್ ಗೆ ನಗದು ಹಣ ಪಾವತಿಸುವ ಪ್ರಯಾಣಿಕರ ವಾಸಸ್ಥಳಕ್ಕೆ ಹೋಗಿ ಟಿಕೆಟ್ ಹಣವನ್ನು ಸಂಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್