Mangaluru: ನೀರಿನ ಸಮಸ್ಯೆ… ಚುನಾವಣ ಆಯೋಗಕ್ಕೆ ಇಲಾಖೆ ಮೊರೆ

ತುರ್ತಾಗಿ 1 ಕೋಟಿ ರೂ. ಯೋಜನೆ ಅನುಮೋದನೆ ನಿರೀಕ್ಷೆ

Team Udayavani, Apr 23, 2023, 7:45 AM IST

ನೀರಿನ ಸಮಸ್ಯೆ: ಚುನಾವಣ ಆಯೋಗಕ್ಕೆ ಇಲಾಖೆ ಮೊರೆ

ಮಂಗಳೂರು: ಈ ಬೇಸಗೆಯಲ್ಲಿ ಕಾಣಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಎಲ್ಲ ಜಿಲ್ಲೆಗಳಿಗೆ ತಲಾ 1 ಕೋಟಿ ರೂ. ನೆರವು ನೀಡುವುದಕ್ಕೆ ನೀತಿಸಂಹಿತೆಯಿಂದ ವಿನಾಯಿತಿ ನೀಡುವಂತೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಚುನಾವಣ ಆಯೋಗದ ಮೊರೆ ಹೋಗಿದೆ.

ಯಾವುದೇ ಹೊಸ ಕೆಲಸವನ್ನು ಚುನಾವಣ ನೀತಿಸಂಹಿತೆ ಜಾರಿಯಲ್ಲಿರುವಾಗ ನಡೆಸುವುದಕ್ಕೆ ಅನುಮತಿ ಇರುವುದಿಲ್ಲ. ಆದರೆ ಚುನಾವಣೆ ಸಂದರ್ಭ ದಲ್ಲೇ ಬೇಸಿಗೆಯ ಝಳ ಹೆಚ್ಚಿದ್ದು ನೀರಿನ ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ. ತುರ್ತು ಕೆಲಸ ಕೈಗೊಳ್ಳದೆ ಹೋದರೆ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಚುನಾವಣ ಆಯೋಗದ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚು ಆಗುತ್ತಿರುವುದನ್ನು ಗಮನಿಸಿ ಪ್ರಾರಂಭದಲ್ಲಿ ಜಿ.ಪಂ. ಸಿಇಒ ಸರಕಾರದ ಗಮನಕ್ಕೆ ತಂದು, ನೀತಿಸಂಹಿತೆಯಿಂದ ಕುಡಿಯುವ ನೀರಿನ ವಿಚಾರಗಳಿಗೆ ವಿನಾಯಿತಿ ನೀಡುವಂತೆ ಕೋರಿದ್ದರು. ರಾಜ್ಯದ ಹಲವು ಕಡೆಯಿಂದ ಇದೇ ರೀತಿಯ ಮನವಿ ಇದ್ದ ಹಿನ್ನೆಲೆಯಲ್ಲಿ ಕುಡಿಯುವ ನೀರು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಚುನಾವಣ ಆಯೋಗದ ಗಮನಕ್ಕೆ ಇದನ್ನು ತಂದಿದ್ದಾರೆ. ಆಯೋಗ ಅನುಮತಿ ನೀಡುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೊಸ ಬೋರ್‌ವೆಲ್‌ ಕೊರೆಯುವಂತಿಲ್ಲ
ರಾಜ್ಯಾದ್ಯಂತ ನೀರಿನ ಸಮಸ್ಯೆ ಇರುವ ಜಿಲ್ಲೆಗಳಿಗೆ 1 ಕೋಟಿ ರೂ. ವೆಚ್ಚಕ್ಕೆ ಕ್ರಿಯಾಯೋಜನೆ ಕಳುಹಿಸುವಂತೆ ಸರಕಾರ ಸೂಚಿಸಿತ್ತು. ಈಗಾಗಲೇ ದ.ಕ. ಜಿಲ್ಲೆಯಿಂದ ಕ್ರಿಯಾಯೋಜನೆ ಹೋಗಿದೆ.

