ತಣ್ಣೀರುಬಾವಿ: ಸಮುದ್ರ ತಟದಲ್ಲಿ ಅರಣ್ಯೀಕರಣ!

ಅರಣ್ಯ ಇಲಾಖೆಯಿಂದ 4 ಸಾವಿರ ಸಸಿ ನೆಟ್ಟು ಪೋಷಣೆ, ಅಭಯಾರಣ್ಯಕ್ಕೆ ಒತ್ತು

Team Udayavani, Oct 21, 2020, 9:45 PM IST

ತಣ್ಣೀರುಬಾವಿ: ಸಮುದ್ರತಟದಲ್ಲಿ ಅರಣ್ಯೀಕರಣ!

ತಣ್ಣೀರುಬಾವಿ ತಟದಲ್ಲಿ ನೆಡಲಾಗಿರುವ ಗಿಡಗಳು.

ತಣ್ಣೀರುಬಾವಿ: ಕೂಳೂರಿನಿಂದ ತಣ್ಣೀರುಬಾವಿಗೆ ಸಂಚರಿಸುವ ಮಾರ್ಗದಲ್ಲಿ ಇಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಅಮೂಲ್ಯ ಗಿಡಗಳನ್ನು ಬೆಳಸಲಾಗುತ್ತಿದೆ. ಸುದೀರ್ಘ‌ ಬಾಳಿಕೆ ಬರುವ ಆಲದಮರ, ಅರಳಿಮರ, ಅಶ್ವತ್ಥ, ಹೊಳೆಹೊನ್ನೆ, ಅತ್ತಿ
ಮರಗಳನ್ನು ಬೆಳೆಸಲಾಗುತ್ತಿದೆ. ಸಮುದ್ರ ತಟದಲ್ಲಿ ಒತ್ತುವರಿ ತಡೆ, ಕಡಲ್ಕೊರೆತ ತಡೆ ಮತ್ತು ಸುರಕ್ಷತೆಯ ಜತೆಗೆ ಅರಣ್ಯೀಕರಣಕ್ಕೆ ಉಪಯೋಗವಾಗಲಿವೆ. ಈ ಹಿಂದೆ ನೆಟ್ಟಿದ್ದ ಗಾಳಿ ಮರಗಳು ಉರುಳಿ ಬೀಳುತ್ತಿದ್ದು, ಇದಕ್ಕೆ ಪರ್ಯಾಯವಾಗಿ ದೈತ್ಯ ಮರಗಳನ್ನು ನೆಡಲಾಗಿದೆ.

ಇಲಾಖೆಯು ತುಂಬಾ ಜವಾಬ್ದಾರಿಯಿಂದ ಈ ಸಸಿಗಳನ್ನು ಬೆಳೆಸುತ್ತಿದೆ. ಈ ಹಿಂದೆ ಇದ್ದ ಗಾಳಿ ಮರಗಳು ಕೇವಲ ಭೂ ಸವೆತ ತಡೆಗಟ್ಟುವಲ್ಲಿ ಸಫಲವಾದರೆ, ಇದೀಗ ವಿನೂತನ ಯೋಜನೆಯಿಂದ ಬೃಹತ್‌ ಮರಗಳ ಅರಣ್ಯ ಬೆಳೆಸುವ ಜತೆಗೆ ಸಮುದ್ರ ಕೊರೆತ ತಡೆಗಟ್ಟಲು, ನವಿಲು ಸಹಿತ ವಿವಿಧ ಹಕ್ಕಿಗಳಿಗೆ ಈ ಮರಗಳು ಆಶ್ರಯ ತಾಣವಾಗಲಿದೆ. ಅತ್ತಿ ಮರಗಳು ಹಕ್ಕಿಗಳಿಗೆ ಕಾಯಿ ನೀಡಿ ಆಹಾರದ ಮೂಲವಾಗಲಿದೆ. ಈ ಹೊಸ ಯೋಜನೆ ಇದೀಗ ತಣ್ಣೀರುಬಾವಿಯುದ್ದಕ್ಕೂ ಅಳ ವಡಿಸಿಕೊಳ್ಳಲಾಗಿದೆ. ಬೃಹತ್‌ ಮರಗಳ ನಾಟಿಯಿಂದ ಈ ಭಾಗದಲ್ಲಿ ಇರುವ ಅರಣ್ಯ ಭೂಮಿಯನ್ನು ಒತ್ತುವರಿಯಾಗದಂತೆ ಉಳಿಸಿಕೊಳ್ಳುವುದರ ಜತೆಗೆ ದೀರ್ಘ‌ಕಾಲದ ಅರಣ್ಯ ಬೆಳೆಸುವ ಗುರಿಯನ್ನು ಹೊಂದಲಾಗಿದೆ.
ನವಮಂಗಳೂರು ಬಂದರು ತಡೆ ಗೋಡೆಯ ಸುತ್ತಲೂ ಇದ್ದ ಕುರುಚಲು ಅರಣ್ಯ ಇದೀಗ ಅಭಿವೃದ್ಧಿಯ ಕಾರಣದಿಂದ ಕಂಡುಬರುತ್ತಿಲ್ಲ. ಇಲ್ಲಿದ್ದ

