ನೂತನ ಡಿಸಿ ಸಂಕೀರ್ಣ ಈ ವರ್ಷವಾದರೂ ಸಾರ್ವಜನಿಕರಿಗೆ ಲಭ್ಯವಾಗುವುದೇ?
2ನೇ ಹಂತದ ಕಾಮಗಾರಿಗೆ ಅನುದಾನದ ನಿರೀಕ್ಷೆ
Team Udayavani, May 22, 2023, 3:31 PM IST
ಪಡೀಲ್: ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ಅನುಕೂಲವಾಗುವಂತೆ ನಗರದ ಪ್ರಮುಖ ಭಾಗದಲ್ಲಿ ಜಿಲ್ಲಾಡ ಳಿತದ ಸಂಕೀರ್ಣ ಇರಬೇಕೆಂಬ ಉದ್ದೇಶ ದಿಂದ ಪಡೀಲ್ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾ
ಧಿಕಾರಿ ಸಂಕೀರ್ಣ ಈ ವರ್ಷ ವಾದರೂ ಸಾರ್ವಜನಿಕ ರಿಗೆ ಮುಕ್ತವಾಗಲಿ ದೆಯೇ ಎಂಬ ನಿರೀಕ್ಷೆ ಮತ್ತೆ ಗರಿಗೆದರಿದೆ.
ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಅನುದಾನದ ಕೊರತೆಯಿಂದ ಪಾಳು ಬಿದ್ದಂತಿರುವ ಜಿಲ್ಲಾಧಿಕಾರಿ ಸಂಕೀರ್ಣ ಕಟ್ಟಡದ ಎರಡನೇ ಹಂತದ ಕಟ್ಟಡದ ಫಿನಿಶಿಂಗ್, ಎರಡು ಲಿಫ್ಟ್ ಅಳವಡಿಕೆ, ಸಭಾಂಗಣದಲ್ಲಿ ಎಸಿ ಮತ್ತು ಪಿಠೊಪಕರಣ, ಕೇಬಲ್ ನೆಟ್ವರ್ಕ್, ಪೈಂಟಿಂಗ್, ಕಟ್ಟಡದ ಪಕ್ಕದ ಮಳೆ ನೀರು ಹರಿಯುವ ಚರಂಡಿ ಅಭಿವೃದ್ಧಿ, ಆವರಣ ಗೋಡೆ, ಸಂಪೂರ್ಣ ಇಂಟರ್ಲಾಕ್ ಅಳವಡಿಸಿ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಇದಕ್ಕಾಗಿ ಸುಮಾರು 29 ಕೋ.ರೂ. ಅಂದಾಜಿಸಿ, ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಯಿಂದ ಅನುಮೋದನೆ ದೊರೆಯಬೇಕಿದೆ.
2014ರಲ್ಲಿ ದೊರಕಿತ್ತು ಆಡಳಿತಾತ್ಮಕ ಮಂಜೂರಾತಿ!
ಅಂದ ಹಾಗೆ, ನೂತನ ಜಿಲ್ಲಾಧಿಕಾರಿ ಕಟ್ಟಡವನ್ನು ಪಡೀಲ್ನಲ್ಲಿ ನಿರ್ಮಾಣ ಮಾಡುವ ಕುರಿತಂತೆ 2014ರಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. ಆದರೆ ಅರಣ್ಯ ಇಲಾಖೆಯಿಂದ ಜಮೀನು ಹಸ್ತಾಂತರ, ಆ ಜಾಗದಲ್ಲಿದ್ದ ಮರ ಕಡಿಯುವುದನ್ನು ವಿರೋಧಿಸಿ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋದ ಕಾರಣ ಪ್ರಕ್ರಿಯೆಗಳಿಗೆ ಸುಮಾರು ನಾಲ್ಕು ವರ್ಷಗಳ ಕಾಲ ಬ್ರೇಕ್ ಬಿದ್ದಿತ್ತು. ಚೆನ್ನೈಯ ಹಸುರು ಪೀಠದಲ್ಲಿ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ 2018ರ ಮಾರ್ಚ್ನಲ್ಲಿ ಗೃಹ ನಿರ್ಮಾಣ ಮಂಡಳಿಯು ಕಾಮಗಾರಿ ಆರಂಭಿಸಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದರೂ 2021ರ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿತ್ತು.