ಎಲ್ಲೆಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಗುರುತಿಸಿ ಸೂಕ್ತವೆನಿಸುವ ಕೆಲಸವನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ. ಬತ್ತಿದ ಬೋರ್‌ವೆಲ್‌ ಫÉಶ್‌ ಮಾಡುವುದು, ಆಳಮಾಡುವುದು, ಬಾವಿಯಿಂದ ಪಂಪ್‌ ಮಾಡಿಸುವುದು, ಖಾಸಗಿಯವರು ಬೋರ್‌ವೆಲ್‌ನಿಂದ ನೀರು ಕೊಡುವುದಾದರೆ ಅವರಿಗೆ 12 ಸಾವಿರ ರೂ. ಮಾಸಿಕ ಬಾಡಿಗೆ ಕೊಟ್ಟು ನೀರು ಪಡೆದುಕೊಳ್ಳುವುದು ಇತ್ಯಾದಿಗೆ ಅನುಮತಿ ಇದೆ. ಆದರೆ ಯಾವುದೇ ಕಾರಣಕ್ಕೂ ಹೊಸ ಬೋರ್‌ವೆಲ್‌ ಕೊರೆಯುವುದಕ್ಕೆ ಇದರಲ್ಲಿ ಅನುಮತಿ ಇಲ್ಲ. ಯಾವುದೇ ಪೂರಕ ಕ್ರಮ ಅಸಾಧ್ಯವೆಂದಾದರೆ ಕೊನೆಯ ಹಂತದಲ್ಲಿ ಟ್ಯಾಂಕರ್‌ ಮೂಲಕ ಜನವಸತಿ ಪ್ರದೇಶಗಳಿಗೆ ನೀರು ಕೊಡಬಹುದು.

ಈಗಾಗಲೇ ಬಾಳೆಪುಣಿ, ನರಿಂಗಾನ, ತಲಪಾಡಿಗಳಲ್ಲಿ ಹಲವು ಪ್ರದೇಶಗಳಲ್ಲಿ ನೀರು ಪೂರ್ತಿ ಬತ್ತಿ ಹೋದ ಹಿನ್ನೆಲೆಯಲ್ಲಿ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಲಾಗುತ್ತಿದೆ.

ನದಿ ಬತ್ತಿ ಬಹುಗ್ರಾಮ ಯೋಜನೆಗಳಿಗೂ ಸಮಸ್ಯೆ
ನೇತ್ರಾವತಿ, ಫಲ್ಗುಣಿಯಲ್ಲಿ ನೀರು ಬತ್ತಿರುವುದರಿಂದಾಗಿ ಸರಪಾಡಿ, ಸಂಗಬೆಟ್ಟು, ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ(ಎಂವಿಎಸ್‌)ಗಳಿಗೂ ನೀರಿಲ್ಲವಾಗಿದೆ. ನದಿಯ ಕೆಲವು ಆಳವಾದ ಹೊಂಡಗಳಲ್ಲಿ ನೀರನ್ನು ಗುರುತಿಸಲಾಗಿದ್ದು, ಪಂಪ್‌ ಮಾಡಿ ಎಂವಿಎಸ್‌ನ ಜಾಕ್‌ವೆಲ್‌ಗ‌ಳಿಗೆ ತರಲಾಗುತ್ತಿದೆ. ಅಗತ್ಯವಿದ್ದರೆ ಹತ್ತಿರದ ಇತರ ಅಣೆಕಟ್ಟುಗಳಿಂದ ನೀರು ಪಡೆಯಲಾಗುತ್ತದೆ.

ಇದನ್ನು ರೇಷನಿಂಗ್‌ ಮಾಡಿ ಕೊಂಡು ನೀರು ಗ್ರಾಮಗಳಿಗೆ ತಲಪಿಸಲಾಗುತ್ತಿದೆ.
ಇದಕ್ಕಾಗಿ ಹೆಚ್ಚುವರಿ ಪೈಪ್‌ಲೈನ್‌ ಹಾಕಲಾಗಿದೆ, ಮೋಟಾರ್‌ಪಂಪ್‌ ಬಳಸಿಕೊಂಡು, ಸರಪಾಡಿಯಲ್ಲಿನ ಹೊಂಡಗಳಿಂದ 2.5 ಎಂಎಲ್‌ಡಿ ನೀರು, ಸಂಗಬೆಟ್ಟಿನ ನದಿ ಹೊಂಡಗಳಿಂದ 1.5 ಎಂಎಲ್‌ಡಿ ನೀರು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ನರೇಂದ್ರ ಬಾಬು.

1 ಕೋಟಿ ರೂ. ವೆಚ್ಚದ ವಿವಿಧ ಕೆಲಸಗಳಿಗೆ ಕ್ರಿಯಾಯೋಜನೆ ಮಾಡಿ ಸರಕಾರಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಇಷ್ಟೇ ಅಲ್ಲದೆ 15ನೇ ಹಣಕಾಸು ಆಯೋಗದ ಹಣವನ್ನು ಬಳಸಿಕೊಂಡು ಗ್ರಾ.ಪಂ.ಗಳು ಕುಡಿಯುವ ನೀರಿನ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಅದರಲ್ಲಿ ಬೋರ್‌ವೆಲ್‌ ಹೊಸದಾಗಿ ಕೊರೆಯಲೂ ಸಾಧ್ಯವಿದೆ.
– ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.