ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ಕೋವಿಡ್ ಬಳಿಕ ಕರಾವಳಿಯ ಕೈಗಾರಿಕೆ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ

Team Udayavani, Oct 1, 2020, 6:15 AM IST

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ಸಾಂದರ್ಭಿಕ ಚಿತ್ರ

ಮಂಗಳೂರು: ಲಾಕ್‌ಡೌನ್‌ನಿಂದ ಕೈಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ ಎಂಬ ಆತಂಕದ ನಡುವೆಯೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೊಸದಾಗಿ ವಿವಿಧ ಸ್ತರಗಳ 56 ಕೈಗಾರಿಕೆ ಘಟಕಗಳ ಆರಂಭಕ್ಕೆ ಅನುಮೋದನೆ ದೊರಕಿದೆ. ಇದರಿಂದ 2,045 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದ್ದು, ಸ್ಥಳೀಯ ಆರ್ಥಿಕತೆಗೂ ಶಕ್ತಿ ತುಂಬುವ ಆಶಯ ಮೂಡಿದೆ.

ದ.ಕ.ದಲ್ಲಿ 38 ಘಟಕ ಆರಂಭಕ್ಕೆ ಜಿಲ್ಲಾಡಳಿತದ ಏಕಗವಾಕ್ಷಿ ಸಮಿತಿ ಸಭೆ ಅನುಮೋದನೆ ನೀಡಿದೆ. ಮಂಗಳೂರಿನಲ್ಲಿ 24, ಬಂಟ್ವಾಳದಲ್ಲಿ 13, ಬೆಳ್ತಂಗಡಿಯಲ್ಲಿ 1 ಘಟಕ ಆರಂಭವಾಗಲಿದ್ದು, 1,701 ಜನರಿಗೆ ಉದ್ಯೋಗ ದೊರೆಯಲಿದೆ. ಜೈವಿಕ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆ, ಗೇರುಬೀಜ, ಪೈಪ್‌, ಸ್ಟೀಲ್‌, ಆಹಾರ ಉತ್ಪನ್ನ, ಸಾಗರ ಉತ್ಪನ್ನಕ್ಕೆ ಸಂಬಂಧಿಸಿದ ಕೈಗಾರಿಕೆ ಘಟಕಗಳು ಈ ಪಟ್ಟಿಯಲ್ಲಿವೆ.

ಉಡುಪಿ: 18 ಕೈಗಾರಿಕೆಗಳಿಗೆ ಅನುಮತಿ
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 15,280 ವಿವಿಧ ಕೈಗಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 1.17 ಲಕ್ಷ ಜನರು ಉದ್ಯೋಗ ಪಡೆದಿದ್ದಾರೆ. ಹೊಸದಾಗಿ 18 ಘಟಕಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. 344 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಪೈಕಿ ಕಾಪು ತಾಲೂಕಿನಲ್ಲಿ 13 (302 ಉದ್ಯೋಗಗಳು) ಹಾಗೂ ಕಾರ್ಕಳ ತಾಲೂಕಿನಲ್ಲಿ 5 (42 ಉದ್ಯೋಗಗಳು) ಘಟಕಗಳು ಕಾರ್ಯನಿರ್ವಹಿಸಲಿವೆ.

ಭೂಮಿ: ಮಂಗಳೂರಿನಲ್ಲಿ ಅಧಿಕ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ 6,654.4 ಎಕರೆ, ಪುತ್ತೂರಿನಲ್ಲಿ 21.40 ಎಕರೆ, ಬಂಟ್ವಾಳದಲ್ಲಿ 206.13 ಎಕರೆ, ಮೂಡುಬಿದಿರೆಯಲ್ಲಿ 9.88 ಎಕರೆ, ಬೆಳ್ತಂಗಡಿಯಲ್ಲಿ 0.9 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 7.11 ಎಕರೆ, ಬ್ರಹ್ಮಾವರದಲ್ಲಿ 40 ಎಕರೆ, ಕಾಪುವಿನಲ್ಲಿ 1548.75 ಎಕರೆ ಮತ್ತು ಉಡುಪಿಯಲ್ಲಿ 73.80 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ.