ಅನುಮೋದನೆ ವಿಳಂಬ
ಪ್ರಥಮ ಹಂತದಲ್ಲಿ ಸುಮಾರು 55 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆದಿದ್ದು, ಬಳಿಕ ಮತ್ತೆ 29 ಕೋಟಿ ರೂ.ಗಳ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದರೂ ಅನುಮೋದನೆ ವಿಳಂಬವಾಗಿ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈಗಾಗಲೇ ಕಟ್ಟಡಕ್ಕಾಗಿ ವ್ಯಯ ಮಾಡಲಾಗಿರುವ ಕೋಟಿಗಟ್ಟಲೆ ಜನರ ತೆರಿಗೆ ಹಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೂತನ ಸರಕಾರ ಗಮನ ಹರಿಸಬೇಕಾಗಿದೆ.
2.26 ಲಕ್ಷ ಚದರ ಅಡಿ ಕಟ್ಟಡ
ಒಟ್ಟು 2.26 ಲಕ್ಷ ಚದರ ಅಡಿ ಕಟ್ಟಡದಲ್ಲಿ ಕಂದಾಯ ಇಲಾಖೆ ಕಚೇರಿಗಳ ಜತೆಯಲ್ಲಿ ಸುಮಾರು 38 ಇಲಾಖೆಗಳ ಕಚೇರಿಗಳು ಇಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲಿವೆ.ಮಿನಿ ಸಭಾಂಗಣ, ಜಿಲ್ಲಾಧಿಕಾರಿ ಕೋರ್ಟ್ ಹಾಲ್, ಸಚಿವರು, ಸಂಸದರಿಗೆ ಕಚೇರಿ, ಕ್ಯಾಂಟಿನ್ ಮತ್ತಿತರ ಸೌಲಭ್ಯವಿದೆ. ಸುಮಾರು 200 ವಾಹನ ಪಾರ್ಕಿಂಗ್ ವ್ಯವಸ್ಥೆಗೂ ಸ್ಥಳಾವಕಾಶ ಇರಲಿದೆ.
ಅತೀ ಶೀಘ್ರದಲ್ಲೇ ಸಂಬಧಪಟ್ಟವರ ಸಭೆ
2014ರಲ್ಲಿ ನಮ್ಮ ಸರಕಾರದಲ್ಲಿಯೇ ಈ ಯೋಜನೆಯ ಪ್ರಕ್ರಿಯೆಗಳು ಆರಂಭವಾಗಿತ್ತು. ಕಳೆದ ಅವಧಿಯಲ್ಲಿ ಅಧಿಕಾರಿಗಳು, ಸರಕಾರದ ನಡುವಿನ ಇಚ್ಛಾಶಕ್ತಿಯ ಕೊರತೆಯಿಂದ ನಿರ್ಲಕ್ಷ್ಯ ವಹಿಸಲಾ ಯಿತು. ಈಗ, ಅತೀ ಶೀಘ್ರದಲ್ಲೇ ಸಂಬಧಪಟ್ಟವರ ಸಭೆ ಕರೆದು ಯಾವೆಲ್ಲಾ ಕಾಮಗಾರಿ ಬಾಕಿ ಇದೆ, ಮುಂದಿನ ನಿರ್ವಹಣೆ ಸಹಿತ ಸರಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲಾಧಿಕಾರಿ ಸಂಕೀರ್ಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು.
-ಯು.ಟಿ. ಖಾದರ್, ಶಾಸಕರು
ಅನುಮೋದನೆ ದೊರೆತಾಕ್ಷಣ ಕಾಮಗಾರಿ
ಪಡೀಲ್ನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡು, ದ್ವಿತೀಯ ಹಂತದ ಕಾಮಗಾರಿಗಳಿಗೆ ಅಗತ್ಯವಾದ ಅನುದಾನಕ್ಕೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತಾಕ್ಷಣ ಕಾಮಗಾರಿ ನಡೆಯಲಿದೆ.
-ರವಿಕುಮಾರ್ ಎಂ.ಆರ್., ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!