ಅಪಾರ ಸಂಖ್ಯೆ ನವಿಲುಗಳು, ಮುಳ್ಳು ಹಂದಿ, ಮುಂಗುಸಿ ಮೊದಲಾದ ಪ್ರಾಣಿ, ಪಕ್ಷಿಗಳು ತಣ್ಣೀರುಬಾವಿ ಸುತ್ತ ಇರುವ ಸೀಮಿತ ಅರಣ್ಯ ಪ್ರದೇಶದಲ್ಲಿ ಇರುವ ಸಂದಿಗ್ಧ ಸ್ಥಿತಿ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲೇ ಅರಣ್ಯ ಇಲಾಖೆ ಸರ್ವಋತು ಅರಣ್ಯ ಯೋಜನೆ ರೂಪಿಸಿ ಅಮೂಲ್ಯ ಸಸಿಗಳನ್ನು ನೆಟ್ಟು ಬೆಳೆಸುತ್ತಿದೆ. ಮುಂದಿನ ದಿನಗಳಲ್ಲಿ ತಣ್ಣೀರುಬಾವಿ ಬೆಂಗ್ರೆ ಸಮುದ್ರದಡದಲ್ಲಿ ಹಸುರುವಲಯದ ಜತೆಗೆ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸುವ ಅವಕಾಶ ದೊರಕಲಿದೆ.

4 ಸಾವಿರ ಗಿಡ ಬೆಳಸಲಾಗಿದೆ
ಅರಣ್ಯ ಇಲಾಖೆಯ ಭೂಮಿಯಲ್ಲಿ ಗಾಳಿ ಮರಕ್ಕಿಂತ ಪಕ್ಷಿಗಳಿಗೆ ಅನುಕೂಲವಾಗುವ ಮರಗಳನ್ನು ನೆಟ್ಟಿದ್ದೇವೆ. ಅಶ್ವತ್ಥ, ಅರಳಿ, ಆಲದ ಮರ ಮತ್ತಿತರ ಸಸಿಗಳು ಭೂ ಸವಕಳಿ ತಡೆಯುತ್ತವೆ. ಸುಮಾರು 4 ಸಾವಿರ ಗಿಡ ನೆಡಲಾಗಿದೆ. ಇದಕ್ಕೆ ಎಂಆರ್‌ಪಿಎಲ್‌ ಆರ್ಥಿಕ ಸಹಾಯ ಒದಗಿಸಿದೆ. ಸುತ್ತಲೂ ಫೆನ್ಸಿಂಗ್‌ ಅಳವಡಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು.
-ಶ್ರೀಧರ್‌, ಅರಣ್ಯಾಧಿಕಾರಿ ಮಂಗಳೂರು

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.