ದ.ಕ.ದಲ್ಲಿ 26 ಬೃಹತ್‌ ಕೈಗಾರಿಕೆಗಳು
ದ.ಕ. ಜಿಲ್ಲೆಯಲ್ಲಿ 26 ಬೃಹತ್‌ ಕೈಗಾರಿಕೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎಂಆರ್‌ಪಿಎಲ್‌ನಲ್ಲಿ ಗರಿಷ್ಠ 1,840 ಉದ್ಯೋಗಿಗಳಿದ್ದಾರೆ. ಉಳಿದಂತೆ ಎಸ್‌ಇಝಡ್‌ನ‌ಲ್ಲಿರುವ ಗಡ್ರೆ ಮೆರೈನ್‌ ಎಕ್ಸ್‌ಪೋರ್ಟ್‌ನಲ್ಲಿ 1,263, ಗಂಜಿಮಠದ ಬಿಗ್‌ಬ್ಯಾಗ್‌ ಇಂಟರ್‌ನ್ಯಾಶನಲ್‌ನಲ್ಲಿ 1,054 ಮಂದಿ ಉದ್ಯೋಗದಲ್ಲಿದ್ದಾರೆ.

ಆರ್ಥಿಕತೆಯಲ್ಲಿ ಸಂಚಲನದ ಆಶಾಭಾವ
ಹೊಸ ಕೈಗಾರಿಕೆ ಘಟಕಗಳು ಆರಂಭವಾಗುವುದರಿಂದ ಹೊಸ ಉದ್ಯೋಗ ಸೃಷ್ಟಿ, ಆರ್ಥಿಕತೆ ಚೇತರಿಕೆ ಒಂದೆಡೆಯಾದರೆ ಪರೋಕ್ಷ ಉದ್ಯೋಗ ಸೃಷ್ಟಿ, ವಹಿವಾಟುಗಳ ಪ್ರಯೋಜನ ಇನ್ನೊಂದೆಡೆ ಉಂಟಾಗುತ್ತದೆ. ಇದು ಒಟ್ಟಾರೆಯಾಗಿ ವ್ಯವಹಾರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಬಲ್ಲುದು. ಆಯಾ ಕ್ಷೇತ್ರದ ಘಟಕಗಳಿಂದ ಕಚ್ಚಾ ವಸ್ತು ಖರೀದಿ, ತಯಾರಾದ ಉತ್ಪನ್ನಗಳ ಮಾರಾಟ/ ರಫ್ತಿನಿಂದಲೂ ಆರ್ಥಿಕತೆ ಮತ್ತು ನಗದು ಹರಿವಿಗೆ ಕೊಡುಗೆ ನೀಡುತ್ತದೆ. ಹೊಸ ಘಟಕಗಳಿಗೆ ಅನುಮತಿ ಪಡೆದವರು ಆದಷ್ಟು ಶೀಘ್ರ ಆರಂಭಕ್ಕೆ ಮುಂದಾಗಬೇಕಿದೆ.

ದಕ್ಷಿಣ ಕನ್ನಡದಲ್ಲಿ 38 ಮತ್ತು ಉಡುಪಿ ಜಿಲ್ಲೆಯಲ್ಲಿ 18 ಹೊಸ ಕೈಗಾರಿಕೆ ಘಟಕಗಳನ್ನು ಆರಂಭಿಸುವಂತೆ ದ.ಕ.- ಉಡುಪಿ ಜಿಲ್ಲಾಡಳಿತದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ದೊರಕಿದೆ. ಅನುಮೋದನೆ ಪಡೆದವರು ಮುಂದೆ ವಿವಿಧ ವಲಯಗಳ ಅನುಮತಿ ಪಡೆದು ಸೂಕ್ತ ಸ್ಥಳದಲ್ಲಿ ಕೈಗಾರಿಕೆ ಆರಂಭಿಸಬೇಕಿದೆ.
– ಗೋಕುಲ್‌ದಾಸ್‌ ನಾಯಕ್‌, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಕೇಂದ್ರ, ದ.ಕ.-ಉಡುಪಿ

 ದಿನೇಶ್‌ ಇರಾ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.